ಕೆಂಚಮಲ್ಲನಹಳ್ಳಿ ಗ್ರಾಮದ ಬಸವೇಶ್ವರ ರಥೋತ್ಸವ ಜರುಗಿತು.

ಕೆಂಚಮಲ್ಲನಹಳ್ಳಿ ಮಾರ್ಚ್.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿಗ್ರಾಮ ಕೆಂಚಮಲ್ಲನಹಳ್ಳಿ ಶ್ರೀ ಬಸವೇಶ್ವರ ಸ್ಮಾಮಿಯ ರಥೋತ್ಸವದ ಬುಧವಾರ ಸಂಜೆ ಸಕಲ ವಾದ್ಯಗಳ ನಡುವೆ ಸಡಗರ ಸಂಭ್ರಮಗಳ ನಡುವೆ ನೆರವೇರಿತು‌.ದೇವಸ್ಥಾನದಿಂದ ಸಕಲ ವಾದ್ಯಗಳ ನಡುವೆ ಬಸವೇಶ್ವರ ಸ್ಮಾಮಿಯ ಉತ್ಸವ ಮೂರ್ತಿಯನ್ನು ರಥದ ಬಳಿ ಪಲಕ್ಕಿಯಲ್ಲಿ ಕರೆತಂದು ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ರಥದಲ್ಲಿ ಪ್ರತಿಷ್ಡಾಪಿಸುತ್ತಿದ್ದಂತೆ ನೇರದಿದ್ದ ಭಕ್ತರ ಜಯಘೋಷ ಹಾಕಿದರು. ರಥ ಮುಂದೆ ಸಾಗುತ್ತಿದ್ದಂತೆ ಭಕ್ತರ ದಂಡು ಜಯಘೋಷ ಹಾಕಿ ಬಾಳೆಹಣ್ಣು ಉತ್ತುತ್ತಿ ಎಸೆದು ಭಕ್ತಿ ಸಮರ್ಪಿಸಿದರು.ರಥವೂ ಪಾದಗಟ್ಟೆ ತಲುಪಿ ಮೂಲಸ್ಥಾನಕ್ಕೆ ಸಂಜೆ 7ರ ಸಮಯಕ್ಕೆ ಸೇರಿತ್ತಿದ್ದಂದೆ ಭಕ್ತರು ಕೆಕೆ ಹಾಕಿ ಸಂಭ್ರಮಿಸಿದರು.

ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button