ತಾಯ್ನಾಡಿಗೆ ಆಗಮಿಸುತ್ತಿರುವ ಯೋಧ – ತಿಮ್ಮಪ್ಪ.ಗುಜ್ಜಲ್ ಹರವಿ.
ಮಾನ್ವಿ ಪೆ.01

ಸಮೀಪದ ಹರವಿ ಗ್ರಾಮದ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಭಾರತೀಯ ಗಡಿ ಭದ್ರತಾ ಪಡೆಗೆ ದಿನಾಂಕ 7/6/1989 ರಲ್ಲಿ STC ಯಲಹಂಕ ಬಿ.ಎಸ್.ಎಫ್ ಕ್ಯಾಂಪ್ನಲ್ಲಿ ಭರ್ತಿಯಾಗಿ ತರಬೇತಿ ಕೂಡ ಯಲಹಂಕದ S.T.C ಕ್ಯಾಂಪ್ನಲ್ಲಿ ಪೂರ್ಣಗೊಳಿಸಿ ಮೊದಲಿಗೆ 46 ಬೆಟಾಲಿಯನ್ ಗೆ ಸೇವೆಗೆ ನಿಯುಕ್ತಿ ಗೊಂಡರು ತರುವಾಯ 149 ಇದಾದ ನಂತರ 121 ಬೆಟಾಲಿಯನ್ ಗೆ ನಿಯುಕ್ತಿ ಗೊಂಡು ಸುಮಾರು 35 ವರ್ಷ 7 ತಿಂಗಳು 21 ದಿನಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ 31/1/2025 ರಂದು ಪಂಜಾಬ್ ಗಡಿ ಭಾಗದಿಂದ ಬಟಾಲಿಯನ್ ಕಮಾಂಡೆಂಟ್ ರವರಿಂದ ಪಾರಿತೋಷಕ ಸ್ವೀಕಾರ ಮಾಡಿ ಇಂದು ನಿವೃತ್ತಿ ಗೊಂಡಿದ್ದಾರೆ ಹಾಗೆ ಕಮಾಂಡೆಂಟ್ ರವರು ಮಾತನಾಡಿ ತಮ್ಮ ಸೇವೆ ಅಮೋಘವಾದದ್ದು ತಾವು ಸೇನೆಯಲ್ಲಿ ಇದ್ದುಕೊಂಡು ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಮಾಡಿಸಿದ್ದೀರಿ ತಮ್ಮ ಈ ಕಾರ್ಯ ನಮ್ಮ ದೇಶದ ಪ್ರತಿಯೊಬ್ಬ ಯೋಧರು ಕೂಡ ಮಾಡಬೇಕು ತಮ್ಮ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಆಶಿಸುತ್ತೇವೆ. ನಿವೃತ್ತಿಯಾದ ತಿಮ್ಮಪ್ಪ ಗುಜ್ಜಲ್ ಮಾತನಾಡಿ ನಾನು ಸೇವೆ ಸಲ್ಲಿಸಿದ್ದು ನನಗೆ ತೃಪ್ತಿ ತಂದಿದೆ ತಾವು ಕೂಡ ಉತ್ತಮವಾಗಿ ಸೇವೆ ಸಲ್ಲಿಸಿ ಎಂದು ತಮ್ಮ ಸಹೋದ್ಯೋಗಿ ಗಳಿಗೆ ಕಿವಿಮಾತು ಹೇಳಿದರು. ನಿವೃತ್ತಿ ಸಮಾರಂಭದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಇನ್ನುಳಿದ ಸಿಬ್ಬಂದಿ ವರ್ಗ ದವರಿಗೆ ಚಹಾ ಕೂಟ ಏರ್ಪಡಿಸಲಾಗಿತ್ತು ಯೋಧನ ನಿವೃತ್ತಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ