ಸಿಹಿ ಕಹಿ ಕನ್ನಡ ದಿನ ಪತ್ರಿಕೆ ವರದಿಗೆ – ಫಲಶೃತಿ ಸಾರ್ವಜನಿಕರಿಂದ ಪ್ರಶಂಸೆ.
ಕೊಟ್ಟೂರು ಅ.30

ಪಟ್ಟಣದ ಸಮೀಪ ಸನ್ನಿಧಿ ಕಾಲೇಜ್ ಮುಂಭಾಗ ರಸ್ತೆಯ ಗುಂಡಿಗಳ ಬಗ್ಗೆ ಅಕ್ಟೋಬರ್ 26 ರಂದು ಸಿಹಿ-ಕಹಿ ದಿನ ಪತ್ರಿಕೆಯಲ್ಲಿ ಸುದ್ದಿ ಪ್ರಚಾರ ದಿಂದ ಎಚ್ಚರಗೊಂಡ ಅಕ್ಟೋಬರ್ 30 ರಂದು ಸದ್ಯದ ಮಟ್ಟಿಗೆ ದುರಸ್ತಿ ಮಾಡಿರುವ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ರೈತ ಮುಖಂಡ ಜಯಪ್ರಕಾಶ್ ನಾಯಕ್ ಗುಡಿಯರ್ ಮಲ್ಲಿಕಾರ್ಜುನ್ ರಾಜ್ಯ ರೈತ ಸಂಘದ ಕಾರ್ಯದರ್ಶಿಗಳು ಮತ್ತು ಸಾರ್ವಜನಿಕರು ಧನ್ಯವಾದಗಳು ತಿಳಿಸಿದರು.

2024-25 ನೇ. ಸಾಲಿನ ಜುಲೈ ಮತ್ತು ಆಗಸ್ಟ್ ಮಾಯೆಯಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಹಾನಿ ಗೊಳಗಾದ ರಸ್ತೆ ಹಾಗೂ ಸೇತುವೆಗಳ ದುರಸ್ತಿ ಕಾಮಗಾರಿಗಳಿಗೆ ಅನುದಾನ ದಡಿಯಲ್ಲಿ 10 ಲಕ್ಷ ಬಿಡುಗಡೆ ಯಾಗಿದೆ.

ಕೂಡಲೇ ದುರಸ್ತಿ ಮಾಡುತ್ತೇವೆ ಎಂದು ನಾಗನಗೌಡ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ದೊಡ್ಮನಿ ಕೊಟ್ರೇಶ್ ಇಂಜಿನಿಯರ್ ನಮ್ಮ ಪತ್ರಿಕೆಗೆ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು