ಡೆಂಗ್ಯೂ ರೋಗ ತಡೆಗೆ, ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನೆ – ಮನೆ ಮನೆಗೆ ಸಮೀಕ್ಷೆ ಜನ ಜಾಗೃತಿ.

ಬೆನಕಟ್ಟಿ ಫೆ.25

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೆನಕಟ್ಟಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರ ಸಹಯೋಗದಲ್ಲಿ ಬೆನಕಟ್ಟಿ ಗ್ರಾಮದಲ್ಲಿ “ಡೆಂಗ್ಯೂ ನಿಯಂತ್ರಣ ಮುಂಜಾಗ್ರತೆ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ “ನಿಮ್ಮ ಆರೋಗ್ಯ ನಮ್ಮ ಬದ್ಧತೆ” ಸಾಂಕ್ರಾಮಿಕ ರೋಗಗಳ ತಡೆಗೆ ಕೀಟಜನ್ಯ ರೋಗಗಳ ನಿಯಂತ್ರಣ ತಡೆಗೆ ಮುಂಜಾಗ್ರತೆಯೇ ಮುಖ್ಯ. ಮುಂಜಾಗ್ರತೆ ಕ್ರಮಗಳನ್ನು ಪಾಲಿಸಿ ಆಸ್ಪತ್ರೆಗೆ ಅಲೆದಾಟ ತಪ್ಪಿಸಿ ಕೊಳ್ಳಿ ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ, ಮೆದಳು ಜ್ವರ ಆನೇಕಾಲು ರೋಗಗಳಿಂದ ತಪ್ಪಿಸಿ ಕೊಳ್ಳಲು ಸೊಳ್ಳೆ ಉತ್ಪತ್ತಿ ಲಾರ್ವಾ ತಡೆಗೆ ಕುಟುಂಬ ಸದಸ್ಯರು ಜವಾಬ್ದಾರಿ ನಿಭಾಯಿಸಬೇಕು ಮನೆ ಸುತ್ತ ಮುತ್ತ ಪರಿಸರ ಸ್ವಚ್ಛತೆ ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು, ಸೊಳ್ಳೆ ಬತ್ತಿ ಸೊಳ್ಳೆ ಪರದೆ ಬಳಸಬೇಕು ಜ್ವರ ತಲೆ ನೋವು ನಿಶಕ್ತಿ ದೇಹದ ಮೇಲೆ ದದ್ದು ಗಂಧೆಗಳು ಕಾಣಿಸಿದರೆ ಭಯ ಬೇಡ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಚಿಕಿತ್ಸೆ ಉಚಿತವಾಗಿರುತ್ತದೆ. ಡೆಂಗ್ಯೂ, ಚಿಕೂನ್ ಗುನ್ಯಾ ರೋಗಕ್ಕೆ ನಿರ್ಧಾರಿತ ಚಿಕಿತ್ಸೆಯಿಲ್ಲ. ರೋಗ ಲಕ್ಷಣಗಳ ಅನುಸಾರ ತಜ್ಞ ವೈದ್ಯರು ಚಿಕಿತ್ಸೆ ಸಲಹೆ ನೀಡುತ್ತಾರೆ. ಬೆನಕಟ್ಟಿ ಗ್ರಾಮದಲ್ಲಿ ಮೂರು ತಂಡಗಳು ರಚಿಸಿ ಲಾರ್ವಾ ಉತ್ಪತ್ತಿ ತಾಣಗಳ ಸಮೀಕ್ಷೆ ಕೀಟಜನ್ಯ ರೋಗಗಳ ತಡೆ ಮಾಹಿತಿ ಸಂಪರ್ಕ ಆರೋಗ್ಯ ಶಿಕ್ಷಣವನ್ನು ಮನೆ ಮನೆ ಭೇಟಿ ನೀಡಿ ಕುಟುಂಬ ಸದಸ್ಯರುಗಳಿಗೆ ಡೆಂಗ್ಯೂ ರೋಗ ತಡೆಗೆ, ಲಾರ್ವಾ ಉತ್ಪತ್ತಿ ತಾಣಗಳ ನಿರ್ಮೂಲನೆ ಮನೆ ಮನೆಗೆ ಸಮೀಕ್ಷೆ ಜನ ಜಾಗೃತಿ ಮೂಡಿಸಲಾಯಿತು. ಆರೋಗ್ಯ ಅರಿವು ಜನ ಜಾಗೃತಿ ಕಾರ್ಯದಲ್ಲಿ ಆರೋಗ್ಯ ಇಲಾಖೆಯ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮದ ಮುಖಂಡರು ಯುವಕರು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button