ನಾಳೆ ಗುರುವಾರ ರಂದು ಜ. 9 ರಂದು ಕೂಡ್ಲಿಗಿ ಬಂದ್ ಗೆ – ಹತ್ತಾರು ಸಂಘಟನೆಗಳಿಂದ ಕರೆ.

ಕೂಡ್ಲಿಗಿ ಜ.08

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೂಡ್ಲಿಗಿ ತಾಲೂಕಿನ ಹತ್ತಾರು ಸಂಘಟನೆಯ ಅಧ್ಯಕ್ಷರುಗಳ ಸಮ್ಮುಖದಲ್ಲಿ ಜನೇವರಿ 9 ರಂದು ಕೂಡ್ಲಿಗಿ ಬಂದ್ ಕಾರ್ಯಕ್ರಮ ಕುರಿತು ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ಹತ್ತಾರು ಸಂಘಟನೆಗಳ ಅಧ್ಯಕ್ಷರುಗಳು ಹಾಗೂ ಮುಖಂಡರುಗಳು ಈ ಸಭೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದಲ್ಲಿ ಗೃಹ ಸಚಿವರಾಗಿರುವ ಅಮಿತ್ ಶಾ ಪಾರ್ಲಿಮೆಂಟಿನ ಅಧಿವೇಶನದಲ್ಲಿ ಭಾರತ ದೇಶದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನ ಮಾತುಗಳನ್ನಾಡಿ ಅವಮಾನ ಮಾಡಿರುವಂತಹ ಹೇಳಿಕೆಯನ್ನು ಖಂಡಿಸಿ ಅಮಿತ್ ಶಾ ನನ್ನು ಸಚಿವ ಸ್ಥಾನ ದಿಂದ ವಜಾ ಗೊಳಿಸುವಂತೆ ನಾಳೆ ಗುರುವಾರ 9 ರಂದು ವಿಜಯನಗರ ಜಿಲ್ಲಾದ್ಯಾಂತ ಅನೇಕ ಸಂಘಟನೆಗಳ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿರುವ ಬಂದ್ ಕಾರ್ಯಕ್ರಮ ಕೂಡ್ಲಿಗಿಯಲ್ಲಿ ಸಹ ಸಂಪೂರ್ಣ ಬಂದ್ ಮಾಡುವಂತೆ ಮುಖಂಡರುಗಳು ಚರ್ಚೆಯೊಂದಿಗೆ ತೀರ್ಮಾನ ಮಾಡಲಾಯಿತು. ಈ ಸಭೆಯ ಪ್ರಮುಖರಾದ ಮುಖಂಡರು ನಾಗರಿಕ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಹಾಗೂ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ್, ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಡಿ.ಎಚ್ ದುರ್ಗೇಶ್ ವಕೀಲರು, ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷರಾದ ಗುರು ಸಿದ್ದನಗೌಡರು, ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ದೇವರ ಮನೆ ಮಹೇಶ್, ಚಲವಾದಿ ಮಹಾಸಭಾದ ಸಿ.ಉಮೇಶ್, ಆಟೋ ಯೂನಿಯನ್ ಅಧ್ಯಕ್ಷರಾದ ಮಯೂರ ಮಂಜುನಾಥ್, ಸಿ.ಎ.ಟಿ.ಯು ತಾಲೂಕ ಅಧ್ಯಕ್ಷರಾದ ಗುನ್ನಳ್ಳಿ ರಾಘವೇಂದ್ರ, ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ, ಫುಟ್ಬಾತ್ ಸಂಘದ ಅಧ್ಯಕ್ಷರಾದ, ಹಲ್ಲಂ ಭಾಷಾ, ಚಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷರಾದ ಸಿ.ಮಾರಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಕಾಟೇರ ಹಾಲೇಶ್, ಮುಸ್ಲಿಂ ಸಂಘದ ರಾಜ್ಯಾಧ್ಯಕ್ಷರಾದ ಎಲ್.ಎಸ್ ಬಶೀರ್ ಅಹ್ಮದ್ ವಕೀಲರು, ಸಪ್ಲಾಯರ್ ಅಂಡ್ ಶಾಮಿಯಾನ ಸಂಘದ ತಾಲೂಕ ಅಧ್ಯಕ್ಷರಾದ ಚಂದ್ರಪ್ಪ, ಕಾಂಗ್ರೆಸ್ಸಿನ ಕೆಪಿಸಿಸಿ ಮಹಿಳಾ ಸದಸ್ಯರಾದ ಜಿಂಕಲ್ ನಾಗಮಣಿ ಹೀಗೆ ಅನೇಕ ಮುಖಂಡರುಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಪ್ರವಾಸಿ ಮಂದಿರದ ಸಭೆಯಲ್ಲಿ ಭಾಗವಹಿಸಿ ಕೂಡ್ಲಿಗಿ ಬಂದು ಮಾಡುವ ಕುರಿತು ನಿರ್ಣಯ ತೆಗೆದು ಕೊಳ್ಳಲಾಯಿತು.ಈ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣದ ಜನತೆಗೆ ಹತ್ತಾರು ಸಂಘಟನೆಯ ಮುಖಂಡರುಗಳು ಜನವರಿ 9 ಗುರುವಾರ ರಂದು ಎಲ್ಲಾ ಶಾಲಾ-ಕಾಲೇಜು ಹಾಗೂ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅಧಿವೇಶನದಲ್ಲಿ ಕೇಂದ್ರ ಗೃಹ ಮಂತ್ರಿಯಾದ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಹಾಗೂ ಹಾಗೆ ದೇಶದ ಯಾವುದೇ ಮಹಾನ್ ವ್ಯಕ್ತಿಗಳ ವಿರುದ್ಧ ಹಗುರವಾಗಿ ಮಾತನಾಡ ಬಾರದೆಂದು ಕೂಡ್ಲಿಗಿಯನ್ನು ಸಂಪೂರ್ಣ ಬಂದ್ ಮಾಡಲು ಸಹಕರಿಸಬೇಕು ಹಾಗೂ ಕೂಡ್ಲಿಗಿ ಪಟ್ಟಣದ ಎಲ್ಲಾ ನಾಗರಿಕರು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಅಂಗಡಿಗಳನ್ನು ಬಂದ್ ಮಾಡುವಂತೆ ಪಟ್ಟಣದ ಎಲ್ಲಾ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button