ರಾಘವೇಂದ್ರ ಪತ್ತಾರ್ ವಿಶ್ವಕರ್ಮ ಇವರಿಂದ ಮಧ್ಯಾಹ್ನದ ಬಿಸಿಲಿನ ಧಗೆಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ – ತಂಪಾದ ಮಜ್ಜಿಗೆ ವಿತರಣೆ.
ಕಲಕೇರಿ ಮಾ.21

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ವೀರಣ್ಣ ಪತ್ತಾರ್ ಇವರು ಸುಪುತ್ರರಾದ ರಾಘವೇಂದ್ರ. ವೀರಣ್ಣ ಪತ್ತಾರ್ ಇವರಿಂದ ಕಲಕೇರಿಯಲ್ಲಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ಸರಕಾರಿ ಹೆಣ್ಣು ಮಕ್ಕಳ ಶಾಲೆ ಹಾಗೂ ಸರಕಾರಿ ಉರ್ದು ಶಾಲೆ ಮೂರು ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಎಲ್ಲಾ ವಿದ್ಯಾರ್ಥಿಗಳಿಗೆ ಬೇಸಿಗೆಯ ಬಿಸಿಲಿನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ರಾಘವೇಂದ್ರ ವೀರಣ್ಣ ಪತ್ತಾರ್ ಇವರ ನೇತೃತ್ವದಲ್ಲಿ ಮಜ್ಜಿಗೆಯನ್ನು ವಿತರಣೆ ಮಾಡಿದರು.

ಈ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ರಾಘವೇಂದ್ರ ಪತ್ತಾರ್ ವಿಶ್ವಕರ್ಮ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಹಾಗೂ ಎಲ್ಲಾ ಶಾಲೆಯ ಮುಖ್ಯ ಗುರುಗಳು ಎಸ್.ಡಿ.ಎಮ್.ಸಿ ಯವರು ಗುರು ಮಾತೆಯವರು ಎಲ್ಲಾ ಬಿಸಿ ಊಟದ ಸಿಬ್ಬಂದಿಯವರು ಸೇರಿ ರಾಘವೇಂದ್ರ ವೀರಣ್ಣ ಪತ್ತಾರ್ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ವೀರಣ್ಣ ಪತ್ತಾರ್ ಇವರು ಬೇಸಿಗೆಯ ದಿನದಲ್ಲಿ ವಿದ್ಯಾರ್ಥಿಗಳು ಬಿಸಿಲಿನಲ್ಲಿ ಹೊರಗಡೆ ಹೋಗಬಾರದು ವಿದ್ಯಾರ್ಥಿಗಳು ಶಾಲೆಯಲ್ಲಿ ಕುಳಿತು ಪೇಪರ್ಗಳನ್ನು ಬರೆದು ಬುದ್ಧಿವಂತರಾಗ ಬೇಕು ಶಿಕ್ಷಕರ ಹೇಳಿದಂತ ಮಾರ್ಗದಲ್ಲಿ ಹೋಗಬೇಕು ಅದು ವಿದ್ಯಾರ್ಥಿಗಳ ಕರ್ತವ್ಯ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ