ನನ್ನ ಕಣ್ಣು ಕಾರ್ಯಕ್ರಮವನ್ನು ಟೈಟನ್ ಕಂಪನಿ ಸಹಯೋಗದಲ್ಲಿ ಉಚಿತ – ಕಣ್ಣಿನ ತಪಾಸಣಾ ಶಿಬಿರ ಜರುಗಿತು.
ಗುಂಡಕರ್ಜಗಿ ನ.07

ಮುದ್ದೇಬಿಹಾಳ ತಾಲೂಕಿನ ಬಸರಕೋಡ ಕ್ಲಸ್ಟರ್ ವ್ಯಾಪ್ತಿಯ ಗುಂಡಕರ್ಜಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಬುದುವಾರ ಶಂಕರ ಹಾಸ್ಪಿಟಲ್ ಬೆಂಗಳೂರ ನನ್ನ ಕಣ್ಣು ಕಾರ್ಯಕ್ರಮವನ್ನು ಟೈಟನ್ ಕಂಪನಿ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಹಾಗೂ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಮತ್ತು ಟೈಟನ್ ಕಂಪನಿ ಸಹಯೋಗದಲ್ಲಿ ನನ್ನ ಕಣ್ಣು ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಸಂಜಯ್ ಮತ್ತು ಗೊಮತಿ ಶಂಕರ್ ಅವರು ನೇತ್ರ ತಪಾಸಣೆ ಮಾಡಿದರು.

ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್.ಎಸ್ ರಾಮಥಾಳ. ಆರ್.ಎಸ್ ಡವಳಗಿ ಮತ್ತು ಏನ್.ಎಂ ಕಾವಲಿ ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಯ ನನ್ನ ಕಣ್ಣು ಕ್ಯಾಂಪ್ ಸಂಯೋಜಕರಾದ ಚಂದ್ರಪ್ಪ ನಾಗರಾಳ ಸರ್ ಕಣ್ಣು ಮನುಷ್ಯನಿಗೆ ಅಮೂಲ್ಯ ಕಣ್ಣು ಕಳೆದು ಕೊಂಡರೆ ಜಗತ್ತೇ ಕತ್ತಲು ಮಾಯವಾಗುತ್ತದೆ. ಮಕ್ಕಳು ಮೊಬೈಲ್ ಟಿವಿ ಅನ್ನು ಅತಿ ಸಮೀಪದಿಂದ ವೀಕ್ಷಿಸುವುದ ರಿಂದ ಕಣ್ಣಿಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಎಂದು ಮಾತನಾಡಿದರು.
ಶಂಕರ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ವರ್ಗದವರಾದ ಅವಿನಾಶ್. ವಿಜಯ್. ಅನಿಲ್. ಮತ್ತು ಸರಕಾರಿ ಕಿ ರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ರಾಮಪ್ಪ ನನ್ನಿಕೇರಿ ಸಹ ಶಿಕ್ಷಕರಾದ ಪರಶುರಾಮ್ ಸಿರಗುಪ್ಪಿ. ನಿಂಗಪ್ಪ ರಾಥೋಡ್. ರವಿ ಸೋಮನಾಳ. ರಾಜು ತಳಗಡಿ. ಶಾಲೆ ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ