ಅತಿ ಮೊಬೈಲ್ ಬಳಕೆ ಮಾನಸಿಕ ರೋಗ – ಮಹಿಬೂಬ್ ಮದ್ಲಾಪುರ.
ಮಾನ್ವಿ ನ.22

ತಾಲೂಕಿನ ಬ್ಯಾಗವಾಟ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾನವಿ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು. ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿ ಮಹಿಬೂಬ್ ಮದ್ಲಾಪುರ ಮಾತನಾಡುತ್ತಾ “ಯುವಕರು ಮೊಬೈಲ್ ನಲ್ಲಿ ಮುಳಗಿ ತಮ್ಮ ಜೀವನದ ಗುರಿಯನ್ನು ಮರೆತು ಬಿಟ್ಟಿದ್ದಾರೆ. ಒಂದು ನಿದರ್ಶನ ಸ್ವಂತ ತಾಯಿ ಕೊನೆ ಉಸಿರು ಬಿಡುವ ಸಮಯ ಕೊನೆಯಗಳಿಗೆ ಆಸ್ಪತ್ರೆಯಲ್ಲಿ ಮಗ ಕಾಲುಮೇಲೆ ಕಾಲು ಹಾಕಿಕೊಂಡು ಫ್ರೀಫೇರ್ ಪಬ್ಜೀ ಆಡುತ್ತಿರುವುದನ್ನು ಕಣ್ಣಾರೆ ಕಂಡಿದ್ದು ಯುವಕರು ದುಶ್ಚಟಗಳಿಗೆ ಬಲಿಯಾಗಿ ಬದುಕನ್ನು ಕಡಿಮೆ ವಯಸ್ಸಿನಲ್ಲಿ ಕೊನೆ ಗೊಳಿಸಿ ಕೊಳ್ಳುತ್ತಿದ್ದಾರೆ. ಬದುಕು ಅರ್ಥಪೂರ್ಣ ಉದ್ದೇಶ ಇಟ್ಟುಕೊಂಡು ಬದುಕಬೇಕೆ ವಿನಃ ವ್ಯರ್ಥವಾಗಿ ಬದುಕಬಾರದು” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಸಮೂಹ ಸಮನ್ವಯ ಅಧಿಕಾರಿ ಜ್ಯೋತಿ ಮಾತನಾಡಿ “ಕಾಲ ಕೆಟ್ಟಿಲ್ಲ ಕಾಲದಲ್ಲಿರುವ ನಾವುಗಳು ಜೀವನದ ಕ್ರಮ ಮರೆತಿದ್ದೇವೆ, ಯುವಕರು ನಮ್ಮ ದೇಶ ಕಟ್ಟುವ ಶಿಲ್ಪಿಗಳು ನಾವು ನಮ್ಮ ಎಲ್ಲಾ ಕನಸ್ಸುಗಳನ್ನು ಯುವಕರಲ್ಲಿ ತುಂಬುವ ಅವಶ್ಯಕತೆ ಇದೆ. ಸ್ವಾಸ್ಥ್ಯ ಸಮಾಜದ ಕಲ್ಪನೆ ನಮ್ಮ ಪೂಜ್ಯ ಶ್ರೀಗಳದ್ದು ನಾವು ನೀವು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿ ಕೊಂಡು ಏಕಾಗ್ರತೆಯಿಂದ ಗುರಿಯತ್ತಾ ಸಾಗಿ ನನ್ನ ದೇಶಕ್ಕಾಗಿ ನನ್ನಿಂದ ಕೊಡುಗೆ ನೀಡಬೇಕಾಗುವ ನಿಟ್ಟಿನಲ್ಲಿ ಸಾಗೋಣ” ಎಂದರು. ಕಾರ್ಯಕ್ರಮದಲ್ಲಿ ಸ್ವಾಸ್ಥ್ಯ ಸಂಕಲ್ಪದ ಪ್ರತಿಜ್ಞೆ ಭೋದಿಸಲಾಯಿತು. ವೇದಿಕೆಯಲ್ಲಿ ಪ್ರ. ಪ್ರಾಚಾರ್ಯರಾದ ಪ್ರಕಾಶ, ಮೇಲ್ವಿಚಾರಕಿ ಶರಣಮ್ಮ, ಶಿಕ್ಷಕ ಶಿವರಾಜ್, ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ, ತಸ್ಲೀಮ್, ರಿಯಾನ ಮತ್ತು ವಿದ್ಯಾರ್ಥಿಗಳು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ