ಅಮಿತ್ ಶಾ ಅಧಿಕಾರದ ಮಧದಲ್ಲಿ ಬಾಯಿಗೆ ಬಂದಂತೆ ಮಾತಾಡ್ತಾನೆ – ಎಂದ ಗೋಪಾಲ. ಕೋಣಿಮನಿ.
ನರೇಗಲ್ ಡಿ.27

ಬಾಬಾ ಸಾಬ ಅಂಬೇಡ್ಕರ್ ಅವರ ವಿಚಾರಕ್ಕೆ, ಹಾಗೂ ಅವರ ಗೌರವಕ್ಕೆ ಧಕ್ಕೆ ತರುವಂತೆ ಯಾರಾದರೂ ಬಂದ್ರೇ ನಾವು ಸುಮ್ನೆ ಇರೋಲ್ಲಾ ಎಂದು. ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಗದಗ ಜಿಲ್ಲಾ ಸಂಘಟನೆ ಆಕ್ರೋಶ.ಗದಗ ನಗರದಲ್ಲಿ ಡಿ 24 ರ ಮಂಗಳವಾರ ದಂದು, ಭೀಮ್ ಆರ್ಮಿ ಏಕತಾ ಮಿಷನ್ ಹಾಗೂ ವಿವಿಧ ದಲಿತಪರ ಸಂಘಟನೆಗಳಿಂದ ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿಯಲ್ಲಿ ಭೀಮ್ ಆರ್ಮಿ ಜಿಲ್ಲಾ ಸಲಹೆಗಾರರಾದ ವಿಶಾಲ ಗೋಶಾಲಣ್ಣವರ. ವಿಷ್ಣು ಮಾತನಾಡಿ ಅಮಿತ್ ಶಾ ಅವರೇ ದೇವ್ರ ಜಪ ಮಾಡ್ರಿ ಅಂದ್ರಲ್ಲಾ, ನಾವು ದೇವರ ಜಪ ಮಾಡಿದಾಗ ದೇವರು ನಮಗೆ ಸಹಾಯ ಮಾಡೋಕೆ ಬರಲಿಲ್ಲಾ, ನಮಗೆ ದೌರ್ಜನ್ಯವಾದಗ ದೇವರು ನಮ್ಮ ಸಹಾಯಕ್ಕೆ ಬರಲಿಲ್ಲಾ ಆಗ ಬಂದಿದ್ದು ಕಾನೂನು, ಆ ಕಾನೂನು ಮಾಡಿದ್ದೇ ಬಾಬಾ ಸಾಹೇಬ ಅಂಬೇಡ್ಕರ್ ಅವರು ಅವರೇ ನಮಗೆ ದೇವರಿಗಿಂತ ದೊಡ್ಡವರು ಅವರ ಬಗ್ಗೆ ಹಗುರವಾಗಿ ಮಾತನಾಡಿದವರು ಮುಂದಿನ ಪರಿಣಾಮ ಎದರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಾಬಾ ಸಾಹೇಬರು ಎಂದು ನನ್ನನ್ನು ಪೂಜಿಸಿ, ಆರಾಧಿಸಿ ಎಂದವರಲ್ಲಾ, ಅವರು ಈ ದೇಶದ ಸಂವಿಧಾನ ರಚಿಸಿದ ಮಹಾನ್ ನಾಯಕರು, ಅವರು ಮೂರ್ತಿ ಪೂಜೆ ಮಾಡಿ ಎಂದು ಎಲ್ಲಿ ಹೇಳಲಿಲ್ಲಾ, ವ್ಯಕ್ತಿಗಳನ್ನ ಪೂಜೆ ಮಾಡಬೇಡಿ, ಅವರ ಆಶಯ ಹಾಗೂ ವಿಚಾರಗಳನ್ನು ಜೀವಂತವಾಗಿಡಿ. ನಾವು ಅವುಗಳನ್ನು ಯಾವಾಗ ಜೀವಂತವಾಗಿ ಇಡ್ತೇವೋ ಆಗ ವ್ಯಕ್ತಿಗಳೇ ಜೀವಂತವಾಗಿರ್ತಾರೇ ಎಂದು ಹೇಳಿದರು.ನಂತರದಲ್ಲಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಸಂಘಟನೆ ಜಿಲ್ಲಾ ಅಧ್ಯಕ್ಷ ಗೋಪಾಲ ಕೋಣಿಮನಿ ಮಾತನಾಡಿ.

ನಮ್ಮ ಭೀಮ್ ಆರ್ಮಿ ಏಕತಾ ಮಿಷನ್ ಒಂದು ಪಕ್ಷಕ್ಕೆ ಸಿಮೀತವಾದ ಸಂಘಟನೆಯಲ್ಲಾ, ದೇಶದಲ್ಲಿ ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಇರುವ ಏಕೈಕ ಸಂಘಟನೆ ಭೀಮ್ ಆರ್ಮಿ, ಈ ಭೀಮ್ ಆರ್ಮಿ ಸಂಘಟನೆಯು ಬಿಜೆಪಿ ಮತ್ತು ಕಾಂಗ್ರೆಸ್ ಇವೆರಡನ್ನು ವಿರೋಧ ಮಾಡುತ್ತೇ, ಈ ಎರಡು ಸರಕಾರಗಳು ಮನುವಾದಿ ಸರಕಾರಗಳಾಗಿವೇ, ಬ್ರಾಹ್ಮರಿಂದ ಬ್ರಾಹ್ಮಣರಿಗೆ ಅಧಿಕಾರ ಹಸ್ತಾಂತರವಾಗಿವೆ .ಈ ದೇಶದ ಮೂಲ ನಿವಾಸಿಗಳಾದ ನಮಗೆ ಇಲ್ಲಿಯವರೆಗೂ ಒಂದು ಅಧಿಕಾರದ ಸುಳಿವು ಸಹ ಸಿಕ್ಕಿಲ್ಲಾ, ಆದ್ದರಿಂದ ನಾವು ಮೂಲ ನಿವಾಸಿಗಳ ಸಿದ್ದಾಂತದಂತೆ ಮುಂದೆ ಸಾಗ ಬೇಕಿದೆ. ಮೂಲ ನಿವಾಸಿಗಳ ಪಕ್ಷ ಯಾವುದಿದೆ ನಾವು ಅದನ್ನು ಬೆಂಬಲಿಸಲು ಮುಂದಾಗಬೇಕು .ನಾವು ಎಲ್ಲಿಯವರೆಗೆ ಈ ಕಾಂಗ್ರೆಸ್, ಬಿಜೆಪಿಯನ್ನು ಬೆಂಬಲಸ್ತಿವಿಯೋ ಅಲ್ಲಿವರೆಗೆ ನಾವು ಹೀಗೆ ತುಳಿತಕ್ಕೊಳಗಾಗತ್ತೇವೆ, ಬಹುಸಂಖ್ಯಾತರಾದ ನಾವು ನಮ್ಮ ಸರಕಾರ ರಚನೆ ಮಾಡದಿದ್ದರೇ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹೀಗೆ ಹಿಂದುಳಿಯ ಬೇಕಾಗುತ್ತದೆ.ಬಾಬಾ ಸಾಹೇಬ ಅವರ ಆಶಯ ಹಾಗೂ ವಿಚಾರ ಧಾರೆಗಳ ಬಗ್ಗೆ ಹಗುರವಾಗಿ ಮಾತನಾಡಿದರೇ ಮುಂದಿನ ದಿನಗಳಲ್ಲಿ ರಕ್ತ ಕ್ರಾಂತಿಯಾದರೂ ಆಗಬಹುದು ಎಂದು ಎಚ್ಚರಿಕೆನ್ನು ನೀಡಿದರು.ಈ ವೇಳೆ ಸಂಘಟನೆಯ ಪದಾಧಿಕಾರಿಗಳು ಹಗುರವಾಗಿ ಮಾತನಾಡುವ ಕೇಂದ್ರ ಮಂತ್ರಿ ಅಮಿತ್ ಶಾ ವಿರುದ್ದ ಘೋಷಣೆ ಕೂಗಿದರು. ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ,ಭೀಮ್ ಆರ್ಮಿ ಜಿಲ್ಲಾ ಸಂಚಾಲಕ ರಾಘವೇಂದ್ರ ಹರಿಜನ, ಹಾದಿಮನಿ ಜಿಲ್ಲಾ ಸಹ ಕಾರ್ಯದರ್ಶಿಗಳಾದ ವಿನಾಯಕ ಹೊಸಳ್ಳಿ ,ಮಾಲತೇಶ ಮಾದರ. ಚಂದ್ರು ಅಬ್ಬಿಗೇರಿ. ಸುರೇಶ ಹಲಗಿ. ಸುರೇಶ ಬೇವಿನಕಟ್ಟಿ. ಮಂಜು ಮೆಣಸಗಿ. ಯುವಕರು, ಇನ್ನಿತರರು ಹಾಜರಿದ್ದರು.