ಎಮ್ಮೆಯು ಬಾವಿಯ ಪಕ್ಕದಲ್ಲಿ ಮೇಯ್ಯುತ್ತಾ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ – ಅಗ್ನಿಶಾಮಕ ದಳದ ಸಿಬ್ಬಂದಿಯವರು ರಕ್ಷಿಸಿದರು.

ಬೆಳ್ಳಿಗೇರಿ ನ.08

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಕಲ್ಲಪ್ಪ.ನಾಗಪ್ಪ.ಮುಡಶಿ ಎಂಬುವವರ ಬಾವಿಯಲ್ಲಿ ಅವರದೇ ಎಮ್ಮೆಯೂ ಬಾವಿಯ ಪಕ್ಕದಲ್ಲಿ ಮೇಯ್ಯುತ್ತಾ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ 07/11/2024 ರಂದು ಸಮಯ ಸಾಯಂಕಾಲ 06:30 ಕ್ಕೆ ಗುರುವಾರ ನಡೆದಿದೆ.

ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಜಲವಾಹನ ಮತ್ತು ಸಿಬ್ಬಂದಿಯವರು, ರಕ್ಷಣಾ ಸಾಮಗ್ರಿಗಳೊಂದಿಗೆ ಅನಿಲ. ಬಡಚಿ ಪ್ರಮುಖ ಅಗ್ನಿಶಾಮಕ ರವರು ನೇತೃತ್ವದಲ್ಲಿ ಸಿಬ್ಬಂದಿಯವರು ಒಳಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿಲ್ಲದ ಬಾವಿಯಲ್ಲಿ ಅಂದಾಜು 40×40 ಅಳತೆಯ 40 ರಿಂದ 45 ಅಡಿ ಆಳದಲ್ಲಿ ಎಮ್ಮೆಯು ಮೇಯ್ಯುತ್ತಾ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಕಪ್ಟ ಪಟ್ಟು ಸುಮಾರು 02 ಗಂಟೆ 05 ನಿಮಿಷಗಳ ಕಾರ್ಯಚರಣೆ ಮಾಡಿ ಎಮ್ಮೆಯನ್ನು ಜೀವಂತವಾಗಿ ನೀರಿಲ್ಲದ ಬಾವಿಯಿಂದ ಹೊರ ತೆಗೆದು ಜೀವಂತ ರಕ್ಷಣೆ ಮಾಡಲಾಯಿತು.

ಈ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಯವರು 01). ಅನಿಲ.ಬಡಚಿ, ಪ್ರಮುಖ ಅಗ್ನಿಶಾಮಕ ರವರು. 02) ಮಲ್ಲನಗೌಡ ನಾಯ್ಕ ಅಗ್ನಿಶಾಮಕ ಚಾಲಕರು 03) ಆಶಿಫ್ ಅಹಮದ್ ಸನದಿ 04) ರಾಘವೇಂದ್ರ. ನಾವಿ ಅಗ್ನಿಶಾಮಕರು 05) ಸಂಜೀವ್ ಚೌಗಲಾ ಅಗ್ನಿಶಾಮಕರು 06) ಸಂತೋಷ ಚೌಗುಲಾ 07) ಅಕ್ಷಯ ಕೋಲಾಪುರೆ ಸಿಬ್ಬಂದಿಯವರು ಇತರರು ಮತ್ತು ಊರಿನ ಗ್ರಾಮಸ್ಥರು ಕಾರ್ಯಾಚರಣೆ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಬಳ್ಳಿಗೇರಿ ಗ್ರಾಮದಲ್ಲಿ ಅಗ್ನಿಶಾಮಕ ಇಲಾಖೆಗೆ ಅಗ್ನಿಶಾಮಕದ ಸಿಬ್ಬಂದಿಯವರಿಗೆ ತುಂಬಾ ತುಂಬಾ ಧನ್ಯವಾದಗಳು ತಿಳಿಸಿದರು. ನೀವು ಮಾಡುವ ಕೆಲಸ ಜೀವ ರಕ್ಷಿಸುವ ಕೆಲಸವಾಗಿದೆ ಭಗವಂತ ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಸದಾಕಾಲ ಉನ್ನತ ಮಟ್ಟಕ್ಕೆ ಮತ್ತು ದೊಡ್ಡ ಹುದ್ದೆಗಳನ್ನು ಸ್ವೀಕರಿಸಲಿ ಎಂದು ಹೇಳಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button