ಹುಟ್ಟುವುದೇ ಗೆಲ್ಲುವುದಕ್ಕಾಗಿ – ಆಂಜನೇಯ. ನಸಲಾಪುರ.

ಮಾನ್ವಿ ಜ.11

ಪಟ್ಟಣದ ಎಸ್.ಆರ್.ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ತರಬೇತಿದಾರರಾದ ಆಂಜನೇಯ ನಸ್ಲಾಪುರ್ ನಾಲ್ಕು ತಾಸುಗಳ ಕಾಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂದು ಸಾಧಕರ ಅನುಭವದ ವಿಡಿಯೋಗಳ ತುಣುಕುಗಳನ್ನು ತೋರಿಸುವ ಮೂಲಕ ಹೇಳಿದರು. ಜಗತ್ತು ಜ್ಞಾನಕ್ಕೆ ತಲೆ ಬಾಗುತ್ತದೆ.

ವಿದ್ಯೆಯನ್ನು ಸೋಲಿಸುವ ಅಸ್ತ್ರ ಪ್ರಪಂಚದಲ್ಲಿ ಯಾವುದು ಇಲ್ಲ ಜ್ಞಾನ ವಿದ್ಯೆಯನ್ನು ಕಲಿತು ನೋಡು ಹೆತ್ತವರಿಗೆ ತಲೆಬಾಗಿ ನೋಡು ಇವೆರಡು ಜೀವನದ ವಿದ್ಯಾರ್ಥಿಗಳಿಗೆ ಪಾಠ ಕಲಿಸುತ್ತದೆ. ಮುಂದಿನ ಭವಿಷ್ಯಕ್ಕೆತಾವು ಜ್ಞಾನವನ್ನು ಬೆಳೆಸಿ ಕೊಳ್ಳಬೇಕು ನಿಮ್ಮ ಜೀವನವನ್ನು ನೀವೇ ರೂಪಿಸಿ ಕೊಳ್ಳಬೇಕು. ನಾವು ಈ ಪ್ರಪಂಚಕ್ಕೆ ಬರುವಾಗ ಉಸಿರು ಇರುತ್ತೆ ನಂತರದ ದಿನಗಳಲ್ಲಿ ನಾವು ಪ್ರಪಂಚ ಬಿಟ್ಟು ಹೋಗುವಾಗ ಹೆಸರು ಮಾಡಿ ಹೋಗಬೇಕು ಆ ರೀತಿ ನಾವು ಬದುಕಬೇಕು.

ಸಂಸ್ಥೆಯ ಆಡಳಿತ ಅಧಿಕಾರಿಗಳಾದ ರಾಮಲಿಂಗಪ್ಪ, ಪ್ರಾಂಶುಪಾಲರಾದ ಈರಣ್ಣ ಮರ್ಲಟ್ಟಿ ಉಪನ್ಯಾಸಕರಾದ ಸಿದ್ದ ಮಲ್ಲಯ್ಯ ಸ್ವಾಮಿ ದೇವೇಂದ್ರ ಕುಮಾರ್ ಹೂಗಾರ್, ಮಂಜುನಾಥ, ಹನುಮೇಶ ರಾಜಲಬಂಡ, ಬಸಯ್ಯ ಸ್ವಾಮಿ, ಚನ್ನಬಸವ ಹೊನ್ನಳ್ಳಿ, ರಾಘವೇಂದ್ರ ನಾಯಕ ಅನಿಲ್ ಕುಮಾರ್ ವೆಂಕನಗೌಡ ಪಾಟೀಲ್, ಫಿರೋಜ್,

ಉಪನ್ಯಾಸಕಿಯಾರಾದ ವಾಣಿ, ನಾಗರತ್ನ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮ ಮುಗಿದ ನಂತರ ವಿದ್ಯಾರ್ಥಿಗಳಾದ ರಾಜೇಶ್, ಶಿವಾನಂದ, ನರಸಮ್ಮ, ನಾಗರತ್ನ, ವಿದ್ಯಾಶ್ರೀ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button