ಇಂಡಿ ತಾಲ್ಲೂಕಿನ ದಲಿತ ಮುಖಂಡರಿಂದ ಆರ್.ಪಿ.ಐ (ಎ) ಅಭ್ಯರ್ಥಿ ಜಿತೇಂದ್ರ ಕಾಂಬಳೆ ಅವರಿಗೆ ಬೆಂಬಲ.

ಇಂಡಿ ಮೇ.05

ಬಾಲ್ಯದಲ್ಲೇ ಮಹಾತ್ಮ ಜ್ಯೋತಿಬಾಪುಲೆ, ಛತ್ರಪತಿ ಶಾಹು ಮಹಾರಾಜ, ಡಾ. ಬಾಬಾ ಸಾಹೇಬ್ ಅಂಬೇಡ್ಕರ ಹಾಗೂ ಮಹಾ ಕಾರುಣಿಕ ತಥಾಗತ ಭಗವಾನ ಗೌತಮ ಬುದ್ಧ ಮತ್ತು ಬಸವಣ್ಣನವರು ಹಾಕಿ ಕೊಟ್ಟ ಹಾದಿಯಲ್ಲಿ ನಡೆದು ಸಮಾನತೆಗಾಗಿ, ಸಂಘರ್ಷಕ್ಕಿಳಿದು ಮೇಲ್ವರ್ಗದ ಕೆಂಗಣ್ಣಿಗೆ ಗುರಿಯಾಗಿ, ದೌರ್ಜನ್ಯಕೊಳಪಡುವ ಧ್ವನಿಯಾಗಿ ಹೋರಾಟ ಮಾಡುತ್ತಾ ರಾಜಕಾರಣಿಗಳ ಮರ್ಜಿಗೆ ಒಳಗಾಗದೆ ಬಡವರ. ಶೋಷಿತ ಮಹಿಳೆಯರ, ಹಿಂದುಳಿದ ಅಲ್ಪಸಂಖ್ಯಾತರ ಪರವಾಗಿ, ಜಿಲ್ಲಾಡಳಿತದಲ್ಲಿನ ಕೆಲವು ಅಧಿಕಾರಿಗಳು, ಶೋಷಣೆ ಗೊಳಗಾದವರ ಪರವಾಗಿ ನಿಲ್ಲದೆ, ದೌರ್ಜನ್ಯ ವೆಸಗಿದ ವ್ಯಕ್ತಿಗಳ ವಿರುದ್ಧ ನಿಲುವ ವ್ಯಕ್ತಿ. ಸಮುದಾಯದ ಹಾಗೂ ಗುಂಪುಗಳ ಪರವಾಗಿ ನಿಲ್ಲದೇ ಅವರ ವಿರುದ್ಧ ಹೋರಾಟ ಮಾಡಿದ ಏಕೈಕ ದಲಿತ ಹೋರಾಟಗಾರ ಜಿತೇಂದ್ರ ಕಾಂಬಳೆ, ಈ ಜಿಲ್ಲೆಯ ಪೋಲಿಸ್ ಪೇದೆಗಳ ನೆಚ್ಚಿನ ಹೋರಾಟಗಾರ ಜಿತೇಂದ್ರ ಕಾಂಬಳೆ ಎನ್ನೊದು ವಿಶೇಷತೆ, ಆದರೆ ಅಷ್ಟೇ ಸೂಕ್ಷ್ಮಾತೀತವಾಗಿ ಗಮನಿಸಿದರೆ ಈ ಇಲಾಖೆಯ ಕೆಲವು ಅಧಿಕಾರಿಗಳು ಇವರ ಮೇಲೆ ಸಾಂದರ್ಬಿಕವಾಗಿ,ಸುಳ್ಳು ಕೇಸಗಳನ್ನು ದಾಖಲಿಸುತ್ತಾ ಬಂದಿದ್ದಾರೆ. ಈ ಜಿಲ್ಲೆಯ ಜನರಿಗಾಗಿ ಸೇವೆ ಮಾಡಿದ ಜಿತೇಂದ್ರ ಕಾಂಬಳೆ ಇವರಿಗೆ ಪೋಲಿಸ್ ಅಧಿಕಾರಿಗಳು ನೀಡಿದ ಬಹುಮಾನವಾಗಿದೆ. ನಂತರ ಕೊಲೆಗಳಾದಾಗ, ದಲಿತ ಮಹಿಳೆಯರ, ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಕೊಲೆಗಳಾದ ಹೋರಾಟದ ದಿಕ್ಕನ್ನು ಬದಲಿಸುವ ಹೋರಾಟದಿಂದ ನ್ಯಾಯಕ್ಕೆ ಕಿಚ್ಚು ಹಚ್ಚುವಂತಹ ವ್ಯಕ್ತಿ ಯಾರಾದರೂ ಆಗಿದ್ದರೇ ಅದು ನಮ್ಮ ನಿಮ್ಮೆಲ್ಲರಿಗೂ ಅನ್ಯಾಯವಾದಾಗ ಹೋರಾಟ ಮಾಡುತ್ತಾ ಬಂದವರೇ ಅವರೇ ಜಿತೇಂದ್ರ ಕಾಂಬಳೆ.ಇವರು ತಮ್ಮ 30 ವರ್ಷಗಳ ಹೋರಾಟದಲ್ಲಿ ಆಸ್ತಿ, ಅಂತಸ್ತು ಸಂಪಾದಿಸಿಲ್ಲ. ಆದರೆ ಸಂಪಾದಿಸಿದ್ದು ಏನಾದರೂ ಇದ್ದರೆ ಜನರಿಗೆ ಒದಗಿಸಿ ಕೊಟ್ಟಿರುವ ನ್ಯಾಯ ಹಾಗೂ ಇವತ್ತಿನವರೆಗೂ ಇವರು ತನ್ನ ಕುಟುಂಬದೊಂದಿಗೆ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದಾರೆ. ಅಲ್ಲದೇ ಸಮಾಜ ಮುಖಿಯಾಗಿ ದುಡಿಯಲು ನೂರಾರು ನಾಯಕರನ್ನು ನ್ಯಾಯಕ್ಕಾಗಿ ದುಡಿಯಲು ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಅವರ ಜೊತೆಯಲ್ಲಿ ನಾವು ಕೂಡಾ ನಿಶ್ವಾರ್ಥವಾಗಿ ಸೇವೆ ಪೂರ್ವದಲ್ಲಿ ಸಲ್ಲಿಸಿದ್ದೇವೆ. ಈಗಲೂ ಸಲ್ಲಿಸುತ್ತಿದ್ದೇವೆ ಹಾಗೂ ಯಾವಾಗಲೂ ಸಲ್ಲಿಸುತ್ತಾ ಇರುತ್ತೇವೆ. ಇವರು ಹಿಂದುಳಿದ, ಅಲ್ಪಸಂಖ್ಯಾತ, ಲಿಂಗಾಯತ ಹಾಗೂ ಎಲ್ಲಾ ಸಮಾಜದ ಪ್ರೀತಿಯ ಕೂಸಾಗಿದ್ದಾರೆ. ಇಂದಿನ ಇವರ ಚುನಾವಣೆ ವಿಶೇಷವಾಗಿ ಮೇಲ್ವರ್ಗದವರೇ ಮಾಡುತ್ತಿದ್ದಾರೆ. ಅದಕ್ಕಾಗಿ ಇಂತಹ ಹುಟ್ಟು ಹೋರಾಟಗಾರನಿಗೆ ದಲಿತ ಸಮುದಾಯದ ಪರವಾಗಿ ನಾವೆಲ್ಲರೂ ಈ ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಆರ್ ಪಿ ಐ (ಎ) ಪಕ್ಷದ ಅಭ್ಯರ್ಥಿಯಾದ ಜಿತೇಂದ್ರ ಕಾಂಬಳೆ ಇವರಿಗೆ ಬೆಂಬಲಿಸುತಿದ್ದೇವೆ.ಅಲ್ಲದೇ ಚುನಾವಣೆಗಿಂತ ಮುಂಚೆ ಜಿತೇಂದ್ರ ಕಾಂಬಳೆ ಇವರು ಪತ್ರಿಕಾಗೋಷ್ಠಿಯಲ್ಲಿ,* 25 ಅಡಿಯ ಎತ್ತರದ ಅಂಬೇಡ್ಕರ ಬಂಗಾರದ ಮೂರ್ತಿ ವಿಜಯಪುರದಲ್ಲಿ ಸ್ಥಾಪಿಸಲಾಗುವುದು.* ಲಿಂಬೆ ಬೆಳೆಗಾರರಿಗೆ ವಿಶ್ವ ಮಾರುಕಟ್ಟೆಯಲ್ಲಿನ ಬೆಲೆ ಸಿಗುವಂತೆ ಮಾಡುವುದು.* ಆಲಮಟ್ಟಿ ಆಣೆಕಟ್ಟಿನ ನೀರಿನ ಮಟ್ಟ 524 ಮೀ ಕ್ಕೆ ಏರಿಸುವುದು.* ಸಹೋದರಿಯರು/ತಾಯಂದರಿಗಾಗಿ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಲಾಗುವುದು. (ಒಳಚರಂಡಿ ವ್ಯವಸ್ಥೆಯೊಂದಿಗೆ) ಈ ರೀತಿಯಾಗಿ ಹೇಳಿರುವುದು ಇಲ್ಲಿ ನೆನಪಿಸುವುದು ಅವಶ್ಯವಾಗಿದೆ.ಈ ಸಂದರ್ಭದಲ್ಲಿ ಮುಖಂಡರಾದ ಪರಶುರಾಮ ಉಕ್ಕಲಿ. ಸುರೇಶ ಕಾಂಬಳೆ.ಭೀಮಾಶಂಕರ ಚೋರಗಿ. ನಾರಾಯಣ ವಾಲೀಕಾರ.ಆಕಾಶ ದೊಡ್ಡಮನಿ. ಹಾಗೂ ಇನ್ನೂ ಅನೇಕರು ಈ ಸಂದರ್ಭದಲ್ಲಿ ಇದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಶಿವಪ್ಪ.ಬಿ.ಹರಿಜನ.ಇಂಡಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button