ಎಸ್/ಸಿ ಪಿ, ಟಿ/ಎಸ್ ಪಿ ಅನುದಾನ ದುರ್ಬಳಕೆಗೆ – ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ವಿಭಾಗೀಯ ಸಂಚಾಲಕ ರಿಂದ ಖಂಡನೆ.

ಗದಗ ಮಾ.03

ಪರಿಶಿಷ್ಟರ ಕಲ್ಯಾಣಕ್ಕಾಗಿ‌ ಮೀಸಲಿರುವ ಅನುದಾನವನ್ನು ದುರ್ಬಳಕೆ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯವೆಂದು ರಾಜ್ಯ ದಲಿತ ವಿದ್ಯಾರ್ಥಿ ಪರಿಷತ್ ಬೆಳಗಾವಿ ವಿಭಾಗೀಯ ಸಂಚಾಲಕ ಸುರೇಶ ವಾಯ್.ಚಲವಾದಿ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಿರುವ ಎಸ್/ಸಿ ಪಿ, ಟಿ/ಎಸ್ ಪಿ ಅನುದಾನವನ್ನು ಪರಿಶಿಷ್ಟರ ಕಲ್ಯಾಣ ಯೋಜನೆಗಳಿಗೆ ಬಳಸದೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಪಂಚ ಗ್ಯಾರಂಟಿಗಳಿಗೆ ಬಳಸಿ ಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತರಿಗೆ ಅನ್ಯಾಯ ವೆಸಗುತ್ತಿದೆ. ಕಳೆದ ಸನ್ 2023-24 ನೇ ಸಾಲಿನಲ್ಲಿ 11344 ಕೋಟಿ ಹಾಗೂ ಸನ್ 2024-25 ನೇ ಸಾಲಿನಲ್ಲಿ 14282 ಕೋಟಿ ಎರೆಡು ವರ್ಷದ ಅವಧಿಯಲ್ಲಿ ಒಟ್ಟಾರೆಯಾಗಿ 25.426.68 ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ ಕೊಂಡು ಈ ನೆಲದ ಶೋಷಿತ ಸಮುದಾಯಗಳಿಗೆ ಅನ್ಯಾಯ ವೆಸಗಿರುವುದು ನಾಚಿಕೆಗೇಡಿನ ಸಂಗತಿ.ರಾಜ್ಯದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ಚುನಾವಣಾ ಪೂರ್ವದಲ್ಲಿ ನಾನು ಅಹಿಂದ ನಾಯಕ. ದಲಿತರ ಪರವಾಗಿರುತ್ತೇನೆಂದು ಭಾಷಣ ಬಿಗಿದು. ದಲಿತರ ಮತಗಳನ್ನ ಪಡೆದು ಮುಖ್ಯ ಮಂತ್ರಿಗಳಾದ ನಂತರ ಅದೇ ದಲಿತರ ಉದ್ದಾರಕ್ಕಾಗಿ ಮೀಸಲಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ದಲಿತರ ಶಕ್ತಿಯನ್ನು ಕುಗ್ಗಿಸುವಂತಹ ಕೆಲಸ ಮಾಡುತ್ತಿರುವುದು ದಲಿತ ಸಮುದಾಯಕ್ಕೆ ಮಾಡುತ್ತಿರುವ ದ್ರೋಹವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1949 ನವೆಂಬರ್ 26 ರಂದು ಭಾರತ ದೇಶಕ್ಕೆ ಸಂವಿಧಾನ ಸಮರ್ಪಿಸುತ್ತಾರೆ. 1950 ಜನೆವರಿ 26 ರಂದು ಸಂವಿಧಾನ ಅಧೀಕ್ರತವಾಗಿ ಅಂಗೀಕಾರವಾಗುತ್ತದೆ. ಅವಾಗ ಪತ್ರಕರ್ತರೊಬ್ಬರು ಡಾ, ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ನೀವು ಬರೆದ ಸಂವಿಧಾನ ಇಂದು ಅಂಗೀಕಾರವಾಗಿದೆ ಇದರ ಬಗ್ಗೆ ತಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಬಾಬಾ ಸಾಹೇಬರು ನಾನು ಬರೆದ ಸಂವಿಧಾನ ಅಂಗೀಕಾರವಾಗಿರುವದು ನನಗೆ ಸಂತೋಷ ವನ್ನುಂಟು ಮಾಡಿದೆ ಆದರೆ ನಾನು ಬರೆದ ಸಂವಿಧಾನ ಯಥಾವತ್ತಾಗಿ ಜಾರಿಯಾದರೆ ದೇಶದಲ್ಲಿನ ಜನತೆ 10 ರಿಂದ 20 ವರ್ಷದೊಳಗೆ ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ದೊರೆಯುತ್ತದೆ ಆದರೆ ಸಂವಿಧಾನ ಜಾರಿ ಮಾಡುವ ಜಾಗದಲ್ಲಿ ಯಾರು ಕೂಡುತ್ತಾರೆ ಎನ್ನುವುದರ ಮೇಲೆ ದೇಶದ ಭವಿಷ್ಯ ನಿರ್ಧಾರವಾಗುತ್ತದೆ ಎನ್ನುತ್ತಾರೆ. ಹಾಗಿದ್ದರೆ ಕಳೆದ 70 ವರ್ಷಗಳ ಕಾಲ ಸುಧೀರ್ಘ ಆಢಳಿತದಲ್ಲಿರುವ ಕಾಂಗ್ರೆಸ್ ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಗೊಳಿಸಲಿಲ್ಲವೇ….? ದಲಿತರು ಇನ್ನೂ ಯಾಕೆ ಬಡವರಾಗಿ ಉಳಿದಿರುತ್ತಾರೆ ಎಂದು ಪ್ರಶ್ನಿಸಿದರು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸನ್ಮಾನ್ಯ ಮುಖ್ಯಮಂತ್ರಿಗಳು ಉತ್ತರಿಸಬೇಕೆಂದು ಹೇಳಿದರು.ಅಂಬೇಡ್ಕರ್ ಕಾಲದಿಂದಲೂ ಒಂದಿಲ್ಲ ಒಂದು ರೀತಿಯಲ್ಲಿ ಬಾಬಾ ಸಾಹೇಬರನ್ನು ಅವಮಾನಿಸುತ್ತಾ ಬಂದಿರುವ ಕಾಂಗ್ರೆಸ್ ಅಂಬೇಡ್ಕರ್ ಅವರ ಸಂವಿಧಾನವನ್ನು ಗೌರವಿಸದೆ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಗೊಳಿಸದೇ ಅನ್ಯಾಯ ವೆಸಗಿರುವ ಕಾಂಗ್ರೆಸ್ ದಲಿತರನ್ನು ಉದ್ದಾರ ಮಾಡುತ್ತಾರೆ ಎಂಬುದು ಕನಸ್ಸಿನ ಮಾತು ಎಂದು ಲೇವಡಿ ಮಾಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡಗಳ ವಿವಿಧ ನಿಗಮ ಗಳಲ್ಲಿರುವ ದಲಿತರ ಅಭಿವೃದ್ದಿ ಯಾಗಿರುವ ಯೋಜನೆಗಳಾದ ಸ್ವಾವಲಂಬಿ ಸಾರಥಿ ಯೋಜನೆ.ಸ್ವಯಂ ಉದ್ಯೋಗ. ಗಂಗಾ ಕಲ್ಯಾಣ ಭೂ ಒಡೆತನ ಹಾಗೂ ಮುಂತಾದ ಯೋಜನೆಗಳ ಮತ ಕ್ಷೇತ್ರವಾರು ಟಾರ್ಗೆಟ್‌ಗಳನ್ನ ಕಡಿತ ಗೊಳಿಸಿ ದಲಿತರ ಆರ್ಥಿಕತೆಯನ್ನು ದುರ್ಬಲ ಗೊಳಿಸುವ ಪ್ರಯತ್ನ ಮಾಡುತ್ತಿದೆ. ಅಷ್ಟೇ ಅಲ್ಲದೇ ಪ್ರಸಕ್ತ ಸಾಲಿನ ಬಡ್ಜೆಟ್ ನಲ್ಲಿ ಎಸ್/ಸಿ ಪಿ, ಟಿ/ಎಸ್ ಪಿ ಯೋಜನೆಯ 15000 ಕೋಟಿ ಪಂಚ ಗ್ಯಾರಂಟಿಗಳಿಗೆ ಬಳಸಿ ಕೊಳ್ಳಲು ಹೊಂಚು ಹಾಕುತ್ತಿದೆ. ಈ ಬಾರಿ ಏನಾದರೂ ದಲಿತರ ಅಭಿವೃದ್ದಿಗಾಗಿ ಮೀಸಲಿರುವ ಅನುದಾನವನ್ನ ಮುಟ್ಟುವ ಪ್ರಯತ್ನ ಮಾಡಿದರೆ ಶೋಷಿತ ಸಮುದಾಯ ಕೈ ಕಟ್ಟಿ ಕುಳಿತು ಕೊಳ್ಳುವದಿಲ್ಲ ತಮ್ಮ ವಿರುದ್ದ ಸಿಡಿದೇಳುವ ಕಾಲ ಸನ್ನಿಹಿತವಾಗಿದೆ ಎಂದು ಎಚ್ಚರಿಕೆ ನೀಡಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button