ರೈತರು ಮಾರಾಟಗಾರರು ಆಗಬೇಕು – ಕೃಷಿಕ ರೂಬಿ ಮಲ್ಲೇಶ್.

ಧೂಪದಹಳ್ಳಿ ಜು.28

ಕೃಷಿಕರು ತಾವು ಬೆಳೆದಿದ್ದನ್ನು ಬೇರೆಯವರಿಗೆ ಮಾರಾಟ ಮಾಡಲು ಕೊಟ್ಟು ನಷ್ಟ ಅನುಭವಿಸುವುದಲ್ಲ. ಅದರ ಬದಲು ರೈತರೇ ತಮ್ಮ ತಮ್ಮ ಕೃಷಿ ಉತ್ಪನ್ನಗಳನ್ನು ನೇರವಾಗಿ ಇಲ್ಲವೇ ಮೌಲ್ಯ ವರ್ಧಿಸಿ ಖುದ್ದು ಮಾರಾಟ ಮಾಡಬೇಕು. ಆ ಮೂಲಕ ಆರ್ಥಿಕವಾಗಿ ಸಧೃಡರಾಗ ಬೇಕು ಎಂದು ಕೊಟ್ಟೂರಿನ ಸಾವಯವ ಕೃಷಿಕ ರೂಬಿ ಮಲ್ಲೇಶ್ ರೈತರಿಗೆ ಕಿವಿ ಮಾತು ಹೇಳಿದರು. ಇವರು ಭಾನುವಾರ ತಾಲ್ಲೂಕಿನ ಧೂಪದಹಳ್ಳಿ ಗ್ರಾಮದ ಸಮೀಪ ಇರುವ ಅವರ ತೋಟದಲ್ಲಿ ಹಸಿರಿ ನೊಂದಿಗೆ ಮಾತುಕತೆ-10 ನೇ. ಕಾರ್ಯಕ್ರಮದ ಆತಿಥ್ಯ ವಹಿಸಿ ಮಾತನಾಡಿದರು. ಎಂದೆಂದಿಗಿಂತಲೂ ಇಂದು ಸಾವಯವ ಕೃಷಿ ಉತ್ಪನ್ನಗಳಿಗೆ ಗಣನೀಯ ಬೇಡಿಕೆ, ಮಹತ್ವ ಇದೆ. ಆದರೆ ಈ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವಲ್ಲಿ, ಮನ ವೊಲಿಸುವಲ್ಲಿ ನಾವು ಸೋಲುತ್ತಿದ್ದೇವೆ. ಹೀಗಾಗಿ ಮೊದಲು ರೈತರು ಸಾವಯವ ಬಳಕೆದಾರರ ಒಂದು ವರ್ಗವನ್ನು ಸೃಷ್ಟಿಸ ಬೇಕು.

ಹಾಗೆ ಪ್ರತಿ ಉತ್ಪನ್ನಗಳ ಬೆಲೆಯನ್ನು ನಾವೇ ನಿರ್ಧರಿಸ ಬೇಕು. ಪ್ರತಿ ಉತ್ಪನ್ನಗಳ ಪ್ರಮಾಣ, ಗುಣಮಟ್ಟ ಮತ್ತು ದರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳ ಬಾರದು. ಅಂದಾಗ ಮಾತ್ರ ರೈತರು ಆರ್ಥಿಕವಾಗಿ ಸಶಕ್ತರಾಗುತ್ತಾರೆ ಎಂದರು. ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್ ಮಾತನಾಡಿ ರೂಬಿ ಮಲ್ಲೇಶ್ ಇವರು ಬಹು ಬೆಳೆ ಕೃಷಿ ಮಾಡಿದ್ದು, ಇವರ ತೋಟ ನಿರಂತರ ಆದಾಯ ನೀಡುತ್ತಿದೆ. ಇಂತಹ ವೈಜ್ಞಾನಿಕ ಸಾವಯವ ಕೃಷಿ ಪದ್ಧತಿ ಇತತರಿಗೆ ಮಾದರಿ ಎಂದರು. ವಸಂತ್ ಮಾಲವಿ ಮಾತನಾಡಿ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮತ್ತು ನೇರ ಮಾರುಕಟ್ಟೆಯ ರುಚಿಯನ್ನು ಪ್ರತಿ ರೈತ ಹತ್ತಿಸಿ ಕೊಳ್ಳಬೇಕು ಎಂದರು. ದಾವಣಗೆರೆಯ ಜಬೀ ಉಲ್ಲಾ ಬಿದಿರು ಕೃಷಿ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಇದೇ ವೇಳೆ ಸಾವಯವ ಉತ್ಪನ್ನಗಳು, ಬೀಜಗಳ ಮಾರಾಟ ನಡೆಯಿತು. ಜೇನು ಕೃಷಿಕ ಬಸಯ್ಯಸ್ವಾಮಿ, ಸದಾನಂದ, ಓಂ ಪ್ರಕಾಶ್, ಗುರುಪ್ರಸಾದ್, ಹೇಮನಗೌಡ, ಮಹೇಂದ್ರ ಕುಮಾರ್, ಮಲ್ಲಪ್ಪ ಕುಂಬಾರ್, ಚಂದ್ರರೇಖಾ ಸೇರಿದಂತೆ ಅನೇಕ ಕೃಷಿಕರು, ಕೃಷಿ ಆಸಕ್ತರು ಭಾಗವಹಿಸಿದ್ದರು. ಕುಮಾರಿ ಸ್ವಸ್ತಿ ಪ್ರಾರ್ಥಿಸಿದರೆ, ಸಚಿನ್ ಹಸಿರುನೊಂದಿಗೆ ಮಾತುಕತೆ ಸಾಗಿ ಬಂದ ಹಾದಿ ಪರಿಚಯಿಸಿದರು. ಮಲ್ಲಿಕಾರ್ಜುನ್ ಹೊಸಪಾಳ್ಯ ಪ್ರಾಸ್ತವಿಕವಾಗಿ ಮಾತನಾಡಿದರೆ, ಸ್ವರೂಪ್ ಕೊಟ್ಟೂರು ಕಾರ್ಯಕ್ರಮ ನಿರ್ವಹಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್ ಕುಮಾರ್ ಸಿ ಕೊಟ್ಟೂರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button