ಹೂಡೇಂ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ.
ಹೂಡೇಂ ಡಿಸೆಂಬರ್.13

ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ವಿಜಯನಗರ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ವಿಜಯನಗರ ತಾಲೂಕಾ ವೈದಧಿಕಾರಿಗಳ ಕಚೇರಿ ಕೂಡ್ಲಿಗಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪಿಎಚ್ ಸಿ ಡಾ ಸಂದೀಪ್ ಮಾತನಾಡಿ ಜೀವನದಲ್ಲಿ ಅತ್ಯಮೂಲ್ಯವಾದ ಕಣ್ಣು ಸಂರಕ್ಷಿತವಾಗಿರ ಬೇಕಾದರೆ ಕಾಲ ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹುಮುಖ್ಯ ಎಂದು ಹೇಳಿದರು.

ಈ ಶಿಬಿರದಲ್ಲಿ ಸುಮಾರು 100ಕ್ಕೂ ಹೆಚ್ಚು ಜನ ವಯೋ ವೃದ್ಧರು ಭಾಗಿ ಆಗಿದ್ದು, ಜನರಿಗೆ ಉಚಿತ ಪರೀಕ್ಷೆ ಹಾಗೂ ಕನ್ನಡಕ ವಿತರಿಸಲಾಯಿತು. ಹಾಗೂ ಕಣ್ಣಿನ ದೋಷ ಇರುವ ಜನರಿಗೆ ಉಚಿತ ಆಪರೇಷನ್ ಮಾಡಲು ಶಿವಮೊಗ್ಗ ಶಂಕರ್ ಆಸ್ಪತ್ರೆಗೆ ರವಾನೆ ನಡೆಸಿದರು ಇದೆ ಸಂದರ್ಭದಲ್ಲಿ ಪಿಎಚ್ ಸಿ ವೈದ್ಯಧಿಕಾರಿಗಳು ಡಾ ಸಂದೀಪ್, ಹಿರಿಯ ನಿರೀಕ್ಷಣಾಧಿಕಾರಿ ಚಂದ್ರಪ್ಪ, ರಮ್ಯಾ, ನೇತ್ರಧಿಕಾರಿಗಳು, ಶುಶ್ರು, ಷರುಶಕರು, ಭಾಗ್ಯಮ್ಮ, ಮಂಗಳಮ್ಮ ಸೇರಿದಂತೆ ಇಲಾಖೆ ಸಿಬ್ಬಂದಿಗಳು ಮುಖಂಡರು ಇದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ