ಡಿಪೋ ಮ್ಯಾನೇಜರ್ ನ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಜೀವ ಕೈಯಲ್ಲಿ ಹಿಡಿದು ಕೊಂಡು ಬಂದಂತಾಗಿದೆ – ಎಚ್ಚರಿಕೆ ಇರಲಿ ಸಾರ್ವಜನಿಕರ ಆಗ್ರಹ.
ಕಲಕೇರಿ ಅ.29

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮಕೆ ಬರುವ ಸಿಂದಗಿ ಘಟಕದ ಬಸು ಡಿಪೋ ಮ್ಯಾನೇಜರ್ ನಿರ್ಲಕ್ಷ್ಯ ದಿಂದ ಬಸ್ಸಿನ ಹಬ್ಬ ಕಟ್ ಆಗಿದೆ. ಚಾಲಕನ ಚಾಣಾಕ್ಷತನ ದಿಂದ ಬಸ್ಸಿನಲ್ಲಿರುವ ಪ್ರಯಾಣಿಕರನ್ನು ಪ್ರಾಣಾಪಯ ದಿಂದ ಉಳಿಸಿದ್ದಾನೆ. ಇದನ್ನು ಕಂಡು ಸ್ಥಳೀಯರು ಸೇರಿ ಪ್ರಯಾಣಿಕರಿಗೆ ಧೈರ್ಯ ಹೇಳಿದರು. ಡಿಪೋ ಮ್ಯಾನೇಜರ್ ನಿರ್ಲಕ್ಷ್ಯ ದಿಂದ ಪ್ರಯಾಣಿಕರು ಪ್ರಾಣಪಾಯ ದಿಂದ ತಪ್ಪಿಸಿದಂತಾಗಿದೆ.

ಈಗಲಾದರೂ ಸಾರಿಗೆ ಬಸ್ಸುಗಳನ್ನು ರಸ್ತೆ ಸರಿಯಾಗಿ ಇಲ್ಲದಿರುವುದರಿಂದ ಕಲಕೇರಿ ಮಾರ್ಗವಾಗಿ ಬರುವ ಬಸ್ಸುಗಳನ್ನು ಕಂಡೀಷನ್ ಮಾಡಿ ಕೊಡಬೇಕು ಇಲ್ಲವಾದಲ್ಲಿ ಸಾರ್ವಜನಿಕರು ಸೇರಿ ಡಿಪೋ ಮುಂದುಗಡೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಮಾತನಾಡಿ ಕೊಳ್ಳುತ್ತಿದ್ದರು. ಈಗಲಾದರೂ ಮ್ಯಾನೇಜರ್ ಎಚ್ಚೆತ್ತು ಕೊಳ್ಳಬೇಕೆಂದು ರಾಮಗೌಡ ವನಕಿಹಾಳ. ಆರ್. ಎಸ್. ಹೊಸಮನಿ. ಮುತ್ತು ಆಲಗೊರ ಇನ್ನೂ ಅನೇಕರು ಸ್ಥಳದಲ್ಲಿ ಸಾರ್ವಜನಿಕರು ಆಗ್ರಹಿಸಿದ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ