ವಿಶ್ವ ಭಾರತಿ ಶಾಲಾ ಶಿಕ್ಷಣ ಸಂಸ್ಥೆಯಿಂದ ಜನರಿಗೆ – ಉತ್ತಮ ಸೇವೆ ಸಿಗಲಿ.
ಬೇವೂರು ಫೆ.28

ಗ್ರಾಮೀಣ ಭಾಗದಲ್ಲಿ ವಿರೇಶ ಕಲಗುಡಿ ಹಾಗೂ ಎಲ್ಲಾ ಶಿಕ್ಷಣಾಸಕ್ತರ ಸತತ ಪ್ರಯತ್ನದಿಂದ ವಿಶ್ವ ಭಾರತಿ ಶಿಕ್ಷಣ ಸಂಸ್ಥೆ ಪ್ರಭಲವಾಗಿ ಬೆಳೆದು ಸಮಾಜ ಸೇವೆಯಲ್ಲಿ ತನ್ನದೇಯಾದ ಯಶಸ್ವಿ ಕಾರ್ಯವನ್ನು ಮಾಡಲಿ ಎಂದು ಬಿಲ್ ಕೆರೂರ ಹೀರೆಮಠ ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಹೇಳಿದರು. ಬೇವೂರಿನ ವೀರಭದ್ರೇಶ್ವರ ವಿದ್ಯಾ ವರ್ಧಕ ಸಂಘದ ನೂತನ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಸಂಸ್ಥೆಯು ಉತ್ತರೋತ್ತರವಾಗಿ ಬೆಳೆದು ಜನತೆಗೆ ಉತ್ತಮ ಸೇವೆ ನೀಡಲಿ ಎಂದು ಅವರು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ನೂತನ ಶಾಲಾ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಬ.ವಿ.ವ ಸಂಘದ ಕಾರ್ಯಾಧ್ಯಕ್ಷರು ಮಾಜಿ ಶಾಸಕರಾದ ಡಾ. ವೀರಣ್ಣ ಚರಂತಿಮಠ ಸಮಾರಂಭ ಉದ್ದೇಶಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ನೀಡುವ ಕಾರ್ಯದಲ್ಲಿ ವಿಶ್ವ ಭಾರತಿ ಶಿಕ್ಷಣ ಸಂಸ್ಥೆ ಪ್ರಗತಿದಾಯಕ ಹೆಜ್ಜೆ ಇಡುತ್ತಿರುವುದು ಸಂತಸದ ಸಂಗತಿಯಾಗಿದ್ದು ಹಳ್ಳಿಗಳ ಮಕ್ಕಳ ಶೈಕ್ಷಣಿಕ ಉನ್ನತಿಗೆ ಬೇಕಾದ ಕಾರ್ಯಗಳನ್ನು ಸಂಸ್ಥೆ ಮಾಡಲಿ ಎಂದು ಹೇಳಿದರು.ಈ ಸಮಾರಂಭದಲ್ಲಿ ನಿವೃತ್ತ ಸೇನಾಧಿಕಾರಿಗಳಾದ ಮಲಕಾಜಪ್ಪ ಹರಗಬಲ್ ಸೇರಿದಂತೆ ಡಾ, ಜಗದೀಶ ಭೈರಮಟ್ಟಿ, ಡಾ, ಜಿ.ಆಯ್ ನಂದಿಕೋಲಮಠ, ಡಾ, ಎ.ಎಂ. ಗೊರಚಿಕ್ಕನವರ ಇವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಿರೇಶ ಕಲಗುಡಿ ವಹಿಸಿ ಕೊಂಡಿದ್ದರು. ಅತಿಥಿಗಳಾಗಿ ಮುತ್ತಣ್ಣ ಕಲಗುಡಿ, ಸುರೇಶ ಕೊಣ್ಣುರು, ಶಿವಾನಂದ ಗಬ್ಬೂರ ಭಾಗಿಯಾಗಿದ್ದರು. ಸಂಸ್ಥೆಯ ಸದಸ್ಯರಾದ ವೀರತಪ್ಪಗೌಡ ಗೌಡರ, ಈರಪ್ಪ ಅಕ್ಕಿ, ಶೇಖರಪ್ಪ ಹೆರಕಲ್, ಗುರುಶಿದ್ದಯ್ಯ ಮಳಿಮಠ, ವಿರುಪಾಕ್ಷಪ್ಪ ಗಿರಿಸಾಗರ, ಶಿವರಾಜ ವಾಡಕರ ಮುಂತಾದವರು ಉಪಸ್ಥಿತರಿದ್ದರು. ಮನೋಹರ ಬಡಿಗೇರ ಸ್ವಾಗತಿಸಿದರು. ವಿಜಯಾನಂದ ಕಲಗುಡಿ ನಿರೂಪಿಸಿದರು. ಗಂಗಾಧರ ಕಲಗುಡಿ ವಂದನಾರ್ಪಣೆ ನೆರವೇರಿಸಿದರು. ಸಮಾರಂಭದ ತರುವಾಯ ಸಂಜೆ 5 ಘಂಟೆಗೆ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಭಾ ಪುರಸ್ಕಾರ ಸಮಾರಂಭ, ಬೇವೂರ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಸ್ಕಾಂ ಲೈನ್ ಮೆನ್ ಗಳಿಗೆ ವಿಶೇಷ ಸನ್ಮಾನ, ವಿದ್ಯಾರ್ಥಿಗಳಿಂದ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದವು.