ಕೋಡಿಹಳ್ಳಿಯ ಸ.ಹಿ.ಪ್ರಾ ಶಾಲೆಯಲ್ಲಿ ಅದ್ದೂರಿಯಾಗಿ 78 ನೇ. ಸ್ವಾತಂತ್ರ್ಯೋತ್ಸವ ಆಚರಣೆ.
ಚಳ್ಳಕೆರೆ ಆ.15

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡಿಹಳ್ಳಿಯಲ್ಲಿ ಇಂದು 78 ನೇಯ ಸಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ದಿನದ ಧ್ವಜಾರೋಹಣ ವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರು ಆದ ಶ್ರೀಯುತ ನಾಗರಾಜ್ .ಡಿ ನೆರವೇರಿಸಿದರು.ನಂತರ ರಾಷ್ಟ್ರ ಗೀತೆಯನ್ನು ಹಾಡುವ ಮೂಲಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಾಷ್ಟ್ರ ಧ್ವಜಕ್ಕೆ ಗೌರವವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಆದ ಜಗನ್ನಾಥ್, ರತ್ನಮ್ಮ ಶಿಕ್ಷಕಿಯರು, ಸುಶೀಲಮ್ಮ ಶಿಕ್ಷಕಿಯರು, ಬಸವರಾಜ ಜಿ.ಟಿ ಶಿಕ್ಷಕರು, ಸುಪ್ರಿಯಾ ಶಿಕ್ಷಕಿಯರು ಹಾಜರಿದ್ದರು. ಶಾಲಾ ಮಕ್ಕಳು, ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ರೇವಣ್ಣ.ಎಸ್.ಟಿ ಮತ್ತು ದ್ರಾಕ್ಷಾಯಿಣಮ್ಮ, ಹಾಗೂ ಎಸ್.ಡಿ.ಎಂ.ಸಿ ಉಪಾಧ್ಯಕ್ಷರು ಆದ ಶಿವಾರೆಡ್ಡಿ ಕೆ ಬಿ, ಸದಸ್ಯರಾದ ವಿಜಯ ಕುಮಾರ್.ಡಿ ಮತ್ತು ರುದ್ರಮುನಿ ಹಾಗೂ ಓಬಸ್ವಾಮಿ ಹಾಜರಿದ್ದರು.

ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯನ್ನು ವಿವಿಧ ಸ್ವತಂತ್ರ ಘೋಷಣೆ ಗಳೊಂದಿಗೆ ಮಾಡಲಾಯಿತು.ನಂತರ ವೇದಿಕೆ ಕಾರ್ಯಕ್ರಮ ದಲ್ಲಿ ಪ್ರಾರ್ಥನೆಯನ್ನು 7 ನೇಯ ತರಗತಿ ವಿದ್ಯಾರ್ಥಿಗಳಾದ ಕುಮಾರಿ, ಶಾರದಾ ಮತ್ತು ಸಂಧ್ಯಾ ರವರು ನಡೆಸಿ ಕೊಟ್ಟರು, ನಂತರ ಶಾಲೆಯ ಮುಖ್ಯೋಪಾಧ್ಯಾಯರಾದ ಜಗನ್ನಾಥ್ ಸರ್ ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಈ ಸ್ವಾತಂತ್ರದ ಹಿಂದೆ ಅದೆಷ್ಟು ಸ್ವಾತಂತ್ರ್ಯ ಹೋರಾಟಗಾರರ ಜೀವಗಳ ಶ್ರಮ, ಬೆವರು ಮತ್ತು ಈ ಭೂಮಿ ತಾಯಿಗೆ ಜೀವಗಳ ಬಲಿದಾನದ ಪ್ರತಿ ಫಲದ ಸಂಕೇತವಾಗಿ ನಾವು ಇಂದು 78 ನೆಯ ಸ್ವಾತಂತ್ರ್ಯೋತ್ಸವನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ, ಹಾಗೆ ಎಲ್ಲಾ ವಿದ್ಯಾರ್ಥಿಗಳು ದೇಶ ಭಕ್ತಿ, ಒಳ್ಳೆಯ ಸಂಸ್ಕಾರ, ದೇಶದ ಮಹಾನ್ ವ್ಯಕ್ತಿಗಳಾದ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಡಾ.ಬಿ.ಆರ್ ಅಂಬೇಡ್ಕರ್, ಭಗತ್ ಸಿಂಗ್, ಒನಕೆ ಓಬವ್ವರಂತಹ ತತ್ವ ಸಿದ್ಧಾಂತ ಹಾಗೂ ಅವರ ಆದರ್ಶ ಮಾರ್ಗದಲ್ಲಿ ಎಲ್ಲರೂ ನಡೆಯೋಣ ಎಂದು ತಿಳಿಸಿದರು.ನಂತರ ಶಿಕ್ಷಕರ ಭಾಷಣ ಮತ್ತು ಮಕ್ಕಳ ಭಾಷಣ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು. ಸುಪ್ರಿಯಾ ಶಿಕ್ಷಕಿಯರು ನಿರೂಪಣೆ ಮಾಡಿದರು,ಬಸವರಾಜ್.ಜಿ.ಟಿ ಶಿಕ್ಷಕರು ಸ್ವಾಗತಿಸಿದರು, ರತ್ನಮ್ಮ ಶಿಕ್ಷಕಿಯರು ವಂದನಾರ್ಪಣೆ ಸಲ್ಲಿಸಿದರು, ನಂತರ ಭಾಗವಹಿಸಿರುವ ಎಲ್ಲಾ ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ, ಊಟದ ವ್ಯವಸ್ಥೆ ಮಾಡಲಾಗಿತ್ತು, ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ.