ಅಮರಶಿಲ್ಪಿ ಜಕಣಾಚಾರಿ ಶಿಲ್ಪ ಕಲೆಗಳು ಇಂದಿಗೂ ಜೀವಂತವಾಗಿವೆ – ಮೌನೇಶ ಕಮ್ಮಾರ.
ಗಜೇಂದ್ರಗಡ ಜ.03

ಅಮರಶಿಲ್ಪಿ ಜಕಣಾಚಾರಿ ಮನು ಕುಲಕ್ಕೆ ನೀಡಿದ ಕೊಡುಗೆ ಅಪಾರ. ಕಟ್ಟಿಗೆ, ಕಲ್ಲು ಬಂಡೆಗಳಲ್ಲಿ ತಯಾರಿಸಿದ ಅವರ ಶಿಲ್ಪಕಲೆಗಳು ಇಂದಿಗೂ ಜೀವಂತವಾಗಿವೆ ಎಂದು ಬಡಿಗೇರ ಅಭಿವೃದ್ಧಿ ಸಂಘ ಅಧ್ಯಕ್ಷ ಮೌನೇಶ ಕಮ್ಮಾರ ಹೇಳಿದರು.ಪಟ್ಟಣದ ಸಂಘದ ಕಾರ್ಯಾಲಯದಲ್ಲಿ ನಡೆದ ವಿಶ್ವ ವಿಖ್ಯಾತ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಪ್ರಯುಕ್ತ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಜಗತ್ತಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಅಂತಹ ಶಿಲ್ಪಿ ಜನಿಸಲು ಸಾಧ್ಯವಿಲ್ಲ. ಕಲ್ಲಿನಲ್ಲಿ ಕಸೂತಿ ಮಾಡಿದ ಮಹಾನ್ ವ್ಯಕ್ತಿ. ತಮ್ಮ ಕಲೆ ಮೂಲಕ ಬೇಲೂರು, ಹಳೆಬೀಡು, ಹಂಪಿ, ಐಹೊಳೆ, ಪಟ್ಟದಕಲ್ಲು ಮುಂತಾದ ಯಾತ್ರಾ ಸ್ಥಳಗಳಲ್ಲಿನ ಶಿಲೆಗಳಿಗೆ ಜೀವಂತಿಕೆ ನೀಡಿದ್ದಾರೆ ಎಂದರು. ಜಕಣಾಚಾರಿ ಇಲ್ಲದಿದ್ದರೂ ಅವರ ಶಿಲ್ಪಕಲೆಗಳು ಇಂದಿಗೂ ಶಾಶ್ವತ. ಬೇಲೂರು, ಹಳೇಬೀಡು ಗಳಲ್ಲಿರುವ ದೇಗುಲಗಳು ಜಕ್ಕಣಾಚಾರಿ ಯಿಂದ ನಿರ್ಮಾಣವಾದವು ಗಳೆಂದು ಶಿಲಾ ಶಾಸನಗಳೇ ಹೇಳುತ್ತಿವೆ. ಆದರೆ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಅವರು ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಹೇಳಿ ವಿಶ್ವಕರ್ಮ ಸಮುದಾಯವನ್ನು ಅವಮಾನಿಸುತ್ತಿರುವುದು ಬೇಸರದ ಸಂಗತಿ. ದೇಶದಲ್ಲಿ ಪ್ರತಿಯೊಂದು ಐತಿಹಾಸಿಕ ಸ್ಮಾರಕಗಳು ವಿಶ್ವಕರ್ಮ ಸಮುದಾಯದ ಶಿಲ್ಪಿಗಳಿಂದ ನಿರ್ಮಾಣವಾದವು. ಐತಿಹಾಸಿಕ ಸ್ಮಾರಕಗಳು ದೇಶದ ಅರ್ಥ ವ್ಯವಸ್ಥೆ ಮೇಲೆ ಬಹಳಷ್ಟು ಪ್ರಭಾವ ಬೀರಿವೆ ಎಂದರು. ಉಪಾಧ್ಯಕ್ಷ ಮಹಮ್ಮದಸಾಬ್ ನಾಲಬಂದ, ಶ್ರೀನಿವಾಸ ಕಮ್ಮಾರ, ವಿರುಪಾಕ್ಷಪ್ಪ ಕಮ್ಮಾರ, ಮಲ್ಲಿಕಾರ್ಜುನ ಬಡಿಗೇರ, ಪರಶುರಾಮ ಕಮ್ಮಾರ, ದೇವಪ್ಪ ಬಡಿಗೇರ, ಶೇಖಪ್ಪ ಕಮ್ಮಾರ, ಮಂಜು ಬಡಿಗೇರ, ಮಂಜು ಪತ್ತಾರ, ಫಿರೋಜಿರಾವ್ ಅರಗಂಜಿ, ಪರಶುರಾಮ ಹೊಸಮನಿ, ಪರಶುರಾಮ ಕಮ್ಮಾರ, ಮಲ್ಲೇಶ ಕಮ್ಮಾರ ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಸ್ ಮಲ್ಲನಗೌಡ್ರ ಗಜೇಂದ್ರಗಡ