ಚಿತ್ತವಾಡ್ಗಿ ರೈಲ್ವೆ LC 5 ಹಳಿ ದಾಟಲು ಶಾಲಾ ಮಕ್ಕಳು ಹಾಗೂ ರೋಗಿಗಳ – ಪರದಾಟ.
ಹೊಸಪೇಟೆ ಡಿ.06

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಗರದ ಗುರುವಾರ ದಂದು ಚಿತ್ತವಾಡ್ಗಿ ಖಾಜಾ ನಗರ ರೈಲ್ವೆ ಗೇಟ್ LC 5. ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರೈಲ್ವೆ ಕ್ರಾಸಿಂಗ್ ಅಂದ ಮೇಲೆ ಗೇಟ್ ಮುಚ್ಚಿದಾಗ ಕಾಯುವುದು ಎಲ್ಲೆಡೆ ಅನಿವಾರ್ಯವೇ. ಆದರೆ ಬುಧವಾರ ದಿಂದ ಪ್ರತಿಯೊಂದು ರೈಲಿಗೆ ಒಂದು ತಾಸು ಗೇಟ್ ಮುಚ್ಚುವುದು ಮಾಮೂಲಿ ಎಂಬಂತಾಗಿದೆ. ಇದರಿಂದಾಗಿ ಶಾಲಾ ಮಕ್ಕಳು, ಉದ್ಯೋಗಿಗಳು ರೈತರಿಗೆ, ರೋಗಿಗಳಿಗೆ, ವಯಸ್ಕರಿಗೆ ಬೆಳಗ್ಗೆ ಮಧ್ಯಾಹ್ನ ಸಂಜೆ ಪರದಾಡುವಂತಾಗಿದೆ. ಹೊಸಪೇಟೆ ಚಿತ್ತವಾಡಗಿ ಖಾಜಾ ನಗರ ಐ.ಎಸ್.ಆರ್ ರಸ್ತೆ ರೈಲ್ವೆ ಗೇಟ್ LC 4, LC 5 ದಾಟುವುದೇ ದೊಡ್ಡ ತಲೆನೋವು ನಿತ್ಯ ಸರಾಸರಿ 50 ಕ್ಕೂ ಹೆಚ್ಚು ರೈಲು ಸಂಚಾರ ಇರುವುದರಿಂದ ಎರಡು ತಾಸುಕ್ಕೊಮ್ಮೆ ಗೇಟ್ ಬಂದ್ಶಾಲಾ ಮಕ್ಕಳು, ಉದ್ಯೋಗಿಗಳ ನಿತ್ಯ ಪರದಾಟ, ತರಾ ತುರಿಯಲ್ಲಿ ಹಳಿ ದಾಟುವ ಅನಿವಾರ್ಯತೆ ಸಾರ್ವಜನಿಕರಿಂದ ತರಾಟೆ ರೈಲ್ವೆ ಅಧಿಕಾರಿಗಳಿಗೆ ಮತ್ತು ಗೇಟ್ ಮೇನ್ ಹಿಡೀ ಶಾಪ ಹಾಕುತ್ತಾ ಪೇಚಾಡುತ್ತಾ ಸಿಲುಕಿದರು. ಜೆ.ಶಿವಕುಮಾರ್, ಚಿತ್ತಾವಾಡಗಿ ನಿವಾಸಿ ಮಾತನಾಡಿ ರೈಲ್ವೆ ಗೇಟ್ ಮೂಲಕ ನಿತ್ಯ ಸರಾಸರಿ 50 ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿವೆ. ಎರಡು ದಿನದಿಂದ ಪ್ರತಿ ರೈಲಿಗೆ ಒಂದು ತಾಸು ಗೇಟ್ ಮುಚ್ಚುವ ಸ್ಥಿತಿ ಇದೆ. ಇದರಿಂದಾಗಿ ವಾಹನ ಸವಾರರು ಹಿರಿಯರಿಗೆ ಮಕ್ಕಳಿಗೆ ವಯಸ್ಸಾದವರಿಗೆ ಹೈರಾಣಾಗು ವಂತಾಗುತ್ತಿದೆ. ಚಿತ್ತವಾಡಗಿ, ಹೊಸೂರು, ಮಾಗಣಿ, ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವೂ ಆಗಿರುವುದರಿಂದ ಬೆಳಗ್ಗೆ ಮತ್ತು ಸಂಜೆ ವಿಪರೀತ ಟ್ರಾಫಿಕ್ ಜಾಮ್ ಆಗುತ್ತಿದೆ. ಸಂಬಂಧ ಪಟ್ಟ ರೈಲ್ವೆ ಅಧಿಕಾರಿಗಳು ಇದಕ್ಕೆ ತಕ್ಷಣ ಪರಿಹಾರ ಒದಗಿಸಬೇಕಿದೆ. ಎಂದು ಸ್ಥಳೀಯ ನಿವಾಸಿ ಆಗ್ರಹಿಸಿದರು ಸ್ಥಳೀಯ ನಿವಾಸಿಗಳಾದ ಬಣ್ಣದ ಮನೆ ಸೋಮಶೇಖರ್, ಮಹಮ್ಮದ್ ರಫೀಕ್, ಅಲ್ತಾಫ್ , ರೈಮಾನ್, ಅಶೋಕ, ಅಕ್ಬರ್ ಬೇಗ, ಮೌಲಾ, ಸುನಿಲ್ ಇನ್ನು ಹಲವಾರು ಸ್ಥಳೀಯರು ಒತ್ತಾಯಿಸಿದರು.
ಬಾಕ್ಸ್:-
ಹೊಸಪೇಟೆ ರೈಲ್ವೆ ಅಧಿಕಾರಿ ವ್ಯಾಸನ ಕೇರಿ ರೈಲು ತಡವಾಗಿ ಬರುವುದರಿಂದ 20 ನಿಮಿಷ ಮುಂಚಿತವಾಗಿ ಗೇಟ್ ಬಂದ್ ಮಾಡಿರುತ್ತಾರೆ. ಚಿತ್ತವಾಡಗಿಲ್ಲಿ ರೈಲ್ವೆ ಹಳಿ ಗೇಟ್ ಒಂದು ತಾಸು ಬಂದು ಮಾಡಿರೋದು ನಮ್ಮ ಗಮನಕ್ಕೆ ಬಂದಿಲ್ಲ ಆದಷ್ಟು ಕ್ರಮ ಜರುಗಿಸಿ ಸಾರ್ವಜನಿಕರಿಗೆ ಸಹಕಾರ ನೀಡುತ್ತೇವೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ