ಹುನಗುಂದ ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ಚಟ್ನಿಹಾಳ ಮಾರ್ಗವಾಗಿ ಕೋಡಿಹಾಳ ಮಾರ್ಗ ಬಸ್ ಸಂಚಾರಕ್ಕೆ ಶಾಸಕರಲ್ಲಿ ಮನವಿ.
ಹುನಗುಂದ ಆ.28

ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಚಟ್ನಿಹಾಳ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಹುನಗುಂದ ಪಟ್ಟಣಕ್ಕೆ ತೆರಳು ಬಯಸುವ ಎಲ್ಲಾ ಗ್ರಾಮಸ್ಥರಿಗೆ ತುಂಬಾ ತೊಂದರೆ ಯಾಗುತ್ತಿದ್ದು. ಅವರು ಇಲಕಲ್ಲ ಘಟಕದ ಬಸ್ಸಿನಲ್ಲಿ ಪ್ರಯಾಣಿಸಿ ಇಲಕಲ್ಲಿಗೆ ತಲುಪಿ ನಂತರ ಹುನಗುಂದ ಪಟ್ಟಣಕ್ಕೆ ತೆರಳ ಬೇಕಾದ ಅನಿವಾರ್ಯತೆ ಎದುರಾಗಿದ್ದು. ಹುನಗುಂದ ಘಟಕ ದಿಂದ ಅಮರಾವತಿ ನಿಡಸನೂರ ಮಾರ್ಗವಾಗಿ ಕರಡಿ ಮತ್ತು ಕೋಡಿಹಾಳ ಗ್ರಾಮಕ್ಕೆ ತೆರಳುವ ಬಸ್ಸುಗಳನ್ನು ನಿಡಸನೂರಿಂದ ಕೇವಲ 2 ಕೀ.ಮಿ ಅಂತರದಲ್ಲಿರುವ ಚಟ್ನಿಹಾಳ ಗ್ರಾಮಕ್ಕೆ ವಾಯ್ ಮಾಡಿ ಕೊಂಡು ಹೋಗುವಂತೆ ಕೋರಿ ಇಂದು ಚಟ್ನಿಹಾಳ ಗ್ರಾಮಸ್ಥರು ಮತ್ತು ಕರ್ನಾಟಕ ಯುವ ರಕ್ಷಣಾ ವೇದಿಕೆಯ ಸಹ ಯೋಗದಲ್ಲಿ ಹುನಗುಂದ ಮತ ಕ್ಷೇತ್ರದ ಜನಪ್ರಿಯ ಶಾಸಕರಿಗೆ ಮತ್ತು ಹುನಗುಂದ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಂಬಲದಿನ್ನಿ ಗ್ರಾಮ ಪಂಚಾಯತ ಹಾಲಿ ಉಪಾಧ್ಯಕ್ಷರಾದ ಶ್ರೀ ಗ್ಯಾನಪ್ಪ ಮೂಲಿಮನಿ, ಸದಸ್ಯರಾದ ಸೋಮಪ್ಪ ಬೇಗಾರ್ ಮಾಜಿ ಸದಸ್ಯರಾದ ಗ್ಯಾನಪ್ಪ ಮೂಲಿಮನಿ, ರಮೇಶ್ ಪೂಜಾರಿ, ಮತ್ತು ಮಾಜಿ ಪಿಕೆಪಿಎಸ್ ಸದಸ್ಯರಾದ ಶ್ರೀ ರಾಮಪ್ಪ ಕಮರಿ ಮತ್ತು ಚಟ್ನಿಹಾಳ ಗ್ರಾಮದ ಮುಖಂಡರಾದ ಶ್ರೀ ಬಸವರಾಜ ಪೂಜಾರಿ, ರಾಮಪ್ಪ ತಳವಾರ್, ಶರಣಪ್ಪ ಕುರಿ, ಮತ್ತು ಕರ್ನಾಟಕ ಯುವರಕ್ಷಣಾ ವೇದಿಕೆಯ ತಾಲ್ಲೂಕಾ ಉಪಾಧ್ಯಕ್ಷರಾದ ಶ್ರೀ ನಿರುಪಾದಿ ನಾಯಕ್ ಮತ್ತು ತಾಲ್ಲೂಕಾ ಕಾರ್ಯದರ್ಶಿಗಳಾದ ಯಮನೂರ್ ಪುಣೆ ಅವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.