ದೇಶ ನಾಡಿನ ಅಭಿವೃದ್ಧಿಯ ಹೊಣೆ, ಯುವ ಪೀಳಿಗೆಯ ಹೆಗಲ ಮೇಲೆ – ಸಚಿವ ಸಂತೋಷ.ಎಸ್ ಲಾಡ್.
ಕೂಡ್ಲಿಗಿ ಫೆ.23

ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ರಾಷ್ಟ್ರ ರಾಜ್ಯದ ಅಭಿವೃದ್ಧಿಯ ಹೊಣೆ, ಯುವ ಪೀಳೆಗೆಯ ಹೆಗಲ ಮೇಲಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ.ಎಸ್ ಲಾಡ್ ನುಡಿದರು. ಅವರು ಫೆ 23 ರಂದು, ಕೂಡ್ಲಿಗಿ ಶಾಸಕ ಡಾ, ಎನ್.ಟಿ ಶ್ರೀನಿವಾಸ್ ನೇತೃತ್ವದಲ್ಲಿ. ಕೂಡ್ಲಿಗಿ ಜೂನಿಯರ್ ಕಾಲೇಜ್ ಆವರಣದಲ್ಲಿ ಸಂತೋಷ.ಎಸ್ ಲಾಡ್ ಪೌಂಡೇಷನ್ ವತಿಯಿಂದ ಜರುಗಿದ, ಬೃಹತ್ ಉದ್ಯೋಗ ಮೇಳವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಯುವಕರಿಗೆ ಮಾತ್ರ ದೇಶವನ್ನು ಕಟ್ಟುವಂತಹ, ಮತ್ತು ನಿಭಾಯಿಸುವಂತಹ ಹಾಗೂ ಅಭಿವೃತ್ತಿಯತ್ತ ಕೊಂಡೊಯ್ಯುವ ಶಕ್ತಿ ಇದೆ. ಯುವ ಪೀಳಿಗೆ ದೇಶದ ಅಭಿವೃದ್ಧಿಗಾಗಿ ಏಳಿಗೆಗಾಗಿ, ಯುವಕರು ಏನು ಮಾಡಬೇಕು!?, ಮತ್ತು ಹೇಗಿರಬೇಕು.!? ಎನ್ನುವ ಕುರಿತು ಚಿಂತನೆಗಳಾಗ ಬೇಕಿದೆ. ಆದ್ದರಿಂದ ವಾಟ್ಸಪ್ ಯುನಿವರ್ಸಿಟಿಯಲ್ಲಿ ಬರುವಂತಹ ಮಾಹಿತಿಗಳ ಬಗ್ಗೆ, ಯುವ ಪೀಳಿಗೆ ಹೆಚ್ಚು ತಲೆ ಕೆಡಿಸಿ ಕೊಳ್ಳಬಾರದು. ಅಮೂಲಚಾದ ಸಮಯವನ್ನು ಉತ್ತಮ ಜೀವನ ಭವಿಷ್ಯ ಕಟ್ಟಿ ಕೊಳ್ಳುವ ನಿಟ್ಟಿನಲ್ಲಿ, ದೇಶ ನಾಡಿನ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು. ನಮ್ಮ ಸರ್ಕಾರದ 139 ಶಾಸಕರ ಪೈಕಿ, ರಾಜ್ಯ ಕಂಡ ಅತ್ಯಂತ ಕ್ರಿಯಾಶೀಲ. ಸರ್ವ ಸಮರ್ಥ ಸಮಗ್ರ ಸದೃಢ ಶಾಸಕರಲ್ಲಿ, ಕೂಡ್ಲಿಗಿ ಕ್ಷೇತ್ರದ ಡಾ, ಎನ್.ಟಿ ಶ್ರೀನಿವಾಸ್ ರವರು ಪ್ರಮುಖರಾಗಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಜನತೆ ಜನಪರ ಕಾಳಜಿಯ, ಸರಳ ಸಜ್ಜನಿಕೆಯ ಶಾಸಕರನ್ನು ಹೊಂದಿರುವುದಕ್ಕೆ ಜನತೆ ಹೆಮ್ಮೆ ಪಡಬೇಕಿದೆ ಎಂದರು.

ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು, ಸಚಿವರನ್ನು ಒಳ ಗೊಂಡಂತೆ ಎಲ್ಲರೂ ಕೂಡ ಶಾಸಕ ಡಾ, ಎನ್.ಟಿ ಶ್ರೀನಿವಾಸ್ ರವರ ಪರವಾಗಿ ಗಟ್ಟಿಯಾಗಿ ನಿಂತಿದ್ದೇವೆ. ನಾನು ಮತ್ತು ನನ್ನ ಸ್ನೇಹಿತ ಡಾ, ಎನ್.ಟಿ. ಶ್ರೀನಿವಾಸ್ ಈ ನೆಲದ ಮೇಲೆ ಇರುವವರೆಗೂ, ಸ್ನೇಹಿತರಾಗೇ ಭಾಂಧವ್ಯ ದಿಂದ ಕೂಡಿರುತ್ತೇವೆ. ನಾವೆಲ್ಲರೂ ಒಗ್ಗೂಡಿ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗೆ ಪರಸ್ಪರ, ಸಹಕಾರ ದೊಂದಿಗೆ ಜನರ ಸೇವೆಯನ್ನು ಪ್ರಾಮಾಣಿಕವಾಗಿ ನೆರವೇರಿಸುತ್ತೇವೆ. ನಾನು ನನ್ನ ಸ್ನೇಹಿತನ ಬಗ್ಗೆ ಹೊಗಳಿಕೆ ಮಾತು ಮಾತನಾಡುತ್ತಿಲ್ಲ., ಅಪ್ಪಟ ಸತ್ಯವನ್ನೇ ಹೇಳುತ್ತೇನೆ ಎಂದರು. ವೇದಿಕೆಯಲ್ಲಿ ಲೋಕಸಭಾ ಸದಸ್ಯರಾದ ಈ ತುಕಾರಾಂ, ಸಮಾಜ ಸೇವಕರಾದ ಎನ್.ಟಿ. ತಮ್ಮಣ್ಣ, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರು ಗುರು ಸಿದ್ದನಗೌಡ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಜಿಂಕಲ್ ನಾಗಮಣಿ, ಸಿ. ಉಮೇಶ್ ಪ.ಪಂ ಸದಸ್ಯರುಗಳು, ವಿವಿಧ ಜನ ಪ್ರತಿನಿಧಿಗಳು. ಸಂಡೂರು ಪುರಸಭೆ ಅಧ್ಯಕ್ಷರು, ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಉದ್ಯೋಗ ಮೇಳದಲ್ಲಿ ಸಂತೋಷ.ಎಸ್.ಲಾಡ್ ರವರ ಪೌಂಡೇಷನ್ ನ ಸಕಲ ಸಿಬ್ಬಂದಿಯವರು. ಹಾಗೂ ಶಾಸಕ ಡಾ, ಎನ್.ಟಿ ಶ್ರೀನಿವಾಸ್ ರವರ ಅಭಿಮಾನಿ ಬಳಗದವರು. DYSP ಮಲ್ಲೇಶಪ್ಪ, CPI ಸುರೇಶ ವಿ ತಳವಾರ್, PSI ಸಿ.ಪ್ರಕಾಶ್ ರವರು, ತಮ್ಮ ಸಿಬ್ಬಂದಿಯ ವರೊಂದಿಗೆ ಉಪಸ್ಥಿತರಿದ್ದು. ಮೇಳದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮ ಕರ್ತವ್ಯ ನಿಭಾಯಿಸಿದರು. ಉದ್ಯೋಗ ಮೇಳದಲ್ಲಿ ತಾಲೂಕು ಹಾಗೂ ವಿವಿಧೆಡೆಗಳಿಂದ ಅಗಮಿಸಿದ್ದ, ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ