ತಿಪ್ಪಣ್ಣ ನಾಯಕ ಹರವಿ ಅವರ ಮಾರ್ಗದರ್ಶನ, ನೀರಮಾನ್ವಿ ಗ್ರಾಮದ ಯೋಧರ ಪ್ರೇರಣೆ – ಸಹಕಾರಿ ಆಯಿತೆಂದ ವೆಂಕಟೇಶ್.

ಹರವಿ ಡಿ.15

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹರವಿ ಗ್ರಾಮದ ಶ್ರೀ ಯಲ್ಲಪ್ಪ ಪೆದರೆಡ್ಡಿ ಹಾಗೂ ಶ್ರೀಮತಿ ಶಂಕ್ರಮ್ಮ ಇವರ ಐದನೇ, ಸುಪುತ್ರರಾಗಿರುವ ವೆಂಕಟೇಶ್ ನಾಯಕ 2003 ರಲ್ಲಿ ಹರವಿ ಗ್ರಾಮದಲ್ಲಿ ಜನಿಸಿದರು 2008 ರಿಂದ 2017 ರವರೆಗೆ ಸ್ವ ಗ್ರಾಮ ಹರವಿಯಲ್ಲಿ 1 ರಿಂದ 10 ನೇ. ತರಗತಿಯವರೆಗೆ ವಿದ್ಯಾಭ್ಯಾಸ ನಂತರ ಮಾನ್ವಿ ಸರ್ಕಾರಿ ಬಾಸುಮಿಯ್ಯ ಸಾಹುಕಾರ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಕಾಲೇಜಿನಲ್ಲಿ ವಿದ್ಯಾಭ್ಯಾಸ NCC ಸೇರ್ಪಡೆ ಶಿಕ್ಷಕರ ಹಾಗೂ ತಿಪ್ಪಣ್ಣ ನಾಯಕ ಹರವಿ ಮಾರ್ಗದರ್ಶನ ನೀರಮಾನ್ವಿ ಗ್ರಾಮದ ಯೋಧರ ಪ್ರೇರಣೆ ಸೇನೆಗೆ ಸೇರಲು ಕಾರಣ.

ಸುಮಾರು ಎರಡು ವರ್ಷಗಳ ಕಾಲ ಪ್ರಯತ್ನ ಕೊನೆಗೂ ಸೇನೆಗೆ ಸೇರ್ಪಡೆ ಈಗ ಪ್ರಸ್ತುತ ಬೆಂಗಳೂರಿನಲ್ಲಿ ತರಬೇತಿ ಮುಗಿಸಿ ನಾಗಾಲ್ಯಾಂಡ್ ಗೆ ಪ್ರಯಾಣ ಇಂದಿನ ದಿನಗಳಲ್ಲಿ ಸೇನೆಗೆ ಸೇರಲು ಯುವಕರು ಹಿಂದೇಟು ಹಾಕುತ್ತಿದ್ದಾರೆ ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು ತಮ್ಮನ್ನು ತಾವು ದೇಶಕ್ಕಾಗಿ ಸೇವೆ ಸಲ್ಲಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button