ದಾಯಿತ್ವ ಸಮಾರಂಭ ಹಾಗೂ ಮಹಿಳಾ – ಸಾಧಕಿಯರಿಗೆ ಸನ್ಮಾನ.

ಹೊಸಪೇಟೆ ಜ.14

ನಗರದ 5 ನೇ. ವಾರ್ಡಿನಲ್ಲಿ ಶ್ರೀ ರಾಮದೇವರು ದೇವಸ್ಥಾನ ಎದುರುಗಡೆ ‘ವಾಗ್ದೇವಿ ಮಹಿಳಾ ಸಂಘ’ ಉದ್ಘಾಟನೆ ಕಾರ್ಯಕ್ರಮ ಶುಕ್ರವಾರದಂದು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಕವಿತಾ ಈಶ್ವರ್ ಸಿಂಗ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಘವನ್ನು ಗಟ್ಟಿ ಮಾಡಿಕೊಳ್ಳಿ ಎಂದು ಸಲಹೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರೋತ್ಸಾಹಿಸಿ ಗೌರವಿಸಿದರು.ಕರಾಟೆ ಜೂನಿಯರ್ಸ್ ವಿಭಾಗದಲ್ಲಿ ದಕ್ಷ ಮೇಟಿಯನ್ನು ಮತ್ತು ಸ್ಥಳೀಯ ಚಿತ್ರ ಕಲಾವಿದ ಜಿ ಮಂಜು ಹಾಗೆ ರಾಷ್ಟ್ರಮಟ್ಟದ ಯೋಗ ವಿಭಾಗದಲ್ಲಿ ಆಯ್ಕೆಡಿ ಗಣೇಶ್ ನನ್ನು ಮತ್ತು ಇನ್ನೋರ್ವ ಕುಮಾರ ಆದಿತ್ಯ ನಾರಾಯಣ ಭಟ್ ಇವರು ಗಂಗಾವತಿ ತಾಲೂಕಿನ ಗ್ರಾಮೀಣ ಜಂಗಮರ ಕಲ್ಗುಡಿಯ ವಿದ್ಯಾರ್ಥಿ ಇವರು ಕೇಂದ್ರೀಯ ವಿದ್ಯಾಲಯ ವಿರುಪಾಪುರ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ವಿದ್ಯಾರ್ಥಿ ರಾಷ್ಟ್ರ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಆಯ್ಕೆಯಾಗಿ, ತಮ್ಮದೇ ಆದ ಛಾಪನ್ನು ಮುಡಿಸಿದ್ದಾರೆ, ಇವರಿಗೂ ಕೂಡ ಶ್ರೀ ವಾಗ್ದೇವಿ ಸಂಘದ ವತಿಯಿಂದ ಗೌರವಿಸಲಾಯಿತು. ದಿವ್ಯ ಸಾನಿಧ್ಯ ಹಂಸಾಂಬ ಆಶ್ರದಮದ ಅಧ್ಯಕ್ಷರು ಪರಮ ಪೂಜ್ಯ ಪ್ರಭೋಧಮಯಿ ಮಾತಾಜಿಯವರು ಮತ್ತು ಮುಖ್ಯ ಅತಿಥಿಯಾಗಿ ವಿಜಯಲಕ್ಷ್ಮಿ ಪಿ.ಎಸ್.ಐ, ಮತ್ತು ನರಸಿಂಹಮೂರ್ತಿ ಅಪ್ಪಣ್ಣ , ಜನನಿ ಅಧ್ಯಕ್ಷರು ಹುಲಿಗೆಮ್ಮ ಗೌರವಾಧ್ಯಕ್ಷರು ಲಕ್ಷ್ಮಿ ಕೋಡಿಹಳ್ಳಿ, ಮತ್ತು ಅಧ್ಯಕ್ಷತೆಯನ್ನು ವಹಿಸಿದ್ದ ಆರ್ ಸರಸ್ವತಿ (ಅನಿತಾ) ಇನ್ನಿತರರಿದ್ದರು,

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ : ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button