ಡಾ, ಬಿ.ಆರ್ ಅಂಬೇಡ್ಕರ್ ಅವರ – ಮಹಾ ಪರಿನಿರ್ವಾಣ ದಿನ.
ಕೊಟ್ಟೂರು ಡಿ. 06

ತಾಲೂಕ ಕಾರ್ಯಾಲಯದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68 ನೇ. ಪುಣ್ಯತಿಥಿ “ಮಹಾ ಪರಿನಿರ್ವಾಣ ದಿನ” ವನ್ನು ಆಚರಿಸಲಾಯಿತು. ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ತಹಶೀಲ್ದಾರರಾದ ಅಮರೇಶ ಜಿ.ಕೆ ಮತ್ತು ದಲಿತ ಮುಖಂಡರಿಂದ ಪುಪ್ಪಾರ್ಚನೆ ಮಾಡಿದರು. ನಂತರ ಒಂದು ನಿಮಿಷದ ಮೌನಾಚರಣೆಯ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು. ಡಾ, ಬಿ.ಆರ್ ಅಂಬೇಡ್ಕರ್ ಅವರು ಬರೀ ಸಂವಿಧಾನ ಶಿಲ್ಪಿ ಮಾತ್ರವಲ್ಲದೇ ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನ ದಿಂದ ಹೋರಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯಸಿಗುವಂತೆ ಮಾಡಿದ ಮಹಾನ್ ಮಾನವತಾ ವಾದಿಯಾಗಿದ್ದರು. 1891 ಏಪ್ರಿಲ್-14 ರಂದು ಜನಸಿದ ಅವರು 1956 ಡಿಸೆಂಬರ್-06 ರಂದು ದೇಹತ್ಯಾಗ ಮಾಡಿದರು. ಬೌದ್ಧ ಧರ್ಮದ ಗುರಿಗಳಲ್ಲಿ ಮಹಾ ಪರಿನಿರ್ವಾಣವು ಒಂದು. ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಸೇರಿದ್ದ ಕಾರಣ ಅವರು ದೇಹತ್ಯಾಗ ಮಾಡಿದ ದಿನವನ್ನು “ಮಹಾ ಪರಿರ್ವಾಣ ದಿನ” ವನ್ನಾಗಿ ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ ಎ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬದ್ಯಾನಾಯಕ್ ಬದ್ದಿ.ಮರಿಸ್ವಾಮಿ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರು, ತೆಗ್ಗಿನಕೇರಿ ಕೊಟ್ರೇಶ್ ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರು, ತಾಲೂಕು ಡಿ.ಎಸ್.ಎಸ್. ಮುಖಂಡರಾದ ಹನುಮಂತಪ್ಪ ವಕೀಲರು, ಪರಶುರಾಮ, ಕೊಲಾರಪ್ಪ, ವೀರಭದ್ರಪ್ಪ, ಎ.ಎಸ್.ಐ. ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯಾದ ವೀರೇಶ ತುಪ್ಪದ, ಸದಾನಂದಯ್ಯ, ಉಪ ತಹಶೀಲ್ದಾರ್ ಅನ್ನದಾನೇಶ.ಬಿ ಪತ್ತಾರ್ ಹಾಗೂ ಕಛೇರಿಯ ಸಿಬ್ಬಂದಿಯವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು