ಆದರ್ಶಮಯ ಬದುಕು ಮಾನವ ಕುಲಕ್ಕೆ ಮಾದರಿ ಹಾಲಕೆರೆಯ – ಮುಪ್ಪಿನ ಬಸವಲಿಂಗ ಸ್ವಾಮೀಜಿ.

ನರೇಗಲ್ ಜ.14

ತಮ್ಮದೆನ್ನುವ ಎಲ್ಲವನ್ನೂ ಸಮಾಜದ ಉದ್ಧಾರಕ್ಕೆ ಧಾರೆ ಎರೆದವರು ಶಿರಸಂಗಿಯ ಲಿಂಗರಾಜ ದೇಸಾಯಿಯವರು. ಅವರ ಬದುಕೇ ಆದರ್ಶಮಯ. ಅವರ ಬದುಕು ಮಾನವ ಕುಲಕ್ಕೆ ಮಾದರಿ ಎಂದು ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜರುಗಿದ ಸಿದ್ದರಾಮೇಶ್ವರ ಹಾಗೂ ಶಿರಸಂಗಿ ಲಿಂಗರಾಜರ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.ಲಿಂಗರಾಜರ ದಾನ ಗುಣವನ್ನು ವರ್ಣಿಸಲಾಗದು. ವೀರಶೈವ ಸಂಸ್ಥೆಯನ್ನು ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು ಅವರು. ಆದ್ದರಿಂದ ಅವರನ್ನು ಒಂದು ಜಾತಿಗೆ ಸೀಮಿತ ಗೊಳಿಸದೇ ಅವರನ್ನು ವೀರಶೈವ ಸಮಾಜದ ಮಹಾ ದಾಸೋಹಿ ಎಂದು ಕರೆಯ ಬೇಕೆಂದರು. ದಾನಕ್ಕೆ ಹೆಸರಾದ ಸಂಸ್ಥಾನ ಶಿರಸಂಗಿಯ ಸಂಸ್ಥಾನವಾಗಿತ್ತು. ಲಿಂಗರಾಜರು ನೀಡುತ್ತಿದ್ದ ನ್ಯಾಯ ಸರ್ವ ಸಮ್ಮತವಾಗಿರುತ್ತಿತ್ತು. ಅವರನ್ನು ಬ್ರಿಟಿಷರು ಸಹ ಮೆಚ್ಚಿಕೊಂಡು ಅವರಿಗೆ ಗೌರವ ನೀಡುತ್ತಿದ್ದರು ಎಂದರು.ಹಾಲಕೆರೆ ಮಠಕ್ಕೂ ಲಿಂಗರಾಜರಿಗೂ ಅವಿನಾಭಾವ ಸಂಬಂಧ ಇತ್ತು. ಮಕ್ಕಳಿಗೆ ಲಿಂಗರಾಜರ ಜೀವನ ಚರಿತ್ರೆಯ ಬಗ್ಗೆ ತಿಳಿಸಬೇಕು. ಕುಡು ಒಕ್ಕಲಿಗರೆಂದರೆ ಕೊಡುವ ಒಕ್ಕಲಿಗರು ಎಂದರ್ಥ. ನೀವುಗಳು ಸಹ ಲಿಂಗರಾಜ ರಂತೆ ಕೊಡುಗೈ ದಾನಿಗಳಾಗ ಬೇಕೆಂದು ಶ್ರೀ ಗಳು ಹೇಳಿದರು.ಸಮಾರಂಭ ಉದ್ಘಾಟನೆ ನೆರವೇರಿಸಿದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿದರು. ರಾಜ್ಯಾಧ್ಯಕ್ಷ ಶಿವ ಕುಮಾರಗೌಡ ಪಾಟೀಲ, ನವೀನ ಗುಳಗಣ್ಣವರ ಮಾತನಾಡಿದರು.ಎಂ.ಜಿ. ಗಚ್ಚನ್ನವರ ಲಿಂಗರಾಜರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮಾಜದ ಮುಖಂಡ ಬಸನಗೌಡ ಲಕ್ಕನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ವೀರಪ್ಪ ಬಿಸನಳ್ಳಿ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಗೊಜನೂರ, ಶರಣಪ್ಪ ಜುಟ್ಲದ, ಭೀಮಣ್ಣ ಅಣಗೌಡ್ರ, ಬಸವರಾಜ ಕಳಕೊಣ್ಣವರ, ಪ್ರಕಾಶ ಸೂಡಿ, ಬಸವರಾಜ ಗಂಗರಗೊಂಡ, ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಭೂ ದಾನಿಗಳಾದ ತಳ್ಳಿಹಾಳಮಠ ದಂಪತಿ ಉಪಸ್ಥಿತರಿದ್ದರು. ಕೆ.ಎಸ್. ಕಳಕಣ್ಣವರ ನಿರೂಪಿಸಿದರು. ಆನಂದ ಲಕ್ಕನಗೌಡ್ರ ಸ್ವಾಗತಿಸಿದರು. ಎಸ್.ಸಿ. ಗುಳಗಣ್ಣವರ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ. ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button