ಟಿ.ಹೆಚ್ ದಾಸಣ್ಣ ಸಮಾಜ ಸೇವೆ ಮಾಡಿ ಅಮರ ರಾಗಿದ್ದಾರೆ – ರವಿ.ದಳವಾಯಿ.

ತರೀಕೆರೆ ಡಿ. 06

ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡ ಟಿ.ಎಚ್ ದಾಸಣ್ಣ ಎಂದೆಂದಿಗೂ ಅಮರವಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ರವಿ ದಳವಾಯಿ ಹೇಳಿದರು. ಅವರು ಇಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ದಾಸಣ್ಣನವರಿಗೆ ಶ್ರದ್ಧಾಂಜಲಿ ಸಭೆ ಮತ್ತು ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ದಾಸಣ್ಣನವರು ವಿಐಎಲ್ ನೌಕರರಾಗಿದ್ದು, ಅವರು ನಿಧನದ ನಂತರ ಅವರ ಇಚ್ಛೆಯಂತೆ ಕಣ್ಣುಗಳನ್ನು ದಾನ ಮಾಡಿದರು. ಅವರ ದೇಹವನ್ನು ಸಿಮ್ಸ್ ಆಸ್ಪತ್ರೆಗೆ ದಾನ ಮಾಡಲಾಯಿತು ಎಂದು ಹೇಳಿದರು. ಶ್ರೀಯುತರಿಗೆ ಶ್ರದ್ಧಾಂಜಲಿ ಅರ್ಪಿಸಿದ ಕನ್ನಡ ಶ್ರೀ ಬಿ.ಎಸ್ ಭಗವಾನ್ ಮಾತನಾಡಿ ವ್ಯಕ್ತಿ ಸತ್ತ ನಂತರವೂ ತಮ್ಮ ದೇಹ ದಾನ ಮಾಡಿ ಅಮರ ವ್ಯಕ್ತಿ ಯಾಗಿದ್ದಾರೆ. ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಯೋಗದ ದೃಷ್ಟಿಯಿಂದ ದೇಹ ದಾನ ಮಾಡುವ ಮೂಲಕ ವ್ಯಕ್ತಿ ಜೀವಂತವಾಗಿದ್ದಾರೆ ಎಂದು ಹೇಳಿದರು. ಕೆ.ಎಸ್ ಶಿವಣ್ಣ ಮಾತನಾಡುತ್ತಾ, ದಾಸಣ್ಣನವರು ನಮ್ಮ ಜೊತೆಯಲ್ಲಿ ಕಣ್ಣಿನ ಶಿಬಿರದಲ್ಲಿ ಬರವಣಿಗೆ ಮಾಡುತ್ತಿದ್ದು ನಮ್ಮೊಂದಿಗೆ ಸದಾ ಕ್ರಿಯಾಶೀಲರಾಗಿ ಶಿಬಿರದ ಯಶಸ್ಸಿಗೆ ದುಡಿದಿದ್ದಾರೆ, ಇವರ ಹಾಗೆ ಎಲ್ಲರೂ ಸಹ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು. ಕ್ರಿಸ್ತ ದಯಕುಮಾರ್ ಮಾತನಾಡಿ ದಾಸಣ್ಣನವರು ವಿಐಎಲ್ ಕಾರ್ಖಾನೆಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಯಾಗಿದ್ದು ತಾನು ಸತ್ತ ನಂತರ ತಮ್ಮ ಕಣ್ಣು ಮತ್ತು ದೇಹವನ್ನು ದಾನ ಮಾಡಿ ಅರಿವಿನ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು. ಶಿವಮೊಗ್ಗದ ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರು ಮತ್ತು ರವಿ ಸಿಬ್ಬಂದಿಯವರು ಶಿಬಿರವನ್ನು ನಡೆಸಿ ಕೊಟ್ಟು 35 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿ ಕೊಂಡರು. ಒಟ್ಟು 101 ಜನರ ನೇತ್ರ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ, ಅಮೃತ ಮತ್ತು ಸಿಬ್ಬಂದಿಗಳು ಹಾಗೂ ರವಿ ಮತ್ತು ತಂಡದವರು, ತ.ಮ ದೇವನಂದ, ಸುರೇಶ್.ಎಂ ಮಾಲತ್ಕರ್, ಸೈಯದ್ ಮುಯಿದ್ದೀನ್ ಉಪಸ್ಥಿತರಿದ್ದು ಇಮ್ರಾನ್ ಬೇಗ್ ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ವಂದನಾರ್ಪಣೆಯನ್ನು ಮಾಡಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button