ಲೋಕಿಕೆರೆ ಆಂಜನೇಯ ಸ್ವಾಮಿ ರಥೋತ್ಸವ – ಭಕ್ತಿ ಸಾಗರದಲ್ಲಿ ಮುಳುಗಿದ ಗ್ರಾಮಸ್ಥರು.

ಕೆ,ಹೊಸಹಳ್ಳಿ ಫೆ.08

ಸಮೀಪದ ಲೋಕಿಕೆರೆ ಆಂಜನೇಯ ಸ್ವಾಮಿ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.

ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಗ್ರಾಮಸ್ಥರ ಸಮ್ಮುಖದಲ್ಲಿ ನಾನಾ ಧಾರ್ಮಿಕ ಪೂಜಾಕಾರ್ಯಗಳು, ನೆರವೇರಿದವು.ಶುಕ್ರವಾರ ಸಂಜೆ ದೇವಸ್ಥಾನದಿಂದ ಮೂರ್ತಿಯನ್ನು ಪಲ್ಲಕ್ಕಿಯ ಮೂಲಕ ಸಕಲ ವಾದ್ಯಗಳೊಂದಿಗೆ ರಥದ ಬಳಿಗೆ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು.

ಉತ್ಸವ ಮೂರ್ತಿಯನ್ನು ಜಯ ಘೋಷಗಳೊಂದಿಗೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸ್ವಾಮಿಯ ಮುಕ್ತಿಪಟ ಹೂವಿನ ಹಾರಗಳು ಹಾರಾಜು ನಡೆದವು ಸ್ವಾಮಿಯ ಮುಕ್ತಿ ಪಟವನ್ನು ಲೋಕಿಕೆರೆ ಗ್ರಾಮದ ಪ್ರಕಾಶ ರೆಡ್ಡಿ ಅವರು 50100 ರೂ ಗಳಿಗೆ ಪಡೆದರು.

ನಂತರ ಗ್ರಾಮಸ್ಥರು ಮುಖಂಡರು, ಭಕ್ತಾದಿಗಳು ಸೇರಿದಂತೆ ರಥವನ್ನು ಮುಂದಕ್ಕೆ ಎಳೆದರು. ರಥವು ಮುಂದಕ್ಕೆ ಸಾಗುತ್ತಿದ್ದಂತೆ ಭಕ್ತಾದಿಗಳು ಜಯ ಘೋಷಗಳನ್ನು ಕೂಗಿದರು. ಭಕ್ತಾದಿಗಳು ಬಾಳೆಹಣ್ಣು ಉತ್ಪತ್ತಿ ಶ್ರೀ ಆಂಜನೇಯ ಸ್ವಾಮಿಯ ರಥಕ್ಕೆ ಭಕ್ತಿ ಸಮರ್ಪಿಸಿದರು.

ಇದೇ ಸಂದರ್ಭದಲ್ಲಿ ರಥೋತ್ಸವಕ್ಕೆ ಕೂಡ್ಲಿಗಿ ಶಾಸಕ ಡಾ, ಎನ್.ಟಿ ಶ್ರೀನಿವಾಸ್ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ಆಂಜನೇಯ ಸ್ವಾಮಿಯ ದರ್ಶನ ಪಡೆದು ಮಾತನಾಡಿದ ಶಾಸಕರು ಈ ಶ್ರೀ ಆಂಜನೇಯ ಸ್ವಾಮಿಯರಥೋತ್ಸವವು ಗ್ರಾಮದ ಜನರ ಭಕ್ತಿ, ಏಕತೆ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ ಎಂದು ಹೇಳಿದರು.

ಗ್ರಾಮದ ಜನರಿಗೆ ಆಂಜನೇಯ ಸ್ವಾಮಿಯ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.ಈ ರಥೋತ್ಸವದಲ್ಲಿ ಪೂಜಾರಹಳ್ಳಿ, ಕಾನ ಹೊಸಹಳ್ಳಿ, ತಿಪ್ಪೆಹಳ್ಳಿ, ಸುತ್ತ ಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button