ಕೆರೆಗಳಿಗೆ ನೀರು ಹರಿಸುವಂತೆ ಅನಿರ್ದಿಷ್ಟಾವಧಿ – ಧರಣಿ ಸತ್ಯಾಗ್ರಹ.

ಹೂವಿನ ಹಿಪ್ಪರಗಿ ಮಾ.07

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿಯ ಪರಮಾನಂದ ವೃತ್ತದಲ್ಲಿ ನಡೆದ ಧರಣಿ ಸತ್ಯಾಗ್ರಹ. ಅಖಂಡ ಕರ್ನಾಟಕ ರೈತ ಸಂಘ ಹಾಗೂ ವಿವಿಧ ಹೋರಾಟ ಪರ ಸಂಘಟನೆಗಳಿಂದ ಧರಣಿ ಸತ್ಯಾಗ್ರಹ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹ ಅಖಂಡ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಮಾತನಾಡಿ ರಾಜ್ಯ ಸರ್ಕಾರ ಸೂಟ್ ಕೇಸ್ ದುಡ್ಡು ತಗೊಂಡು ಆಂದ್ರ ಪ್ರದೇಶ, ತೆಲಂಗಾಣಕ್ಕೆ ನೀರು ಬಿಟ್ಟಿದೆ ನಮ್ಮ ನೀರನ್ನು ನಮಗೆ ಬಿಡದೆ ಸರ್ಕಾರ ದುಡ್ಡಿಗಾಗಿ ನೀರನ್ನು ಮಾರಿ ಕೊಂಡಿದ್ದಾರೆ ಬೇಸಿಗೆ ಬರುತ್ತದೆ ನಮಗೆ ಕುಡಿಯುವುದಕ್ಕೆ ನೀರಿಲ್ಲ ನಮ್ಮ ದನ-ಕರಗಳಿಗೆ ಕುಡಿಯುವುದಕ್ಕೆ ನೀರು ಇಲ್ಲ ನಮ್ಮ ಜಿಲ್ಲೆಯ ಆಲಮಟ್ಟಿ ಆಣೆಕಟ್ಟಿನಿಂದ ಮತ್ತು ನಾರಾಯಣಪುರ ಜಲಾಶಯದಿಂದ ಈ ಕರ್ನಾಟಕ ಸರ್ಕಾರ ನಮಗೆ ನೀರು ಕೊಡದೆ ಹೊರ ರಾಜ್ಯಕ್ಕೆ ನೀರು ಕೊಟ್ಟಿದೆ.

ಇದು ನಮ್ಮ ರೈತರಿಗೆ ಮಾಡಿದ ಅನ್ಯಾಯ ಇದೇ ರೀತಿ ಮುಂದುವರೆದರೆ ರಾಜ್ಯ ಸರ್ಕಾರ ಈಗ ನಡೆದ ಅಧಿವೇಶನದಲ್ಲಿ ನಮ್ಮ ಸಚಿವರು, ಶಾಸಕರು ನಮ್ಮ ರೈತರ ಸಮಸ್ಯೆ ಬಗೆಹರಿಸಿ ಬೇಕು ಒಂದು ವೇಳೆ ನಮಗೆ ನ್ಯಾಯ ಕೊಡದೆ ಹೋದಲ್ಲಿ ನಾವು ಮುಂಬರುವ ದಿನಗಳಲ್ಲಿ ನಮ್ಮ ರೈತರು ವಿಧಾನ ಸೌದಕ್ಕೆ ಮುತ್ತಿಗೆ ಹಾಕ ಬೇಕಾಗುತ್ತದೆ ಎಂದರು. ಆನಂತರ K.B.J.N.L ಅಧಿಕಾರಿಗಳು ಪ್ರತಿಭಟನೆ ಮಾಡುವ ಸ್ಥಳಕ್ಕೆ ಆಗಮಿಸಿ ರೈತರ ಮನ ಒಲಿಸಿದರು. ಆನಂತರ ರೈತರು ಪ್ರತಿಭಟನೆಯನ್ನು ಹಿಂಪಡೆದರು. ಇದೇ ಸಮಯದಲ್ಲಿ ಪೊಲೀಸ್ ಇಲಾಖೆಯವರು ಸರ್ಕಾರಿ ಅಧಿಕಾರಿಗಳು ಹಲವಾರು ರೈತರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button