ಕಸದ ತ್ಯಾಜ್ಯ ವಿಲೇವಾರಿಗೆ ಪುರಸಭೆಗೆ ಮಳಿಗೆಗಳ – ಮಾಲೀಕರಿಂದ ಮನವಿ ಸಲ್ಲಿಕೆ.
ಮಾನ್ವಿ ಪೆ.01

ಪಟ್ಟಣದ ಹೃದಯ ಭಾಗವದ ಪಂಪಾ ಗಾರ್ಡನ್ ಬಳಿ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು. ಹೀಗಾಗಿ ಮಳಿಗೆಗಳ ಮಾಲೀಕರು ನೊಂದು ಕೊಂಡು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹೃದಯ ಭಾಗವಾದ ಪಂಪಾ ಗಾರ್ಡನ್ ಬಳಿ ಹಸಿ ಕಸ ಹಾಕುತ್ತಿದ್ದರಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡು ವಂತಾಗಿದೆ. ಹಾಗೆಯೇ ಸೊಳ್ಳೆಗಳ ಕಾಟ ಜಾಸ್ತಿ ಯಾಗಿದೆ ಎಂದು ನೋವು ತೋಡಿ ಕೊಂಡರು.
ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಅವರ ಮೇಲೆ ನಂಬಿಕೆ ಇದ್ದು. ಕೂಡಲೇ ಸ್ಪಂಧಿಸುವ ಕೆಲಸ ಮಾಡುತ್ತಾರೆಂದು ತಿಳಿಸಿದ್ದಾರೆ. ಯಾರು ಕಸ ಸುರಿಯುತ್ತಾರೆ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ