ದಲಿತ ಸಮುದಾಯದ ಅಂಗಡಿಗಳನ್ನು ಹಾಗೂ ಚರ್ಮಾಕಾರ ಕುಟೀರಗಳನ್ನು ಅಧಿಕೃತವಾಗಿ ತೆರವು ಗೊಳ್ಳಿಸಿದ ಪುರಸಭೆ ವಿರುದ್ಧ – ಎಂ.ಎಸ್ ನಡಹಳ್ಳಿ ನಿಕಟಪೂರ್ವ ಶಾಸಕರು ಗರಂ.
ತಾಳಿಕೋಟೆ ನ.16

ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿ ನಗರದಲ್ಲಿ ದಲಿತ ಸಮುದಾಯದ ಅಂಗಡಿಗಳನ್ನು ಹಾಗೂ ಚರ್ಮಾಕಾರ ಕುಟೀರಗಳನ್ನು ಅಧಿಕೃತವಾಗಿ ತೆರವು ಗೊಳ್ಳಿಸಿದ ಪುರಸಭೆ ವಿರುದ್ಧ ನಡೆದ ಹೋರಾಟದಲ್ಲಿ ಶ್ರೀ ಎ.ಎಸ್ ಪಾಟೀಲ್ ನಡಹಳ್ಳಿ ನಿಕಟಪೂರ್ವ ಶಾಸಕರು ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರ ರಾಜ್ಯಾಧ್ಯಕ್ಷರು ಬಿಜೆಪಿ ರೈತ ಮೋರ್ಚ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಸಾಮಾಜಿಕ ಜಾಲತಾಣದ ಸಂಚಾಲಕ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರ ಆಪ್ತ ಮಂಜುನಾಥ್ ಚಲವಾದಿ, ಬಸರಕೋಡ ಭಾಗವಹಿಸಿ ಬೆಂಬಲಿಸಿದರು. ಹೋರಾಟ ಸ್ಥಳದಲ್ಲಿ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ಮಂಜುನಾಥ್ ಅವರಿಗೆ ಫೋನ್ ಕರೆ ಮಾಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.
ಸಂತ್ರಸ್ತರ ಪೈಕಿ ರಾಘವೇಂದ್ರ ವಿಜಯಪುರ ಅವರು ನಾರಾಯಣಸ್ವಾಮಿ ಅವರೊಟ್ಟಿಗೆ ಮಾತನಾಡಿ ಘಟನೆ ವಿವರಿಸಿದರು. ನಾನು ಈಗ ಜಾರ್ಖಂಡ್ ವಿಧಾನ ಸಭಾ ಚುನಾವಣೆಯಲ್ಲಿ ಇದ್ದು ಬೆಂಗಳೂರಿಗೆ ವಾಪಸ್ ಆದ ತಕ್ಷಣ ಹೋರಾಟಕ್ಕೆ ಬರುವುದಾಗಿ ತಿಳಿಸಿದರು. ಅದೇ ರೀತಿ ತುರ್ತು ದೂರವಾಣಿ ಮೂಲಕ ಜಿಲ್ಲಾಧಿಕಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಭರವಸೆ ನೀಡಿದರು. ಅದೇ ವೇಳೆಯಲ್ಲಿ ಕಾಶಿನಾಥ್ ಬಬ್ರು ಕಾರ್. ಉದಯ್ ರಾಯಚೂರ್. ರಾಘವೇಂದ್ರ ವಿಜಯಪುರ. ಇತರ ದಲಿತ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ