ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್.ಎಸ್.ಎಸ್ ಘಟಕದ ಅಡಿಯಲ್ಲಿ – ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ.
ರೋಣ ಮಾ.22

ನಗರದ ಪ್ರತಿಷ್ಠಿತ ಮಹಾ ವಿದ್ಯಾಲಯವಾದ ಕೆ.ಎಸ್.ಎಸ್ ಮಹಾವಿದ್ಯಾಲಯದಲ್ಲಿ ತಾಲೂಕ ಆರೋಗ್ಯ ಇಲಾಖೆ ರೋಣ ಹಾಗೂ ರಾಷ್ಟ್ರಿಯ ಸೇವಾ ಯೋಜನಾ ಘಟಕದ ವತಿಯಿಂದ ಏಡ್ಸ್ ಅರಿವು ಜಾಥಾ ಕಾರ್ಯಕ್ರಮದಲ್ಲಿ ಪದವಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಭೂಗೋಳ ಶಾಸ್ತ್ರ ಉಪನ್ಯಾಸಕರಾದ ಎಂ.ಎಚ್ ನಾಯ್ಕರ್ ರವರು ವಿದ್ಯಾರ್ಥಿಗಳನ್ನು 4 ತಂಡಗಳನ್ನು ಮಾಡಿದರು. ಆ ತಂಡಗಳಿಗೆ ಗಂಗಾ, ಕಾವೇರಿ, ಮಲಪ್ರಭಾ, ನೇತ್ರಾವತಿ ಎಂದು ವಿಭಜನೆ ಮಾಡಿದರು.4 ತಂಡಗಳಿಗೆ ಏಡ್ಸ್ ವಿಷಯ ಕುರಿತು 5 ಸುತ್ತುಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮದಲ್ಲಿ ಈ ಸ್ಪರ್ಧೆಯಲ್ಲಿ ನಿರ್ಣಯಕರಾಗಿ ಎಸ್.ವಿ ಸಂಕನಗೌಡ್ರ, ಬಿ,ಎಚ್ ಜಂಗನ್ನವರ, ಜ್ಯೋತಿ ಮೇಡಂ, ಕೆ.ಕೆ ಹಿರೇಕಲ್ಲಪ್ಪನವರ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕೊನೆಗೆ 3. ತಂಡಗಳನ್ನು ವಿಜೇತರಾಗಿ ಆಯ್ಕೆ ಮಾಡಲಾಯಿತು. ವಿಜೇತ ತಂಡಗಳಿಗೆ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಸಿ.ಬಿ ಪೊಲೀಸ್ ಪಾಟೀಲ್ ಹಾಗೂ ಉಪನ್ಯಾಸಕರರು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಯಿತು.ಈ ಸಮಯದಲ್ಲಿ ಕಾರ್ಯಕ್ರಮದಲ್ಲಿ ಈ ಸಮಯದಲ್ಲಿ ವೇದಿಕೆಯ ಮೇಲೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಿ.ಬಿ ಪೊಲೀಸ್ ಪಾಟೀಲ್, ಶ್ರೀಮತಿ ಎ.ಎಚ್ ನಾಯ್ಕರ್, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾಕ್ಟರ್, ಎಸ್.ಆರ್ ನದಾಫ್, ಎಸ್.ವಿ ಸಂಕನಗೌಡ್ರ, ಎಂ.ವಾಯ, ಕಿತ್ತಲಿ, ಎಂ.ಎಚ್ ನಾಯ್ಕರ್, ಶ್ರೀಮತಿ ಜ್ಯೋತಿ ಮೇಡಂ, ಎಂ.ಎಸ್ ಮಠದ, ಕೆ.ಕೆ ಹಿರೇಕಲ್ಲಪನವರ, ಎನ್.ವಿ ತುರಾಯದ, ಪ್ರಶಾಂತ್ ಇಟಗಿ, ಓಲೇಕಾರ್ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ