ಹೊನ್ನಸಿರಿ ಸೌಹಾರ್ದ ಪತ್ತಿನ ಸಹಕಾರಿ ಸಂಘವನ್ನು ಉದ್ಘಾಟಿಸಿದ – ಗುರು ಮಹಾಂತ ಶ್ರೀಗಳು.
ಹುನಗುಂದ ಅಕ್ಟೋಬರ್.3

ಪಟ್ಟಣದ ಹೊನ್ನಸಿರಿ ಸೌಹಾರ್ಧ ಪತ್ತಿನ ಸಹಕಾರಿ ಸಂಘವನ್ನು ಚಿತ್ತರಗಿ ಸಂಸ್ಥಾನ ಮಠ ಇಳಕಲ್ಲದ ಗುರು ಮಹಾಂತ ಶ್ರೀಗಳು ಮತ್ತು ನಂದವಾಡಗಿ ಆಳಂದ ಡಾ.ಅಭಿನವ ಚನ್ನಬಸವ ಶಿವಾಚಾರ್ಯರು ಹಾಗೂ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿ ನೂತನ ಬ್ಯಾಂಕ್ ಉನ್ನತ ಮಟ್ಟದಲ್ಲಿ ಬೆಳದು ಸಾವಿರಾರು ಜನರಿಗೆ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಬ್ಯಾಂಕ್ ಅಧ್ಯಕ್ಷ ಡಾ.ಬಸವರಾಜ ಕಡಿವಾಲ,ಉಪಾಧ್ಯಕ್ಷೆ ಸುವರ್ಣಾ ವೀರಾಪೂರ,ನಿರ್ದೇಶಕರಾದ ಅಮರೇಶ ಹಳಪೇಟಿ,ವೀರೇಶ ಮುದಗಲ್ಲ,ಸಂಗಪ್ಪ ಹೊಸೂರ,ಮಹೇಶ ಬೆಳ್ಳಿಹಾಳ,ವೀರಣ್ಣ ಹಂಡರಗಲ್ಲ,ಲಾಲಾಬಾಷಾ ಶಿವನಗುತ್ತಿ,ಮಲ್ಲಿಕಾರ್ಜುನ ಚೂರಿ,ಮಲ್ಲೇಶಪ್ಪ ಹುನಗುಂದ,ಸಕರೆಪ್ಪ ಬಂಕದ,ಬೋರಮ್ಮ ಪಾಟೀಲ,ಸುನಂದಾ ಹಳಪೇಟಿ,ಮುಖಂಡರಾದ ರಾಜಕುಮಾರ ಬಾದವಾಡಗಿ,ಗಿರೀಶ ಹಳಪೇಟಿ,ಮುಖ್ಯಕಾರ್ಯನಿರ್ವಾಹಕ ಚೇತನ ಮನಗೂಳಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ