ಸಮುದಾಯ ಆರೋಗ್ಯ ಕೇಂದ್ರದ ಸ್ನೇಹ ಕ್ಲಿನಿಕ್ ನಲ್ಲಿ ಕಿಶೋರಿಯರಿಗೆ ಶುಚಿತ್ವ ಪ್ಯಾಡ್ ಗಳನ್ನು ವಿತರಿಸಿದರು.

ಕಲಕೇರಿ ನ.07

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಇಂದು ಸಮುದಾಯ ಆರೋಗ್ಯ ಕೇಂದ್ರದ ಸ್ನೇಹ ಕ್ಲಿನಿಕ್ ನಲ್ಲಿ ಕಿಶೋರಿಯರಿಗೆ ಶುಚಿ ಪ್ಯಾಡ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್, ಎಸ್.ಎಸ್ ಬಾಗೇವಾಡಿ ಸರ್ ಅವರು ಮಾತನಾಡಿ ಮುಟ್ಟು ಒಂದು ನೈಸರ್ಗಿಕ ಕ್ರಿಯೆ ಎಲ್ಲಾ ಮಹಿಳೆಯರು ಇದರ ಬಗ್ಗೆ ಜಾಗೃತಿ ಮತ್ತು ಶುಚಿತ್ವವನ್ನು ಕಾಪಾಡಿ ಕೊಳ್ಳಬೇಕು ಜೊತೆಗೆ ಹದಿ ಹರೆಯದಲ್ಲಿ ಹುಡುಗಿಯರಿಗೆ ಪೌಷ್ಟಿಕ ಆಹಾರ ಬಹಳ ಅವಶ್ಯಕ ಕಬ್ಬಿನಾಂಶ ವಿಟಮಿನ್ ಗಳು ಮತ್ತು ಮಿನರಲ್ ಗಳು ಅಧಿಕವಾಗಿರುವ ಸೊಪ್ಪು ತರಕಾರಿಗಳು ಹಣ್ಣುಗಳು ಇರುವ ಪೌಷ್ಟಿಕ ಆಹಾರವನ್ನು ತಪ್ಪದೆ ತೆಗೆದು ಕೊಳ್ಳಬೇಕು ಇವುಗಳಲ್ಲಿನ ಕೊರತೆ ರೋಗ ನಿರೋಧಕ ಶಕ್ತಿಯನ್ನು ಕುಂದಿಸಿ ಸಂಪೂರ್ಣ ವಿಕಾಸಕ್ಕೆ ತಡೆ ಯೋಡ್ಡಬಹುದು ಹಾಗೂ ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಹಾಗೂ ಸ್ವಚ್ಛತೆಯಡೆಗೆ ನಮ್ಮ ಸಹಭಾಗಿತ್ವ ಎಂಬ ಮಾತನ್ನು ತಿಳಿಸುತ್ತಾ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆಪ್ತ ಸಮಾಲೋಚಕ ಅಪ್ಪಸಾಬ್ ಮಾಂಗ್ ಮಾತನಾಡಿ ಶಾಲೆ ಬಿಟ್ಟ ಕಿಶೋರಿಯರಿಗೆ ಸರ್ಕಾರದ ಮಹತ್ವ ಶುಚಿ ಕಾರ್ಯಕ್ರಮ ಗ್ರಾಮೀಣ ಭಾಗದ ಎಲ್ಲ ಕಿಶೋರಿಯರು ಈ ಕಾರ್ಯಕ್ರಮದ ಸೌವಲತ್ತುನ್ನು ಪಡೆಯಬೇಕೆಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿಗಳಾದ ಡಾ, ಎಸ್.ಎಸ್ ಬಾಗೇವಾಡಿ ವೈದ್ಯಾಧಿಕಾರಿಗಳಾದ ಡಾ, ನವೀನ್ ಶಂಕರ್ ಆಪ್ತ ಸಮಾಲೋಚಕರಾದ ಅಪ್ಪಸಾಬ್ ಮಾಂಗ್ ಶಿವಕುಮಾರ ಶಾಂತಗಿರಿ ಡಾ, ಸಂತೋಷ ಟೆಂಗಳಿ ಸಿದ್ದು ಬ್ಯಾಲಾಳ ಶುಶ್ರೂಷಾಧಿಕಾರಿಗಳಾದ ಎಂ.ಸಿ ಪಟೇಲ್. ಲಕ್ಷ್ಮಿ ಮಾಂಗ್. ಸಂಗೀತಾ ಪಾಸೋಡಿ. ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button