ಗಾಯಗೊಂಡ ಬಡ ಕುಟುಂಬದ ಯುವಕನ ಚಿಕಿತ್ಸೆಗೆ ದಲಿತರಿಂದ ನೆರವು.
ದಾಸರೋಬನಹಳ್ಳಿ ಫೆಬ್ರುವರಿ.16

ಇಲ್ಲಿನ ಎರಡನೇ ವಾರ್ಡಿನ ಅಂಬೇಡ್ಕರ್ ಕಾಲೋನಿಯ ಪೂಜಾರಿ ರಮೇಶಪ್ಪನ ಪುತ್ರ ಶ್ರೀಧರ ಯುವಕ ಚಿಕ್ಕ ಕುಂಬಳಗುಂಟೆ ಗ್ರಾಮಕ್ಕೆ ಬೈಕ್ನಲ್ಲಿ ಹೋಗಿ ವಾಪಸ್ ಬರುವಾಗ ದಾಸರೋಬನಹಳ್ಳಿ ರಸ್ತೆಯಲ್ಲಿ ಬಿದ್ದಿದ್ದು, ತಲೆಗೆ ತೀವ್ರ ಗಾಯವಾಗಿ ರಕ್ತ ಸ್ರಾವವಾಗಿದೆ. ಆಗ ನೋಡಿ ಕೊಂಡ ಕೆಲವರು ವಿಷಯ ತಿಳಿಸಿದ್ದರಿಂದ ತಕ್ಷಣವೇ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿದ್ದು, 3 ಲಕ್ಷ ರೂ. ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದರಿಂದ ಕಡು ಬಡತನ ಇರುವ ಪೂಜಾರಿ ರಮೇಶ್ ಅವರ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಕಾನಾ ಹೊಸಹಳ್ಳಿಯ ದಲಿತ ಸಂಘದ ಪದಾಧಿಕಾರಿಗಳು, ಯುವಕರು, ಕೀರ್ತನಾ, ನೀಲಾಂಬರಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮಹಿಳಾ ಸ್ವ ಸಹಾಯ ಸಂಘದ ಪದಾಧಿಕಾರಿಗಳು ತಮ್ಮ ಕೈಲಾದಷ್ಟು ಹಣ ಸಹಾಯ ಮಾಡಿದ್ದರಿಂದ 1,06,800 ರೂ. ಸಂಗ್ರಹವಾಗಿದೆ. ಈ ಹಣವನ್ನು ಗಾಯಾಳು ಶ್ರೀಧರ ಅವರ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಜೈ ಭೀಮ್ ಯುವಕ ಸಂಘದ ಪದಾಧಿಕಾರಿಗಳು ಎನ್.ತಿಪ್ಪೇಶ, ಎನ್.ಎಂ.ರಾಘವೇಂದ್ರ, ಗ್ರಾಪಂ ಬಿಲ್ ಕಲೆಕ್ಟರ್ ಪಿ.ಶಶಿಕುಮಾರ್, ಎಸ್.ಎಂ.ಮಂಜುನಾಥ, ಎನ್.ನಾಗರಾಜ, ಡಿ.ರಮೇಶ್, ಎಂ.ಚೌಡಪ್ಪ ಹಾಗೂ ಗ್ರಾ.ಪಂ ಸದಸ್ಯರು ಸಿದ್ದಪ್ಪ ಸೇರಿ ಮಹಿಳಾ ಸ್ವ ಸಹಾಯ ಸಂಘದ ಪದಾಧಿಕಾರಿಗಳು, ದಲಿತ ಸಮುದಾಯದವರು, ಯುವಕರು ಹಣವನ್ನು ಸಂಗ್ರಹಿಸಿದ್ದಾರೆ.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ಕೆ.ವೀರೇಶ್.ಕಾನಾ ಹೊಸಹಳ್ಳಿ