ಸಾಂಕ್ರಾಮಿಕ ರೋಗಗಳ ತಡೆಗೆ ಮುಂಜಾಗ್ರತೆ ಕ್ರಮಗಳ ಪಾಲಿಸಿ – ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ.
ಮನ್ನಿಕಟ್ಟಿ ನ.19

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ, ಮನ್ನಿಕಟ್ಟಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳ ಮುಂಜಾಗ್ರತೆ ಆರೋಗ್ಯ ಅರಿವು ಜನಜಾಗೃತಿ ಆಯೋಜಿಸಲಾಗಿತ್ತು, ಗ್ರಾಮದ ಬಸವರಾಜ ಜುಮನಾಳ ಸಾಂಕ್ರಾಮಿಕ ರೋಗಗಳ ವೈಜ್ಞಾನಿಕ ಮಾಹಿತಿ ಕರಪತ್ರ ಸಾರ್ವಜನಿಕರಿಗೆ ವಿತರಿಸುವ ಮುಖಾಂತರ ಜಾಗೃತಿಗೆ ಚಾಲನೆ ನೀಡದಿರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ, ಎಸ್.ಎಸ್ ಅಂಗಡಿಯವರು, ರೋಗ ಬರದಂತೆ ಮುನ್ನೆಚ್ಚರಿಕೆ ಜಾಗೃತಿ ವಹಿಸಿಬೇಕು.

ಸೊಳ್ಳೆ ಉತ್ಪತ್ತಿ ತಾಣಗಳ ಸ್ವಚ್ಛತೆ ಮನೆ ಸುತ್ತಮುತ್ತ ಪರಿಸರ ಸ್ವಚ್ಛತೆ, ವಯಕ್ತಿಕ ಸ್ವಚ್ಛತೆ, ಶುದ್ಧ ನೀರು ಸೇವನೆ ಸಮತೋಲನ ಆಹಾರ ಸೇವನೆ ಮಾಡಬೇಕು ವಯಕ್ತಿಕ ಸ್ವಚ್ಛತೆ, ಸುತ್ತ ಮುತ್ತ ಪರಿಸರ ಸ್ವಚ್ಛತೆಯಿಂದ ಉತ್ತಮ ಆರೋಗ್ಯ ಸಂಪಾದನೆ. ಎಸ್.ಎಸ್ ಅಂಗಡಿ ಯಾವುದೇ ತರಹ ಜ್ವರ ಕಾಣಿಸಿದರೆ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಚಿಕಿತ್ಸೆ ಉಚಿತ ವಾಗಿರುತ್ತದೆ. ಮುಂಜಾಗ್ರತೆ ಕ್ರಮಗಳ ಪಾಲಿಸಿ ಆಸ್ಪತ್ರೆ ಅಲೆದಾಟ ತಪ್ಪಿಸಿಕೊಳ್ಳಿ ಎಂದರು ಗ್ರಾಮದಲ್ಲಿ ಸಂಶಯುತ ಮಲೇರಿಯಾ ರಕ್ತ ಲೇಪನ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಯಿತು. ಸಾಂಕ್ರಾಮಿಕ ರೋಗಗಳ ಮುಂಜಾಗ್ರತೆ ಆರೋಗ್ಯ ಅರಿವು ಜನಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಆಶಾ ಕಾರ್ಯಕರ್ತೆ ಸುವರ್ಣ ಗೌಡರ, ಗ್ರಾಮದ ಮುಖಂಡರು ಯುವಕರು ಶಾಲಾ ಮುದ್ಧು ಮಕ್ಕಳು ಭಾಗವಹಿಸಿದ್ದರು.