ಕಬಡ್ಡಿ ಗ್ರಾಮೀಣ ಮತ್ತು ದೇಶೀಯ ಕ್ರೀಡೆಯಾಗಿದೆ-ಜಗದೀಶ ಗಸ್ತಿ.

ಹುನಗುಂದ ಸಪ್ಟೆಂಬರ್.7

ಕಬಡ್ಡಿ ಒಂದು ಗ್ರಾಮೀಣ ಮತ್ತು ದೇಶೀಯ ಕ್ರೀಡೆಯಾಗಿದೆ.ಮೊದಲು ಕಬಡ್ಡಿ ಟಪ್ ಗೇಮ್ ಆಗಿತ್ತು ಇಂದು ಅದು ಟೆಕ್ನಿಕ್ ಗೇಮ್‌ಯಾಗಿದೆ.ಇವತ್ತು ದಿನದಿಂದ ದಿನಕ್ಕೆ ಕ್ರಿಕೆಟ್‌ಗಿಂತಲ್ಲೂ ಹೆಚ್ಚಿನ ಆಸಕ್ತಿ ಆಟ ಇದಾಗಿದೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ದೈಹಿಕ ನಿರ್ದೇಶಕ ಜಗದೀಶ ಗಸ್ತಿ ಹೇಳಿದರು.ಪಟ್ಟಣದ ಎಸ್.ಆರ್.ವಸ್ತ್ರದ ಕಾಲೇಜು ಮೈದಾನದಲ್ಲಿ ಎಸ್.ಆರ್.ವಸ್ತ್ರದ ಕಲಾ,ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲದ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಲಯ ಮತ್ತು ಅಂತರ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ದೇಶೀಯ ಕ್ರೀಡೆ ಕಬಡ್ಡಿಗೆ ಇರುವ ಮಾನ್ಯತೆ ಮತ್ತು ಪ್ರೇಕ್ಷಕರು ಉಳಿದ ಸಿಮ್ಮಿಂಗ್, ಬ್ಯಾಡ್ಮಿಂಟನ್ ಸೇರಿದಂತೆ ಉಳಿದ ಕ್ರೀಡೆಗಳಿಗೆ ಅಷ್ಟಾಗಿ ಕ್ರೀಡಾಪಟುಗಳು ಸಿಗುತ್ತಿಲ್ಲ.ಇಂದಿನ ವಿದ್ಯಾರ್ಥಿಗಳು ಕ್ರೀಡೆ ಮತ್ತು ಅಧ್ಯಯನವನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ಒಳ್ಳೆಯ ಭವಿಷ್ಯ ನಿರ್ಮಿಸಿಕೊಳ್ಳಬಹುದು.ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಕಬಡ್ಡಿ,ವಾಲಿಬಾಲ,ಖೋಖೋ ಕ್ರೀಡೆಗಳಲ್ಲಿ ನೀವು ಕ್ರೀಡಾ ಪಟುಗಳಾದರೇ ಖಂಡಿತ ಏನಾದರೊಂದು ಸಾಧನೆ ಮಾಡಲು ಸಾಧ್ಯ ಎಂದರು.ವಿ.ಮ.ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತೇ ಎನ್ನುವುದ್ದಾದರೇ ಅದಕ್ಕೆ ಕ್ರೀಡೆ ಬಹಳ ಪೂರಕವಾಗಿದೆ.

ಕ್ರೀಡೆ ಮನುಷ್ಯನ ಸರ್ವಾಂಗೀಣ ಪ್ರಗತಿಯನ್ನು ಮತ್ತು ದೃಢ ಕಾಯವನ್ನು ಹಾಗೂ ಒಳ್ಳೆಯ ಆಯುಷ್ಯ ಪಡೆಯಲು ಸಾಧ್ಯವಾಗಲಿದೆ.ಯಾವ ವ್ಯಕ್ತಿ ನಿತ್ಯ ಕ್ರೀಡೆ,ಯೋಗದಂತ ಚಟುವಟಿಕೆಗಳಲ್ಲಿ ತೊಡಗಿರುತ್ತಾರೋ ಅಂತವರಿಗೆ ಯಾವದೇ ರೋಗಗಳು ಅವರ ಸಮೀಪಕ್ಕೆ ಸುಳಿಯೋದಿಲ್ಲ ಎಂದರು.ಎಸ್.ವಿ.ಎಂ ಕಾಲೇಜು ಪ್ರಾಚಾರ್ಯ ಎಸ್.ಎಸ್ ಅವಟಿ ಮಾತನಾಡಿ ಕಬಡ್ಡಿ ದೇಶೀಯ ಆಟ ಎನ್ನುವುದ್ದಕ್ಕಿಂತ ಇದೊಂದು ಐತಿಹಾಸಿಕ ಮತ್ತು ಪೌರಾಣಿಕ ಆಟವಾಗಿದೆ,ಈ ಆಟಕ್ಕೆ ರಾಮಾಯಣ ಮತ್ತು ಮಹಾಭಾರತದಲ್ಲಿ ಅನೇಕ ಪುರಾವೆಗಳಿವೆ.ಕಬಡ್ಡಿ ಇತ್ತೀಚಿನ ದಿನಗಳಲ್ಲಿ ಅಂದರೆ ಪ್ರೋ ಕಬಡ್ಡಿಯಿಂದ ಇಂದು ಸಾಕಷ್ಟು ಪ್ರೇಕ್ಷಕರನ್ನು ಮತ್ತು ಕ್ರೀಡಾಪಟುಗಳನ್ನು ಸೃಷ್ಠಿ ಮಾಡುತ್ತಿದೆ.ಕ್ರೀಡೆ ವಿದ್ಯಾರ್ಥಿ ಜೀವನದಲ್ಲಿ ಪಾಠದ ಜೊತೆ ಜೊತೆ ಆಟಗಳು ಇರಬೇಕಾಗುತ್ತೆದೆ ಎಂದರು.ದೈಹಿಕ ನಿರ್ದೇಶಕ ಲೆಪ್ಟಿನೆಂಟ್ ಎಸ್.ಬಿ.ಚಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಡೆ ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಿದೆ.ಕ್ರೀಡೆ ಇಲ್ಲದವನ ಜೀವನದ ಕ್ರೀಡೆ ತಂದ ಹಣ್ಣಿನಂತೆ.ಅದರಲ್ಲಿ ಕಬಡ್ಡಿ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾಗಿದೆ.ಇಂದು ವಿಶ್ವವಿದ್ಯಾಲಯದ ಮಟ್ಟದ ಅಂತರ ವಲಯ ಮಟ್ಟದ ಕಬಡ್ಡಿಗಳು ನಮ್ಮ ಕಾಲೇಜಿನಲ್ಲಿ ನಡೆಯುತ್ತಿರುವುದು ನಮಗೆ ಹೆಮ್ಮೆ ತಂದಿದೆ.ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಆಡಬೇಕು ಸೋಲು ಗೆಲುವುಗಳು ಪಂದ್ಯದಲ್ಲಿರುತ್ತವೆ ಆದರೇ ಕ್ರೀಡಾಪಟುಗಳಲ್ಲಿ ಯಾವದೇ ದ್ವೇಷ ಅಸೂಯೆ ಬೇಡ ಎಂದರು.ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಕೆ.ಮಠ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.ನಂತರ ಅಂತರ ವಲಯ ಮಟ್ಟದ ೮ ಕಾಲೇಜುಗಳ ತಂಡದ ಕಬಡ್ಡಿ ಪಂದ್ಯಾವಳಿಗಳು ಜರುಗಿದವು.ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ವಿ.ಪಿ.ಬಳೂಟಗಿ,ಎಂ.ಆಯ್.ಕತ್ತಿ,ಬಿ.ಎಸ್.ಕೆಂದೂರ,ಎಂ.ಎಸ್.ಮಠ,ಸಂಗಣ್ಣ ಚಿನವಾಲ,ಮಲ್ಲಿಕಾರ್ಜುನ ಹಳಪೇಟಿ,ಮಹಾಂತೇಶ ಮುಕ್ಕಣ್ಣನವರ,ಪಿಡಿಓ ಅಮರೇಗೌಡ ಜಾರಡ್ಡಿ,ಪ್ರಾಚಾರ್ಯ ಎಚ್.ಎಸ್.ಬೋಳಿಶೆಟ್ಟರ,ಐಕ್ಯೂಎಸಿ ಸಂಚಾಲಕ ಡಾ.ಎಸ್.ಆರ್.ಗೋಲಗೊಂಡ,ಕಾರ್ಯಾಧ್ಯಕ್ಷ ಬಿ.ಎ.ಕಂಠಿ ಸೇರಿದಂತೆ ಅನೇಕರು ಇದ್ದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button