ಪ್ರೊಫೆಸರ್ ಡಾ.ಚಂದ್ರಶೇಖರ ಎಸ್.ಬಿ ಅವರಿಗೆ – “ಗೌರವ ಡಾಕ್ಟರೇಟ್” ಗರಿ.
ಮರಿಯಮ್ಮನಹಳ್ಳಿ ಡಿ.02

ಪಟ್ಟಣದ ನಿವಾಸಿ ಪ್ರೊಫೆಸರ್ ಡಾ. ಚಂದ್ರಶೇಖರ ಎಸ್.ಬಿ ಅವರ ಸೇವೆಯನ್ನು ಗುರುತಿಸಿ “ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ” “ಗೌರವ ಡಾಕ್ಟರೇಟ್” ಗರಿ ನೀಡಿ ಗೌರವಿಸಿದೆ. ಏಷಿಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಯುಎಸ್ಎ (USA) ವತಿಯಿಂದ ದಿನಾಂಕ 29.11.2024 ರಂದು ತಮಿಳುನಾಡಿನ ಹೊಸೂರಿನಲ್ಲಿ ನಡೆದ ಘಟಿಕೋತ್ಸವದಲ್ಲಿ ಪ್ರೊಫೆಸರ್ ಡಾ. ಚಂದ್ರಶೇಖರ ಎಸ್.ಬಿ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ “ಗೌರವ ಡಾಕ್ಟರೇಟ್” ಪದವಿಯನ್ನು ನೀಡಿ ಗೌರವಿಸಿರುತ್ತಾರೆ.ಹಲವು ದಶಕಗಳಿಂದ ದಮನಿತ ಜನಾಂಗಗಳಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಜಾಗೃತಿಯನ್ನು ಮೂಡಿಸಲು ನಾಡಿನಾದ್ಯಂತ ನೂರಾರು ವಿಚಾರ ಸಂಕಿರಣ, ಅಧ್ಯಯನ ಶಿಬಿರ, ಉಪನ್ಯಾಸಗಳನ್ನು ನೀಡಿ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡುದದರ ಫಲವಾಗಿ ಈ ಗೌರವ ಸಂದಿದ್ದು. ವಿಶ್ವವಿದ್ಯಾಲದ ಹೆಡ್ ಕೋಚ್ ಮಾಸ್ಟರ್ ವಿ ಬಾಬುವಿಜಯನ್, ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಅಧ್ಯಕ್ಷರಾದ ಡಾ, ಕೆ.ಎ ಮನೋಕರಣ್, ಖ್ಯಾತ ದಕ್ಷಿಣ ಭಾರತದ ಚಲನ ಚಿತ್ರ ನಿರ್ದೇಶಕರಾದ ಡಾ.ಬಿ ರಾಮಮೂರ್ತಿ, ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ, ದೊಡ್ಡಪ್ಪ ಪೂಜಾರಿ, ಆಂದ್ರಪ್ರದೇಶದ ಗ್ಲೋಬಲ್ ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷರಾದ ಚಪ್ಪಡಿ ನಾಗಪಣಿಶ್ರೀ, ರಾಯಲ ಸೀಮಾ ರಾಷ್ಟ್ರ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ,ಕುಂಚಮ್ ಮೋರೆ ವೆಂಕಟಸುಬ್ಬಾರೆಡ್ಡಿ, ತೆಲಂಗಾಣ ರಾಜ್ಯದ ಹ್ಯೂಮನ್ ರೈಟ್ಸ್ ಕೌನ್ಸಿಲ್ ಆಫ್ ಪೀಪಲ್ಸ್ ಸಂಸ್ಥಾಪಕ ಅಧ್ಯಕ್ಷರಾದ ಡಾ, ಚೇರಳ ಪ್ರಕಾಶ್, ಕನ್ನಡ ಸಿನೆಮಾ ನಿರ್ದೇಶಕ ಮತ್ತು ಸಂಭಾಷಣಾಕಾರರಾದ ಡಾ, ಗುಣವಂತ ಮಂಜು ಮುಂತಾದವರ ಸಮ್ಮುಖದಲ್ಲಿ ಪ್ರಶಸ್ತಿ ನೀಡಲಾಯಿತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ