ದ್ರೋಣಾಪೂರ ವೈಭವ ಕಾರ್ಯಕ್ರಮ.

ರೋಣ ನ.10

ಸಂಘದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸರ್ಕಾರದ ಯೋಜನೆಯನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ಮಿಥುನ ಪಾಟೀಲ ಹೇಳಿದರು. ಪಟ್ಟಣದ ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಉತ್ತರ ಕರ್ನಾಟಕ ಎಸ್. ಎಸ್. ಎಲ್. ಡಿ.ಡಿ.ಎಂ.ಕೆ ಸಂಘ ಹೊಸಪೇಟೆ, ಗದಗ ಜಿಲ್ಲಾ ಶ್ಯಾಮಿಯಾನ ಸಪ್ಲಾಯರ್, ರೋಣ ತಾಲೂಕು ಶ್ಯಾಮಿಯಾನ್ ಸಪ್ಲಾಯರ್ ಸಂಘ ಇವರ ಸಂಯಕ್ತ ಆಶ್ರಯದಲ್ಲಿ 4 ನೇ. ವಾರ್ಷಿಕೋತ್ಸವದ ದ್ರೋಣಾಪೂರ ವೈಭವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಉತ್ತರ ಕರ್ನಾಟಕ ಶಾಮಿಯಾನ್ ಸಪ್ಲಾಯರ್ ಸಂಘದ ಅಧ್ಯಕ್ಷ ಅಮರೇಶ ಹಿರೇಮಠ ಅವರು ಮಾತನಾಡಿ ಸಂಘದ ಬಗ್ಗೆ ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕು. ಎಲ್ಲಾ ರಂಗದಲ್ಲಿ ಪೈಪೋಟಿ ಇದೆ. ಸರ್ಕಾರದ ನಿಯಮಾವಳಿ ಪ್ರಕಾರ ಎಲ್ಲಾಊ ಕಾರ್ಯ‌ ನಿರ್ವಹಿಸಬೇಕು.

ಸಮಾಜದಲ್ಲಿ ಶಾಮಿಯಾನ್ ಸಪ್ಲಾಯರ್ ಪಾತ್ರ ಬಹಳ ಮುಖ್ಯ. ಸ್ಪರ್ಧಾತ್ಮಕ ಯುಗದಲ್ಲಿ ಸಹಕಾರ ಬಹಳ ಮುಖ್ಯ. ವೃತ್ತಿಯ ಘನತೆಯನ್ನು ಪ್ರತಿಯೊಬ್ಬರೂ ಹೆಚ್ಚಿಸಬೇಕು ಎಂದು ಮಾತನಾಡಿದರು. ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು ಮಾತನಾಡಿ ಶಾಮಿಯಾನ ಅವರು ನೋವು ನಲಿವುಗಳನ್ನು ಅನುಭಿಸುತ್ತಾ ಬಂದಿದ್ದಾರೆ. ಮನುಷ್ಯ ಬೆಳೆಯ ಬೇಕಾದರೆ ಪರಿಶ್ರಮ ಬಹಳ ಮುಖ್ಯ. ಸತತ ಪರಿಶ್ರಮ ಇದ್ದಾಗ ಮಾತ್ರ ಯಶಸ್ಸು ಕಾಣಬಹುದು. ಸಂಘ ಬೆಳೆಯಲು ಸದಸ್ಯರು ಹಗಲಿರುಳು ಶ್ರಮಿಸಬೇಕು. ಸಂಘದಲ್ಲಿ ಅದ್ಭುತ ಶಕ್ತಿ ಇದೆ. ಸಂಘದಲ್ಲಿ ಬರುವ ಅನೇಕ ಅನುಕೂಲಗಳನ್ನು ಎಲ್ಲರೂ ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಆಶಿರ್ವಚನ ನೀಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಜರತ್ ಸೈಯದ್ ಷಾ ಸುಲೇಮಾನ್ ಶಾವಲಿ ದರ್ಗಾದ ಅಜ್ಜನವರು ವಹಿಸಿದರು.

ಇದೇ ಸಂದರ್ಭದಲ್ಲಿ ಪಿಎಸ್ಐ ಪ್ರಕಾಶ ಬಣಕಾರ,ವಿ.ಬಿ ಸೋಮನಕಟ್ಟಿಮಠ, ದುರಗಪ್ಪ ಹಿರೇಮನಿ, ದಾವಲಸಾಬ ಬಾಡಿನ, ಗದಿಗೆಪ್ಪ ಕಿರೇಸೂರ, ಮಲ್ಲಪ್ಪ ಮಾಡಲಗೇರಿ, ಮಕ್ತುಂಸಾಬ ಮುಲ್ಲಾ, ರವೀಂದ್ರಬಾಬು ಮೆಣಸಿನಕಾಯಿ, ಎನ್.ರಾಮರಾವ್, ಮೋಹನ ಎಂ ಗಜಗೋಶ, ಸುರೇಶ ಕಲಬುರಗಿ, ಮಲ್ಲಣ್ಣ ಮಾಳಶೆಟ್ಟಿ, ರಾಜೇಸಾಬ ಲಕ್ಮೇಶ್ವರ, ಮಲ್ಲಿಕಾರ್ಜುನ ಗುಜಮಾಗಡಿ, ರೈಮಾನಸಾಬ ಕುರಹಟ್ಟಿ, ಈರಣ್ಣ ತಾಳಿಕೋಟಿ, ಮಾಬುಸಾಬ ಶಿರಹಟ್ಟಿ, ಶಫೀಕ ಮುಗನೂರು, ಶೇಖಪ್ಪ ಡುಮ್ಮಣ್ಣವರ, ವೀರಣ್ಣ ಸಂಗಳದ, ಎನ್. ಎಲ್. ಮುಲ್ಲಾ, ಸೇರಿದಂತೆ ಇತರರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ.ಸಂಕನಗೌಡ್ರ.ರೋಣ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button