ವಿದ್ಯುತ್ ಸ್ಪರ್ಶದಿಂದ ಮಾನ್ವಿ ಪಟ್ಟಣದಲ್ಲಿ – ಬಣವೆಗಳು ಭಸ್ಮ.
ಮಾನ್ವಿ ಡಿ.24

ವಿದ್ಯುತ್ ಸ್ಪರ್ಶ ಸಂಭವಿಸಿದ ಪರಿಣಾಮ ಐವರ ಬಣವೆಗಳು ಸುಟ್ಟು ಕರಕಲಾಗಿರುವ ಘಟನೆ ಮಾನ್ವಿ ಪಟ್ಟಣದ ನಂದಿನಿ ಲೇಔಟ್ ನಲ್ಲಿ ನಡೆದಿದೆ.

ಈರಣ್ಣ, ಮಲ್ಲಯ್ಯ, ತಿಪ್ಪಮ್ಮ, ಮಾರುತಿ ಹಾಗೂ ವೀರೇಶ ಅವರು ಹಸುಗಳನ್ನು ಸಾಕಿ ಕೊಂಡು ಹೈನುಗಾರಿಕೆ ಮಾಡುತ್ತಿದ್ದರು. ಆದರೆ ವಿದ್ಯುತ್ ಸ್ಪರ್ಶವಾದ ಹಿನ್ನೆಲೆಯಲ್ಲಿ ಅಂದಾಜು 5, ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ನೊಂದವರ ಕೂಗಾಗಿದೆ.
ಅಗ್ನಿಶಾಮಕ ಠಾಣೆಯಲ್ಲಿ ಒಂದೇ ಒಂದು ವಾಹನ ಇರುವುದರಿಂದ ನಂದಿಸುವ ಕಾರ್ಯ ಕೂಡ ಸ್ವಲ್ಪ ವಿಳಂಬವಾಯಿತು. ರಾಜಕಾರಣಿಗಳು ಸಹ ಅಗ್ನಿಶಾಮಕ ಠಾಣೆಗೆ ವಾಹನ ತರಿಸುವ ಕೆಲಸ ಮಾಡಬೇಕು ಎಂದು ನೊಂದವರು ಆಗ್ರಹ ಆಗಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ