ಶಿಕ್ಷಣವನ್ನು ಪಡೆದು ದೇಶದ ಉನ್ನತ ಪದವಿಗಳನ್ನು ಪಡೆದು ಕೊಳ್ಳಿ, ವಿದ್ಯಾ ಸಂಸ್ಥೆಯೊಂದಿಗೆ ಹೆತ್ತ ತಂದೆ ತಾಯಿಗಳಿಗೂ – ಉತ್ತಮ ಮಕ್ಕಳಾಗಿ ಬಿ.ಸರಳ ಕಾವ್ಯ.
ಹೊಸಪೇಟೆ ಜ.27

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ಜನವರಿ 26 ರಂದು ನಡೆದ ಶ್ರೀ ಕಟ್ಟ ನಂಜಪ್ಪ ಶ್ರೇಷ್ಠಿ ವಿದ್ಯಾ ಸಂಸ್ಥೆ ಹೊಸಪೇಟೆ, ಶ್ರೀಮತಿ ಕಟ್ಟ ಕೃಷ್ಣ ವೇಣಮ್ಮ ಸ್ಮಾರಕ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ 21 ನೇ. ವಾರ್ಡ್ ಊರಮ್ಮನ ಬಯಲು ಶಾಲೆಯಲ್ಲಿ ನಡೆದ 76 ನೇ. ಗಣರಾಜ್ಯೋತ್ಸವ ದಿನದ ಆಚರಣೆಯನ್ನು ಮಾರಿಕಾಂಬ ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳಾ ಶಕ್ತಿ ಸಂಘದ ಇವರು ಕಾರ್ಯಕ್ರಮದ ಅಧ್ಯಕ್ಷತೆಯ ಅಧ್ಯಕ್ಷರಾದ ಬಿ.ಸರಳ ಕಾವ್ಯ ಇವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಕುರಿತು ಮಾತನಾಡುತ್ತಾ ದೇಶ ಸ್ವಾತಂತ್ರ್ಯ ಪಡೆದು ಗಣರಾಜ್ಯವಾದಂತ ಈ ದಿನದಂದು ನಮ್ಮ ದೇಶದ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ತಿಳಿಸುತ್ತಾ ವಿದ್ಯಾ ಸಂಸ್ಥೆಯ ಗುರುಗಳನ್ನು ನೆನೆಯುತ್ತಾ ಬಡ ಮಕ್ಕಳಿಗೆ ವಿದ್ಯಾ ದಾನ ಮಾಡುವಂತಹ ಮಕ್ಕಳಿಗೆ ಇಂದಿನಿಂದಲೂ ಅನೇಕ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಕಲಿಸಿ ಕೊಟ್ಟಂತ ಸಂಸ್ಥೆಯ ಕುರಿತು ಮಾತನಾಡುತ್ತಾ ವಿದ್ಯಾ ಸಂಸ್ಥೆಯ ಮುಖ್ಯಸ್ಥರಿಗೆ ಧನ್ಯವಾದಗಳು ಸರಳ ಕಾವ್ಯ ಅವರು ತಿಳಿಸಿದರು.

ಮಕ್ಕಳನ್ನು ಕುರಿತು ತಮ್ಮ ತಮ್ಮ ತಂದೆ-ತಾಯಿಗಳ ಕಷ್ಟಗಳನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗಳು ಶ್ರಮ ವಹಿಸಿ ವಿದ್ಯಾ ಕಲಿತು ದೇಶದ ಉನ್ನತವಾದ ಪದವಿಗಳನ್ನು ಇಲ್ಲಿರುವಂತಹ ವಿದ್ಯಾರ್ಥಿಗಳು ನಿಮ್ಮದಾಗಿಸಿ ಕೊಳ್ಳಬೇಕು, ಹಾಗೆ ವಿದ್ಯಾ ಸಂಸ್ಥೆಯ ಹೆಸರನ್ನು ಬೆಳೆಸುವಂತಹ ಮಕ್ಕಳಾಗಬೇಕು ಹೆತ್ತ ತಂದೆ ತಾಯಿಗಳಿಗೆ ಉತ್ತಮವಾದಂತಹ ಮಕ್ಕಳಾಗಬೇಕು ಎಂದು ತಿಳಿಸಿದರು. ಹಾಗೆ ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಮಕ್ಕಳಿಗೂ ಮಾರಿಕಾಂಬ ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳಾ ಶಕ್ತಿ ಸಂಘದಿಂದ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾರಿಕಾಂಬ ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳಾ ಶಕ್ತಿ ಸಂಘದ ಪದಾಧಿಕಾರಿಗಳು, ವಿದ್ಯಾ ಸಂಸ್ಥೆಯ ಚೇರ್ಮನ್ ಕಟ್ಟ ಅಶೋಕ, ಮ್ಯಾನೇಜಿಂಗ್ ಡೈರೆಕ್ಟರ್ ಕಟ್ಟ ನಾಗರಾಜ್, ಪಟ್ಟ ವೆಂಕಟೇಶ್ ಅಡ್ಮಿನಿಸ್ಟರ್ ಸಂದೀಪ್, ವಿದ್ಯಾ ಸಂಸ್ಥೆ ನೂರಾರು ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ