ಜನವರಿ 31 ಕ್ಕೆ “ರಾವುತ” – ಬಿಡುಗಡೆ.

ಬೆಂಗಳೂರ ಜ.08

ವಿಶ್ವಕರ್ಮ ಸಿನಿಮಾಸ್ ನಿರ್ಮಾಣದ ‘ರಾವುತ’ ಕನ್ನಡ ಚಲನ ಚಿತ್ರವು ಒಂದು ವಿಭಿನ್ನ ಪ್ರಯತ್ನದ ಸಿನಿಮಾ. ಗಂಡುಗಲಿ ಕುಮಾರರಾಮ ಕಾಲದ ಸಾಮಾನ್ಯ ಜನರ ಮತ್ತು ಸಾಧಕರ ಕಥೆ. ಆದರೆ ಸಿನಿಮಾ ಎಂದರೆ ಸಾಹಸ, ಪ್ರೀತಿ, ದ್ವೇಷ, ಅಂಥ ಹಲವು ಮಜಲು ಇಟ್ಟುಕೊಂಡು ಬರುತ್ತವೆ. ರಾವುತ ಸಿನಿಮಾ ಹಾಗಿಲ್ಲ, ಅದರ ಎಳೆಯೇ ಕುತೂಹಲ ಭರಿತವಾಗಿದೆ, ಅದೇನೆಂದರೆ ಸಾವಿನ ನಂತರ ಏನಾಗುತ್ತೆ ಅನ್ನೋದನ್ನ ಕಥೆಯ ಸಾರವಾಗಿಸಿದ್ದಾರೆ ಕಥೆಗಾರ ಸಿದ್ದುವಜ್ರಪ್ಪ. ಇದರ ವಿಭಿನ್ನ ಕ್ಲೈಮ್ಯಾಕ್ಸ್ ಅರ್ಥವೇ ಸಿನಿಮಾದ ಸಾವಿನ ನಂತರದ ಪಯಣ ತಿಳಿಸುತ್ತದೆ ಎಂದು ಹೇಳಿದ್ದಾರೆ ನಿರ್ಮಾಪಕರು. ಈ ಸಿನಿಮಾವು ಕನ್ನಡದ ಇನ್ನೊಂದು ನಾಗಮಂಡಲ ಆಗುವ ಲಕ್ಷಣವಿದೆ.

ಅದಕ್ಕೆ ಕಾರಣ ಸಂಪೂರ್ಣ ಉತ್ತರ ಕರ್ನಾಟಕ ಶೈಲಿಯ ಸಂಸ್ಕೃತಿಯ ದೃಶ್ಯ ಚಿತ್ರಣವಿರುವುದೇ ಇದಕ್ಕೆ ಕಾರಣ ಎಂದು ಇತ್ತೀಚಿಗೆ ನಡೆದ ಪ್ರೀಮಿಯರ್ ಶೋ ನೋಡಿದ ಗಣ್ಯರು ಮಿತ್ರರು ತಿಳಿಸಿದ್ದಾರೆ. ಜನವರಿ 31 ಕ್ಕೆ ಜನ ಮನ್ನಣೆ ಪಡೆಯಲು ರಾಜ್ಯಾದ್ಯಂತ ಚಿತ್ರ ಮಂದಿರಕ್ಕೆ ಬರಲಿದೆ ‘ರಾವುತ’ ಏನೇ ಆಗಲಿ ಕನ್ನಡಕ್ಕೆ ಸೈದ್ಧಾಂತಿಕ ಪ್ರಯತ್ನ ನಡೆಯುವುದು ವಿರಳ. ಈ ಪ್ರಯತ್ನಕ್ಕೆ ಜ 31 ಕ್ಕೆ ಹೆಸರಾಂತ ನಿರ್ಮಾಪಕ ಜಾಕ್ ಮಂಜು ಅವರ ಶಾಲಿನಿ ಆರ್ಟ್ಸ್ ಸಂಸ್ಥೆಯ ಮುಖಾಂತರ ರಾಜ್ಯಾದ್ಯಂತ ಬಿಡುಗಡೆ ಗೊಂಡು ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದೆ ‘ರಾವುತ’ ನಾಯಕನಾಗಿ ರಾಜ್ ಪ್ರವೀಣ್, ನಾಯಕಿಯಾಗಿ ಭವಾನಿ ಪುರೋಹಿತ್, ಹಾಗೂ ಇನ್ನುಳಿದ ಕಲಾವಿದರೂ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರ್ಮಾಪಕ ಈರಣ್ಣ ಶುಭಾಷ್ ಬಡಿಗೇರ್, ನಿರ್ದೇಶಕ ಸಿದ್ದುವಜ್ರಪ್ಪ ಮೊದಲ ಚಿತ್ರ ಪ್ರದರ್ಶನದ ತಯಾರಿಯ ಉತ್ಸಾಹದಲ್ಲಿ ಇದ್ದಾರೆ. ಜ. 31 ಕ್ಕೆ ಬಿಡುಗಡೆ ಇರುವ ಕಾರಣ ಸಧ್ಯದಲ್ಲೇ ಟ್ರೈಲರ್, ಟಿಸರ್ ಬಿಡುಗಡೆ ಆಗಲಿವೆ. ಚಿತ್ರಕ್ಕೆ ಸಂಪರ್ಕ ಸುಧೀಂದ್ರ ವೆಂಕಟೇಶ, ಡಾ, ಪ್ರಭು ಗಂಜಿಹಾಳ,ಡಾ, ವೀರೇಶ ಹಂಡಿಗಿ ಯವರದಿದೆ.

*****

-ಡಾ.ಪ್ರಭು ಗಂಜಿಹಾಳ

ಮೊ:9448775346

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button