ನಿಧನ ವಾರ್ತೆ – ಎ.ಕೆ. ಬುಳ್ಳಪ್ಪ ಕೂಡ್ಲಿಗಿ.

ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ 17ನೇ ವಾರ್ಡ್ ರಾಜೀವ ಗಾಂಧೀ ನಗರ ವಾಸಿ, ಹಾಗೂ ದಲಿತ ಸಮುದಾಯದ ಹಿರಿಯರೂ, ಹಿರಿಯ ಹಲಗೆ ವಾದ್ಯ ಕಲಾವಿದರು. ಕಾಂಗ್ರೆಸ್ ಪಕ್ಷದ ಹಿರಿಯ ಕಟ್ಟಾಳು ಎ.ಕೆ.ಬುಳ್ಳಪ್ಪ(65). ಜು5ರಂದು ಬೆಳಿಗ್ಗೆ ಸ್ವ ಗೃಹದಲ್ಲಿ ನಿಧನ ರಾಗಿದ್ದಾರೆ. ಅವರು ಹಲವು ದಿನಗಳಿಂದ, ವಯೋಸಹಜ ಅನಾರೋಗ್ಯ ದಿಂದ ಬಳಲುತಿದ್ದರು. ಐವರು ಪುತ್ರಿಯರನ್ನು , ಹಾಗೂ ಪತ್ರಕರ್ತ ಹಾಗೂ ಯುವ ಹೋರಾಟಗಾರ ಸಾಲುಮನಿ ರಾಘವೇಂದ್ರ ಸೇರಿದಂತೆ. ಮೂವರು ಪುತ್ರರನ್ನು ಅಪಾರ ಬಂಧು ಬಳಗವನ್ನು, ಅವರು ಬಿಟ್ಟು ಅಗಲಿದ್ದಾರೆ. *ಅಂತ್ಯಕ್ರಿಯೆ*-ಜು5ರಂದು ಸಂಜೆ2:30 ಕ್ಕೆ ಗಂಟೆಗೆ ಪಟ್ಟಣದ ಶಾಂತಿ ವನದಲ್ಲಿ, ಮೃತರ ಅಂತ್ಯ ಕ್ರಿಯೆ ಜರುಗಲಿದೆ.*ಸಂತಾಪ* ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ದಲಿತ ಸಮಾಜದರು, ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಸೇರಿದಂತೆ ಹಲವು ಗಣ್ಯ ಮಾನ್ಯರು. ಪತ್ರಕರ್ತರು, ಸಮಾಜ ಸೇವಕರು, ಗಣ್ಯರು, ಕಾಂಗ್ರೇಸ್ ಪಕ್ಷ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಹಾಗೂ ವಿವಿಧ ಸಮಾಜದವರು. ವಿವಿಧ ದಲಿತ ಸಂಘಟನೆಗಳು, ವಿವಿದ ಕಲಾವಿಧರ ಸಂಘಟನೆಗಳು, ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಜನ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಸಮುದಾಯಗಳ ಮುಖಂಡರು, ಹಾಗೂ ಸಿಹಿ ಕಹಿ ಪತ್ರಿಕೆ ಮತ್ತು ಎಸ್.ಕೆ.ನ್ಯೂಸ್ ಚಾನಲ್ ದ ಬಳಗ ದಿಂದ ಎ.ಕೆ.ಬುಳ್ಳಪ್ಪರವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.