ಕೋಡಿಹಳ್ಳಿಯಲ್ಲಿ ಜೈ ಭೀಮ್ ಶ್ರೀ ಯುವ ವಿನಾಯಕ ಸಂಘದ ವತಿಯಿಂದ – ಗಣೇಶೋತ್ಸವದ ಧ್ವಜ ಸ್ತಂಭ ಪ್ರತಿಷ್ಟಾಪನೆ.
ಚಳ್ಳಕೆರೆ ಆ.20

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೊಡಿಹಳ್ಳಿಯಲ್ಲಿ ಇಂದು ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಗಣೇಶ ಚತುರ್ಥಿಯ ಶ್ರಾವಣ ಮಾಸದ ಉತ್ತರಾಷಡ ನಕ್ಷತ್ರದ ಶುಕ್ಲ ಪಕ್ಷದ ಮೊದಲ ಪೂಜಾ ಕಾರ್ಯ ಧ್ವಜ ಸ್ತಂಭ ಪ್ರತಿಷ್ಟಾಪನೆ ಕಾರ್ಯಕ್ರಮವು ಊರಿನ ಹಾಗೂ ಸಮುದಾಯದ ಯಜಮಾನರು ಮತ್ತು ಎಲ್ಲಾ ಯುವಕರ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರತಿಷ್ಠಾಪಿಸಲಾಯಿತು. ಹಾಗೆ ಮುಂದಿನ ಎಲ್ಲ ಕಾರ್ಯಗಳು ನಿರ್ವಿಘ್ನವಾಗಿ ಸುಗಮವಾಗಿ ನಡೆಯಲಿ ಅಂತಹ ಶಕ್ತಿಯನ್ನು ಸರ್ವರಿಗೂ ಶ್ರೀ ವಿದ್ಯಾ ಗಣಪತಿಯು ದಯ ಪಾಲಿಸಲಿ ಎಂದು ಎಲ್ಲರೂ ಶುಭ ಹಾರೈಸಿದರು.

ನಂತರ ಭಾಗವಹಿಸಿರುವ ಎಲ್ಲ ಸಮುದಾಯದ ಯಜಮಾನರು, ಯುವಕರಿಗೆ ಪ್ರಸಾದ ವಿತರಿಸಲಾಯಿತು, ಈ ಸಂದರ್ಭದಲ್ಲಿ ಶ್ರೀಯುತ ಲಿಂಗರಾಜು. ಡಿ, ಮಲ್ಲಿಕಾರ್ಜುನಯ್ಯ. ಟಿ, ತಿಪ್ಪೇಸ್ವಾಮಿ, ಮಂಜುನಾಥ್, ರುದ್ರಮುನಿ, ಶ್ರೀಧರ್.ಏಚ್, ರಾಜು.ಡಿ, ಮೈಲಾರಿ. ಕೆ, ವಿಜಯ್ ಕುಮಾರ್. ಡಿ, ನಂದೀಶ್. ಓ , ಮೋಹನ್ ಕುಮಾರ್. ಡಿ, ಅರುಣ್ ಕುಮಾರ್. ಟಿ, ತಿಪ್ಪೇಸ್ವಾಮಿ.ಯು, ಶಿವಪ್ಪ,ಮನೋಜ್, ಪರಶುರಾಮ್ ತಿಪ್ಪೇಸ್ವಾಮಿ.ಪಿ.ಎಂ, ಅಶೋಕ್,ಕಿರಣ್, ರಮೇಶ್, ಕೆ.ಟಿ,ಸ್ವಾಮಿ.ಆರ್, ದುರುಗೇಶ್, ಪರಮೇಶ್, ಗೋಪಿ, ಮಲ್ಲಿಕಾರ್ಜುನ್.ಜಿ, ಮಹೇಶ್, ಜೀವನ್, ಕೋಟೇಶ್, ಕಣುಮೇಶ್, ಮಂಜು, ಹಾಗೂ ಮುದ್ದು ಪುಟಾಣಿ ಮಕ್ಕಳು ಉಪಸ್ಥಿತರಿದ್ದರು. ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.
ವರದಿ:ಕೋಡಿಹಳ್ಳಿ.ಟಿ.ಶಿವಮೂರ್ತಿ.ಚಿತ್ರದುರ್ಗ.