ಶ್ರೀರಾಗ ಭೈರವ ನಾಟ್ಯ ಕಲಾ ಕೇಂದ್ರದ ರಮ್ಯಾ ಚೆಲುವಮೂರ್ತಿಗೆ ಅಪ್ರತಿಮ ಗುರು ಪುರಸ್ಕಾರ – ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದರು.

ಬೆಂಗಳೂರು ಫೆ.22

ಇತ್ತೀಚಿಗೆ ಫೆಬ್ರವರಿ 15 ರಿಂದ 17 ರವರೆಗೆ ನಡೆದ ರಾಜಸ್ಥಾನದ ಜೈಪುರ್ ನಲ್ಲಿ ಬೆಂಗಳೂರಿನ ಚಿಗುರು ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯವರ ಸಹಯೋಗ ದೊಂದಿಗೆ ನಾಟ್ಯ ಮಿಲನ – 2025 ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ರಾಗ ಭೈರವ ನಾಟ್ಯ ಕಲಾ ಕೇಂದ್ರ ಭರತ ನಾಟ್ಯಗುರು ರಮ್ಯ ಚೆಲುವಮೂರ್ತಿ ಅವರಿಗೆ ಸಂಸ್ಥೆ ವತಿಯಿಂದ ಅಪ್ರತಿಮ ಗುರು ಪುರಸ್ಕಾರ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಹರ್ಷವರ್ಧನ್, ಕೃತಿಕ, ಗಾನಶ್ರೀ, ನಮ್ರತಾ, ಮಿಂಚು, ಪ್ರಕೃತಿ, ಚೈತನ್ಯ, ಸಹ ಭಾಗವಹಿಸಿದ್ದರು. ಬೆಸ್ಟ್ ಪರ್ಫಾರ್ಮೆನ್ಸ್ ರಾಷ್ಟ್ರ ಪ್ರಶಸ್ತಿ ಪಡೆದು ಕೊಂಡರು. ಪ್ರಶಸ್ತಿ ಸ್ವೀಕರಿಸಿ ಭರತನಾಟ್ಯ ಗುರು ಶ್ರೀಮತಿ ರಮ್ಯ ಚೆಲುವ ಮೂರ್ತಿ ಮಾತನಾಡಿ ಪ್ರಶಸ್ತಿ ಹಾಗೂ ಪುರಸ್ಕಾರ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುವುದರ ಮೂಲಕ ಮುಂಬರುವ ದಿನಗಳಲ್ಲಿ ಮತ್ತಷ್ಟು ಮಗದಷ್ಟು ಸಾಧನೆ ಮಾಡುವ ಆಶಯ ಹೊಂದಿದ್ದೇನೆ. ಈ ಕಾರ್ಯಕ್ರಮದಲ್ಲಿ ಚಿಗುರು ಕಲ್ಚರ್ ಅಂಡ್ ಚಾರಿಟಬಲ್ ಟ್ರಸ್ಟ್ ನ ಮುಖ್ಯಸ್ಥರು ಪದಾಧಿಕಾರಿಗಳು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಿಬ್ಬಂದಿ ವರ್ಗದವರು ಸೇರಿದಂತೆ ಅನೇಕ ಕಲಾವಿದರು ಗಣ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button