ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿ – 45,000 ರೂ ಗಳಷ್ಟು ಹಾನಿ.

ಕಲಕೇರಿ ಜ.03

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಆಕಸ್ಮಿಕವಾಗಿ ಒಂದು ರೂಮಿಗೆ ಬೆಂಕಿ ಹತ್ತಿತು ಇದು ಕಲಕೇರಿ ಗ್ರಾಮದಲ್ಲಿ ಮಧ್ಯಾಹ್ನ 12:30 ಗಂಟೆಗೆ ನಡೆದ ಘಟನೆ ಮನೆಯ ಮಾಲೀಕರಾದ ಭೀಮಣ್ಣ ತಂದೆ ಸಣ್ಣ ತಿಮ್ಮಯ್ಯ ವಡ್ಡರ್ ಇವರು ಮನೆಯಲ್ಲಿ ಯಾರು ಇಲ್ಲದಾಗ ಆಕಸ್ಮಿಕವಾಗಿ ಬೆಂಕಿ ಹತ್ತಿತು ಮಧ್ಯಾಹ್ನ ಇವರ ಮಗನು ಊಟಕ್ಕೆ ಬಂದ ವೇಳೆಯಲ್ಲಿ ಆ ಒಂದು ರೂಮಿನಿಂದ ಬೆಂಕಿಯನ್ನು ನೋಡಿದ ತಕ್ಷಣ ಆ ಹುಡುಗ ನೀರನ್ನು ಹಾಕಿ ಹಾರಿಸುವ ಒಂದು ಸಾಧ್ಯತೆ ಮಾಡಿದ ಆನಂತರ ಕಲಕೇರಿಯ ಗ್ರಾಮ ಲೆಕ್ಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಲಕೇರಿಯ ಪೊಲೀಸ್ ಠಾಣೆಯ ಪಿ.ಎಸ್.ಐ ಸುರೇಶ್ ಮಂಟೂರ್ ಪೊಲೀಸ್ ಸಿಬ್ಬಂದಿಗಳು ಬಂದು ಎಲ್ಲಾ ರೀತಿಯ ಪರಿಶೀಲನೆ ಮಾಡಿದರು. ಮನೆಯ ಮಾಲೀಕರಾದ ಭೀಮಣ್ಣ ವಡ್ಡರ್ ಇವರು ನಾವು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದರು.

ಇವರ ಕೋಣೆಯಲ್ಲಿ ಇದ್ದಂತಹ ಟ್ರಂಕ್ ನಲ್ಲಿ ಇದ್ದ 15,000 ರೂಪಾಯಿಗಳು ಸುಟ್ಟು ನಷ್ಟ ಆಗಿದೆ. ಕೋಣೆಯಲ್ಲಿ ಇದ್ದಂತ ಒಂದು ಚೀಲ ಬ್ಯಾಳಿ ಜೋಳ ಗೋಧಿ ಮತ್ತು ಬೆಲೆ ಬಾಳುವ ಬಟ್ಟೆಗಳು ಬೆಂಕಿಯಲ್ಲಿ ‌ಸುಟ್ಟು ಕರಕಲಾಗಿ ಹೋಗಿದೆ. ಒಟ್ಟು 45,000 ನಷ್ಟ ಬೆಂಕಿಯಲ್ಲಿ ಸುಟ್ಟು ಕರಕಲಾಗಿ ಹೋಗಿದೆ. ಎಂದು ಮನೆಯ ಮಾಲೀಕ ಭೀಮಣ್ಣ ವಡ್ಡರ್ ಇವರು ನಾವು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದರು. ಕಲಕೇರಿ ಪೊಲೀಸ್ ಠಾಣೆಯ ಸಿಬ್ಬಂದಿಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button