ಶಂಕರಾ ಚಾರ್ಯರ ಅವಹೇಳನಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಖಂಡನೆ-ಅಶೋಕ ಹಾರನಹಳ್ಳಿ.

ನರೇಗಲ್ ಡಿ.10

ಸನಾತನ ಧರ್ಮದ ಸಂಸ್ಥಾಪಕ ಜಗದ್ಗುರು ಶಂಕರಾ ಚಾರ್ಯರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಪತ್ರಿಕೆ ಯೊಂದರಲ್ಲಿ ಓದಿದ್ದೇನೆ. ಶಂಕರಾ ಚಾರ್ಯರು ಈ ಜಗತ್ತಿನಲ್ಲಿ ಅಳಿದು ಹೋಗುತ್ತಿದ್ದ ಹಿಂದೂ ಧರ್ಮವನ್ನು ಕಟ್ಟಿ ನಿಲ್ಲಿಸಿದ ಮಹನೀಯರು. ಅಂತಹವರ ವಿರುದ್ಧವಾಗಿ ಇಂತಹ ಹೇಳಿಕೆ ಕೊಡುವವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯು ಬಲವಾಗಿ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ್ದ ಅವರು ನಂತರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು.ನಮ್ಮಲ್ಲಿನ ಒಳ ಪಂಗಡಗಳ ತಿಕ್ಕಾಟದಿಂದಾಗಿ ನಾವುಗಳು ಅವಸಾನದ ಅಂಚಿಗೆ ತಲುಪುತ್ತಿದ್ದೇವೆ. ಇನ್ನಾದರೂ ನಾವುಗಳು ಎಚ್ಚೆತ್ತು ಕೊಳ್ಳದೆ ಹೋದರೆ ನಮ್ಮ ಅವಸಾನಕ್ಕ ನಾವೇ ಕಾರಣವಾಗುತ್ತೇವೆ. ಅದಕ್ಕಾಗಿ ನಾವು ಒಳ ಪಂಗಡಗಳ ನಡುವಿನ ವ್ಯತ್ಯಾಸವನ್ನು ಅಲಕ್ಷಿಸಿ ಎಲ್ಲರೂ ಒಕ್ಕಟ್ಟಾಗಲು ಪ್ರಯತ್ನಿಸಿದಾಗ ಮಾತ್ರ ನಾವೇನಾದರೂ ಉದ್ಧಾರವಾಗಲು ಸಾಧ್ಯ. ಅಂತಹ ಒಂದು ಆಶಾದಾಯಕವಾದ ವಾತಾವರಣವನ್ನು ಈ ಪಟ್ಟ ಗ್ರಾಮ ನರೇಗಲ್ಲದಲ್ಲಿ ಕಂಡು ನನಗೆ ಅತೀವ ಸಂತಸವಾಗಿದೆ. ಇಲ್ಲಿನ ಬ್ರಹ್ಮ ಸಮಾಜವು ಚಿಕ್ಕದಾದರೂ ಚೊಕ್ಕ ಕಾರ್ಯಕ್ರಮಗಳ ಮೂಲಕ ಈ ನಾಡಿನ ಗಮನ ಸೆಳೆಯುತ್ತಿರುವುದಕ್ಕೆ ಅಭಿನಂದನೆಗಳು ಎಂದರು. ಬ್ರಾಹ್ಮಣ ಎಲ್ಲ ಪಂಗಡಗಳನ್ನು ಒಗ್ಗೂಡಿಸುವ ಹಿನ್ನೆಲೆಯಲ್ಲಿ ಬರುವ ಜನೇವರಿ 18 ಮತ್ತು 19 ರಂದು ಬೆಂಗಳೂರಿನಲ್ಲಿ ಬೃಹತ್ ವಿಪ್ರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ತಾವುಗಳೆಲ್ಲರೂ ಪಾಲ್ಗೊಂಡು ಅದನ್ನು ಯಶಸ್ವಿ ಮಾಡುವುದರ ಜೊತೆಗೆ ಇತರೆ ಭಾಗದಲ್ಲಿನ ವಿಪ್ರ ಬಾಂಧವರನ್ನು ಪರಿಚಯಿಸಿ ಕೊಳ್ಳಲು ಇದೊಂದು ಸುವರ್ಣ ಅವಕಾಶ. ಈ ಸಮ್ಮೇಳನಕ್ಕೆ ನಿಮ್ಮನ್ನು ಆಮಂತ್ರಿಸಲೆಂದೆ ನಾವಿಲ್ಲಿಗೆ ಬಂದಿದ್ದೇವೆ. ದಯಮಾಡಿ ಸಮ್ಮೇಳನಕ್ಕೆ ಎಲ್ಲರೂ ಬನ್ನಿರಿ ಎಂದು ಹಾರನಹಳ್ಳಿ ಹೇಳಿದರು.ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ದತ್ತಾವಧೂತ ಮಹಾರಾಜರು ಆಶೀರ್ವಚನ ನೀಡಿ ಜನೇವರಿಯಲ್ಲಿ ನಡೆಯುವ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಳ್ಳೋಣ. ಈಗಿನ ರಾಜಾಧ್ಯಕ್ಷರು ಮತ್ತು ಅವರ ತಂಡ ಸಮಾಜವನ್ನು ಸಂಘಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದನ್ನು ನಾವೆಲ್ಲರೂ ಬೆಂಬಲಿಸೋಣ ಎಂದರು.ಸಭೆಯಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ, ರಾಜ್ಯ ಪ್ರಧಾನ ಸಂಚಾಲಕರಾದ ಕಾರ್ತಿಕ ಬಾಪಟ್, ಎಸ್,ಸುಧಾಕರ ಬಾಬು ಮತ್ತು ವಿಜಯೇಂದ್ರ ನಾಡಜೋಷಿ ಹಾಗೂ ಗದಗ ಜಿಲ್ಲಾ ಬ್ರಾಹ್ಮಣ ಸಮಾಜದ ಸಂಚಾಲಕ ಶ್ರೀನಿವಾಸ ಹುಯಿಲಗೋಳರವರನ್ನು ಗುರುಗಳು ಸನ್ಮಾನಿಸಿ, ಆಶೀರ್ವದಿಸಿದರು. ಮದನ ಕುಲಕರ್ಣಿ, ರಾಮಚಂದ್ರ ಕುಲಕರ್ಣಿ, ಹರೀಶ ಕುಲಕರ್ಣಿ, ಡಾ, ಕೃಷ್ಣಾ ಕಾಳೆ, ಕಿರಣ ಕಾಳೆ, ಸೇರಿದಂತೆ ಇತರರು ಇದ್ದರು. ಅನಿತಾ ಗ್ರಾಮಪುರೋಹಿತ ಪ್ರಾರ್ಥಿಸಿದರು. ಶ್ರೀಪಾದಭಟ್ಟ ಜೋಷಿ ಸ್ವಾಗತಿಸಿದರು. ಗದಗ ಜಿಲ್ಲಾಧ್ಯಕ್ಷ ವೆಂಕಟೇಶ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ. ಜಿ. ಕೆ. ಕಾಳೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದತ್ತ ಭಕ್ತ ಮಂಡಳಿ ಕಾರ್ಯದರ್ಶಿ ರಘುನಾಥ ಕೊಂಡಿ ನಿರೂಪಿಸಿದರು. ಆದರ್ಶ ಕುಲಕರ್ಣಿ ವಂದಿಸಿದರು. ನರೇಗಲ್ಲನ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ನಿಮಿತ್ತ ಹೆಬ್ಬಳ್ಳಿ ಚೈತನ್ಯಾಶ್ರಮದ ಪ.ಪೂ ದತ್ತಾವಧೂತ ಮಹಾರಾಜರು ಬಿತ್ತಿ ಪತ್ರವನ್ನು ಬಿಡುಗಡೆ ಗೊಳಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಎಫ್.ಗೋಗೇರಿ.ತೋಟಗುಂಟಿ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button