ಪಟ್ಟಣಕ್ಕೆ ಬೆಳಿಗ್ಗೆ ಆಗಮಿಸಿದ ಕನ್ನಡದ ತೇರನ್ನು ಸ್ವಾಮೀಜಿಗಳು ಬರ ಮಾಡಿಕೊಂಡು – ಅದ್ದೂರಿಯಾಗಿ ಸಡಗರ ಸಂಭ್ರಮ ದಿಂದ ಬೀಳ್ಕೊಟ್ಟರು.
ನರೇಗಲ್ ಸ.30

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣಕ್ಕೆ ಭಾನುವಾರ ಬೆಳಿಗ್ಗೆ ಆಗಮಿಸಿದೆ ಕನ್ನಡದ ತೇರನ್ನು ಸ್ವಾಮೀಜಿಗಳು ನೌಕರರು ಸಂಘಟನೆಗಳ ಮುಖಂಡರು ಜನ ಪ್ರತಿನಿಧಿಗಳು ವಿದ್ಯಾರ್ಥಿಗಳು ಕಲಾವಿದರು ಸಾಹಿತಿಗಳು ಹಾಗೂ ರೈತರು ಸಾರ್ವಜನಿಕರು ಸ್ವಾಗತಿಸಿದ ಗದಗ ಮಾರ್ಗದಲ್ಲಿರುವ ಪೊಲೀಸ್ ಠಾಣೆ ಎದುರಿನಲ್ಲಿ ಮುಖಂಡರು ಹೂವಿನ ಮಾಲೆ ಹಾಕಿ ಮಹಿಳೆಯರು ಆರತಿ ಮಾಡುವುದರ ಮೂಲಕ ತೇರನ್ನು ಬರ ಮಾಡಿಕೊಂಡರು ನಂತರ ಪಟ್ಟಣದ ಹೊಸ ಬಸ್ ನಿಲ್ದಾಣ ಜಗಲಿ ಕ್ರಾಸ್ ಹಳೆ ಬಸ್ ನಿಲ್ದಾಣ ಗಜೇಂದ್ರಗಡ ಮಾರ್ಗದಲ್ಲಿರುವ ಪೆಟ್ರೋಲ್ ಬಂಕ್ ವರೆಗೆ ಮೆರವಣಿಗೆ ಸಾಗಿತ್ತು ಅಲ್ಲಿಂದ ತೇರನ್ನು ನಿಡಗುಂದಿಗೆ ಬೀಳ್ಕೊಡಲಾಯಿತು. ಮೆರವಣಿಗೆ ತೇರನ್ನು ಸಾನಿಧ್ಯ ವಹಿಸಿ ಹಿರೇಮಠ ಮಲ್ಲಿಕಾರ್ಜುನ ಸ್ವಾಮಿಗಳು ಕನ್ನಡ ಎನ್ನುವುದು ನಮಗೆ ಭಾಷೆ ಮಾತ್ರವಲ್ಲ ನಮ್ಮ ನಾಡು ನುಡಿ ಸಾಹಿತ್ಯ ಸಂಸ್ಕೃತಿ, ಪರಂಪರೆಗಳನ್ನು ಉಳಿಸುವದಾಗಿದೆ ಎಂದರು.

ರೋಣ ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಮಿಥುನ್ ಜಿ ಪಾಟೀಲ್ ಅವರು ಮಾತನಾಡಿ ಕರ್ನಾಟಕ ಏಕೀಕರಣಕ್ಕೆ ನಮ್ಮ ಕ್ಷೇತ್ರದ ಕೊಡುಗೆ ಅಪಾರ ಇದೆ ದಿವಂಗತ ಅಂದಾನಪ್ಪರ ಕಲ್ಪನೆಯನ್ನು ರಚಿತವಾದ ಕನ್ನಡದ ಭುವನೇಶ್ವರಿಯ ಮೂಲ ಚಿತ್ರವನ್ನು ಕನ್ನಡಿಗರ ಚಿತ್ರವೆಂದು ರಾಜ್ಯಾದ್ಯಂತ ಜಾರಿಗೆ ತರಲು ಅನೇಕ ದಿನಗಳಿಂದ ಹೋರಾಟ ನಡೆಯುತ್ತಿದೆ ಎಂದರು. ಕಸಪ್ಪ ಜಿಲ್ಲಾ ಘಟಕದ ಅಧ್ಯಕ್ಷ ವಿವೇಕಾನಂದ ಗೌಡ ಪಾಟೀಲ್ ನಿವೃತ್ತಿ ಶಿಕ್ಷಕ ದಡೇಸುರು ಮಠ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಮಾತನಾಡಿದ ನರೇಗಲ್ಲ ಪಟ್ಟಣ ಪಂಚಾಯತಿ ಅಧ್ಯಕ್ಷ ಫಕೀರಪ್ಪ ಮಳ್ಳಿ ಉಪಾಧ್ಯಕ್ಷ ಕುಮಾರಸ್ವಾಮಿ ಕೊರದಾನ್ ಮಠ ಸದಸ್ಯರಾದ ಮಲ್ಲನಗೌಡ ಬೊಮ್ಮನಗೌಡ ಮುತ್ತಪ್ಪ ಮಲ್ಕಿ ವೀರೇಶ್ ಜೋಗಿ ಅಲ್ಲಾಭಕ್ಷಿ ನದಾಫ್ ಮುಖ್ಯ ಅಧಿಕಾರಿ ಮಹೇಶ್ ನಿಡಶೇಸಿ ಕೇಸ್ ವರ್ಕರ್ ಕಳಕನ್ನವರ್ ಬಿ.ಬಿ ಕುರಿ ಮಾದೇವಪ್ಪ ಬೇವಿನಕಟ್ಟಿ ಸಂತೋಷ್ ಹನುಮಸಾಗರ ನರೇಗಲಿನ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಕನ್ನಡದ ಸಾಹಿತ್ಯ ಅಭಿಮಾನಿಗಳು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಾನಂದ. ಎಫ್.ತೋಟಗುಂಟಿ.ಗದಗ