ಪರಿಸರ ಸ್ನೇಹಿ ದೀಪ ಬೆಳಗಿಸಿ ಮಾಲಿನ್ಯ ತಡೆಗಟ್ಟಿ – ಪ್ರೇಮ.ಎಸ್.
ಹೊಸಪೇಟೆ ನ.26

ಕಾರ್ತಿಕ ಮಾಸದ ಅಂಗವಾಗಿ ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ 6,000 ಪರಿಸರ ಸ್ನೇಹಿ ದೀಪಗಳನ್ನು ಬೆಳಗಿಸುವುದರ ಮೂಲಕ “ಪರಿಸರ ಸ್ನೇಹಿ ದೀಪ ಬೆಳಗಿಸಿ ಮಾಲಿನ್ಯ ತಡೆಗಟ್ಟಿ” ಎಂದು ಬಳ್ಳಾರಿಯ “ರೇಣುಕಾ ಗ್ರಾಮೀಣಾಭಿವೃದ್ಧಿ” ಟ್ರಸ್ಟ್ ಮುಖ್ಯಸ್ಥೆ ಪ್ರೇಮ.ಎಸ್ ರವರು ಸಂದೇಶ ಕೊಟ್ಟರು.ಕಾರ್ತಿಕ ಮಾಸದ ಕೊನೆಯ ವಾರವಾದ ಸೋಮವಾರ ಸಾಯಂಕಾಲ 7:00 ಗಂಟೆಯಿಂದ ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನದ ಮುಂದೆ ನೂರಾರು ಭಕ್ತ ಗಣ ಸೇರಿ ದೀಪಗಳನ್ನು ಬೆಳಗಿಸಿದರು. ರೇಣುಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ 6,000 ಪರಿಸರ ಸ್ನೇಹಿ ದೀಪಗಳನ್ನು ಹಚ್ಚಲು ಭಕ್ತರಿಗೆ ವ್ಯವಸ್ಥೆ ಮಾಡಿ ಕೊಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆ ಮುಖ್ಯಸ್ಥರಾದ ಪ್ರೇಮ.ಎಸ್ ರವರು ನಾವು ಬಳ್ಳಾರಿ ಇಂದ ಬಂದು ದೀಪ ಬೆಳಗಿಸುವ ಕಾರ್ಯಕ್ರಮವನ್ನು ನಮ್ಮ ಟ್ರಸ್ಟ್ ವತಿಯಿಂದ ಆಯೋಜಿಸಿದ್ದೇವೆ. ಈ ದೀಪಗಳನ್ನು ಹಚ್ಚುವುದರಿಂದ ನೆಲತೊಟ್ಟು ಸ್ವಚ್ಛವಾಗಿರುತ್ತದೆ. ಈ ಹಿಂದೆ ಹಲವಾರು ಕಡೆ ದೀಪ ಬೆಳಗಿಸುವ ವ್ಯವಸ್ಥೆ ಮಾಡಿದ್ದೇವೆ. ಧಾರ್ಮಿಕ ದತ್ತಿ ಇಲಾಖೆಯಿಂದ ಅನುಮತಿ ಪಡೆದು ಹಂಪಿಯಲ್ಲಿ ಇದೆ ಮೊದಲ ಬಾರಿಗೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಮುಂದಿನ ವರ್ಷದಲ್ಲಿ ಲಕ್ಷ ದೀಪಗಳನ್ನು ಹಚ್ಚುವ ಯೋಜನೆ ಇದೆ. ಯೋಜನೆಯಲ್ಲಿ ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಯೋಗದಲ್ಲಿ ಮಾಡ ಬೇಕೆಂದಿದ್ದೇವೆ. ಆಸಕ್ತರಿಗೆ ಟ್ರಸ್ಟ್ ಕಡೆಯಿಂದ ಬತ್ತಿಗಳನ್ನು ಕೊಟ್ಟು ಮರಳಿ ಹಣಕ್ಕೆ ಕೊಂಡು ಕೊಳ್ಳುತ್ತೇವೆ ಅವುಗಳನ್ನು ಇಂತಹ ಕಾರ್ಯಕ್ರಮಗಳಿಗೆ ಬಳಸಿ ಕೊಳ್ಳುತ್ತೇವೆ ಆಸಕ್ತರು ನಮ್ಮನ್ನು ಸಂಪರ್ಕಿಸಬಹುದು ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ