ಮಾನ್ವಿಯಲ್ಲಿ ನೀರಿನ ಅರವಟಿಗೆ ಉದ್ಘಾಟಿಸಿದ – ಮಾಜಿ ಸಚಿವ ಶಿವನಗೌಡ ನಾಯಕ.
ಮಾನ್ವಿ ಮಾ.02

ಸಮಾಜ ಸೇವಕ ಹನುಮಂತ ಕೋಟೆಯವರು ನಾನಾ ಸೇವೆ ಮಾಡುವ ಮೂಲಕ ಬಡವರ ಪರ ನೊಂದವರ ಪರ ಕೆಲಸ ಮಾಡುವುದರ ಜೊತೆಗೆ ಕುಡಿಯುವ ನೀರಿನ ಅರವಟಿಗೆ ಅಳವಡಿಸಿರುವುದು ಶ್ಲಾಘನೀಯ ಎಂದು ಮಾಜಿ ಸಚಿವ ಕೆ.ಶಿವನಗೌಡ ನಾಯಕ ಬಣ್ಣಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪಂಪಾ ಗಾರ್ಡನ್ ಬಳಿ ಉಚಿತ ಕುಡಿಯುವ ನೀರಿನ ಅರವಟಿಗೆಯನ್ನು ಉದ್ಘಾಟಿಸಿ ಮಾತನಾಡಿ, ಹನುಮಂತ ಕೋಟೆ ನಮಗೆ ಕರೆ ಮಾಡಿ ಈ ಕಾರ್ಯಕ್ರಮಕ್ಕೆ ಬರ ಬೇಕೆಂದು ಕೋರಿದ ಹಿನ್ನೆಲೆಯಲ್ಲಿ ಹನುಮಂತ ಕೋಟೆ ಮಾಡಿದ ಜನಪರ ಸೇವೆ ಬಹಳಷ್ಟಿದೆ ಎಂದರು.
ಹನುಮಂತ ಕೋಟೆಯ ಚಲನ ವಲನ ನೋಡಿದರೆ ಒಂದು ರೀತಿಯಲ್ಲಿ ಆಲ್ ರೌಂಡರ್ ರೀತಿಯಲ್ಲಿ ಇದ್ದಾರೆ. ಹನುಮಂತ ಕೋಟೆ ಇದೆ ರೀತಿಯಲ್ಲಿ ನಾನಾ ಸಾಮಾಜಿಕ ಸೇವೆಯ ಕಾರ್ಯಕ್ರಮ ಮಾಡಲಿ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ